ಈ ಬಾರಿಯ ಗ್ರಹಣಕ್ಕೆ ಶನೀಶ್ವರನ ದೃಷ್ಟಿ! ಏನೆಲ್ಲ ಕಾದಿದೆ?

Oct 23, 2022, 3:00 PM IST

ಈ ಬಾರಿ ತುಲಾ ರಾಶಿಯಲ್ಲಿ ಕೇತುಗ್ರಸ್ಥ ಸೂರ್ಯಗ್ರಹಣ ಸಂಭವಿಸುತ್ತಿದೆ. ಈ ಬಗ್ಗೆ ವಿಸ್ತಾರವಾಗಿ ವರಾಹಮಿತ್ರರು ತಮ್ಮ ಗ್ರಂಥ 'ವರಾಹಸಂಹಿತೆ'ಯಲ್ಲಿ ತಿಳಿಸಿದ್ದಾರೆ. ತುಲಾ ರಾಶಿಯಲ್ಲಿ ಸೂರ್ಯಗ್ರಹಣವಾದರೆ ಉಜ್ಜಯನಿ ಭಾಗಗಳಿಗೆ ಅಂದರೆ ಭಾರತದ ಗುಜರಾತ್ ಪ್ರದೇಶಗಳಿಗೆ ತೊಂದರೆ ಎಂದು ಗ್ರಂಥದಲ್ಲಿ ತಿಳಿಸಲಾಗಿದೆ. ಆಶ್ವೀಜ ಮಾಸದಲ್ಲಿ ಗ್ರಹಣ ಸಂಭವಿಸಿದರೆ ದೇಶದ ಈಶಾನ್ಯ ಭಾಗಗಳಿಗೆ ತೊಂದರೆ ಎಂದೂ ಗ್ರಂಥ ಹೇಳುತ್ತದೆ. . ಯಾಕೆ, ಏನಾಗಬಹುದು ? ಎಂಬುದನ್ನು ಜ್ಯೋತಿಷಿಗಳಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಈ ಬಾರಿ ಗ್ರಹಣಕ್ಕೆ ಶನಿಯ ದೃಷ್ಟಿ ಇದೆ. ಶನಿಗೂ ಸೂರ್ಯನಿಗೂ ಶತ್ರುತ್ವ ಇದೆ. ಹಾಗಾಗಿ ಈ ಬಾರಿಯ ಗ್ರಹಣದ ಪರಿಣಾಮ ಏನೆಲ್ಲ ಇರಬಹುದು?