ಕರ್ನಾಟಕ ವಿವಿಯಲ್ಲಿ ಇದೆಂಥಾ ಆಯ್ಕೆ ಪ್ರಕ್ರಿಯೆ?

Dec 24, 2020, 7:11 PM IST

ಧಾರವಾಡ, (ಡಿ.24): ಧಾರವಾಡದ ಕರ್ನಾಟಕ ವಿವಿಯಲ್ಲಿ ರಾಜಕಾರಣಿಗಳು ಆಡಿದ್ದೆ ಆಟನಾ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸೈನ್ಸ್ ಸೆಂಟರನ್ನ ಆರಂಭ ಮಾಡಿ ದಶಕಗಳೆ ಕಳೆದಿವೆ. ಕಳೆದ 10 ವರ್ಷದಿಂದ ಸೈನ್ಸ್ ಸೆಂಟರನಲ್ಲಿ ನಿರ್ದೇಶಕರನ್ನಾಗಿ ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ  ಸೈನ್ಸ್ ನಲ್ಲಿ ಪರಿಣಿತಿ ಹೊಂದಿದವರನ್ನ ನಿರ್ದೆಶಕರನ್ನಾಗಿ ಮಾಡಬೇಕು ಎಂಬ ನಿಯಮವಿದೆ.

ಅಯೋಧ್ಯೆ ಮಸೀದಿ ನಿರ್ಮಾಣ ಕಿರಿಕ್, ಬಿಸಿಸಿಐ ಮ್ಯಾನೇಜರ್‌ಗೆ ಕೊಕ್; ಡಿ.24ರ ಟಾಪ್ 10 ಸುದ್ದಿ!

ಆದರೆ ಇವೆಲ್ಲ‌ ನಿಯಮಗಳನ್ನ ಗಾಳಿಗೆ ತೂರಿ‌ ಈಗ ಪ್ರೌಢ ಶಾಲೆಯ‌ ಮುಖ್ಯೋಪಾಧ್ಯಾಯರನ್ನ ನಿರ್ದೆಶಕರನ್ನಾಗಿ ಆಯ್ಕೆ ಮಾಡಿ ಮತ್ತೊಂದು‌ ವಿವಾದವನ್ನ ಕವಿವಿ ಎಳೆದುಕೊಂಡಿದೆ.