ಪಾಪ ವೆಂಕಟ್...ರಂಪಾಟ ಮಾಡಿದ್ದಕ್ಕೆ ತಿಂದ ಗೂಸಾ ಅದೆಷ್ಟೋ!

Aug 29, 2019, 9:49 PM IST

ಮಡಿಕೇರಿ[ಆ. 29]  ಚೆನ್ನೈನ ಒಡಪಳನಿ ಎನ್ನುವ ಬಡಾವಣೆಯಲ್ಲಿ ಕನ್ನಡದ ನಟ ಹುಚ್ಚ ವೆಂಕಟ್‌ ಅವರು ಹುಚ್ಚನ ರೀತಿ ತಿರುಗುತ್ತಿರುವ ದೃಶ್ಯಗಳನ್ನು ‘ರಾಂಧವ’ ಚಿತ್ರತಂಡ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡ ನಂತರ ಅವರ ರಕ್ಷಣೆ ಮಾಡಲಾಗಿತ್ತು. ಜನರು ಮತ್ತು ಅಭಿಮಾನಿಗಳಿಗೆ ಒಂದು ರೀತಿಯ ಸಹಾನುಭೂತಿಯೂ ಮೂಡಿತ್ತು. ಆದರೆ ಮಡಿಕೇರಿಯಲ್ಲಿ ಹುಚ್ಚ ವೆಂಕಟ್ ಇದೀಗ ರಂಪಾಟ ನಡೆಸಿದ್ದು ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾರೆ. ರಂಪಾಟ ನಡೆಸಿದ ವೆಂಕಟ್  ಸ್ಥಳೀಯರಿಂದ ಹಿಗ್ಗಾ ಮುಗ್ಗಾ ಥಳಿತಕ್ಕೆ ಒಳಗಾಗಿದ್ದಾರೆ.