ಅಹಂಕಾರದಿಂದ ಮೆರೆಯುತ್ತಿದ್ದ ತಾರಕಾಸುರನ ಸಂಹಾರಕ್ಕೆ ಸ್ಕಂದನ ಅವತಾರ

Jun 9, 2021, 3:22 PM IST

ತನ್ನನ್ನು ಯಾವ ರೀತಿ ಪೂಜಿಸಬೇಕು, ಪ್ರಾರ್ಥಿಸಬೇಕೆಂದು ತಾಯಿ ಆದಿಶಕ್ತಿ ಹಿಮವಂತನಿಗೆ ವಿವರಿಸುತ್ತಾಳೆ. ಮುಂದೆ ಆಕೆ ಹಿಮವಂತನ ಮಗಳು ಗೌರಿಯಾಗಿ ಹುಟ್ಟುತ್ತಾಳೆ. ಶಂಕರನ ಜೊತೆ ವಿವಾಹವಾಗುತ್ತದೆ. ಸ್ಕಂದ ಎನ್ನುವ ಮಗ ಹುಟ್ಟುತ್ತಾನೆ.  ದೇವತೆಗಳಿಗೆ ತೊಂದರೆ ಕೊಡುತ್ತಿದ್ದ ತಾರಕಾಸುರನನ್ನು ಸ್ಕಂದ ಸಂಹರಿಸುತ್ತಾನೆ. ನನ್ನನ್ನು ಯಾರೂ ಸಂಹರಿಸುವುದಕ್ಕೆ ಆಗುವುದಿಲ್ಲ ಎಂದು ಮೆರೆಯುತ್ತಿದ್ದ ತಾರಕಾಸುರ ಸ್ಕಂದನಿಂದ ಸಂಹರಿಸಲ್ಪಡುತ್ತಾನೆ. 

ಪ್ರಕೃತಿ ಸ್ವರೂಪಿಣಿಯಾದ ಶ್ರೀ ಮಾತೆಯ 5 ರೂಪಗಳಿವು