ದ್ರೌಪತಿ ಸ್ವಯಂವರದಲ್ಲಿ ದ್ರುಪದ-ಪಾಂಡವರ ಭೇಟಿ

Sep 27, 2021, 9:40 AM IST

ರಾಜರ ವಸ್ತುಗಳ ಭಾಗ, ಯುದ್ಧದ ಸಾಮಾಗ್ರಿಗಳನ್ನು ಕೊನೆಯಲ್ಲಿ ಇಟ್ಟಿದ್ದರು. ಊಟವಾದ ಮೇಲೆ ದಾಟಿಕೊಂಡು ಹೋಗಿ ಸಿಂಹಾಸನದ ಬಳಿ ಹೋಗಿ ಹೇಳದೆ ಕೇಳದೆ ಲಕ್ಷಣವಾಗಿ ಕುಳಿತರು. ಇದನ್ನು ನೋಡಿದ ದ್ರುಪದನಿಗೆ ಖುಷಿ ಆಯ್ತು. ನೀವು ಯಾರು ಎಂದು ದಯಮಾಡಿ ಹೇಳಬೇಕು ? ನೀವು ಕ್ಷತ್ರಿಯರಾ ? ವೈಶ್ಯರಾ ? ಬ್ರಾಹ್ಮಣರಾ ? ಶೂದ್ರರಾ ?

ಪಂಚಾಂಗ: ಪಿತೃಪಕ್ಷ, ಪಿತೃಕಾರ್ಯಗಳನ್ನು ಮಾಡುವುದರಿಂದ ಶೀಘ್ರಫಲ ಲಭಿಸುವುದು

ಅಥವಾ ಮಾಯಾರೂಪದಲ್ಲಿ ಓಡಾಡುವ ದೇವತೆಗಳಾ ಎಂದು ಕೇಳುತ್ತಾರೆ. ರಾಜರಿಗೆ ಸತ್ಯವೇ ಭೂಷಣ ಎನ್ನುತ್ತಾರೆ. ಯುಧಿಷ್ಠಿರ ನೀನು ಅಂದುಕೊಂಡ ಹಾಗಾಗಿದೆ, ನಾವು ಕ್ಷತ್ರಿಯರು. ಮಹಾತ್ಮ ಪಾಂಡುರಾಜನ ಮಕ್ಕಳು. ರಾಜಸಮೂಹದಲ್ಲಿ ನಿನ್ನ ಮಗಳನ್ನು ಗೆದ್ದವರು ಎನ್ನುತ್ತಾರೆ. ಇದನ್ನು ಕೇಳಿ ದ್ರುಪದ ಖುಷಿಯಾಗುತ್ತಾನೆ. ಆಮೇಲೇನಾಯ್ತು ?