Suvarna FIR : ಬಳ್ಳಾರಿ, ಬ್ಯಾಂಕ್ ದರೋಡೆಗೆ ಬಂದು ಅಮಾಯಕನ ಕೊಂದರು!

Dec 8, 2021, 6:38 PM IST

ಬಳ್ಳಾರಿ(ಡಿ. 08)   ಎಟಿಎಂ (ATM) ಸೆಕ್ಯೂರಿಟಿ ಗಾರ್ಡ್ (Murder) ಹತ್ಯೆಯಾಗುತ್ತದೆ. ಮೂರೇ ದಿನದಲ್ಲಿ ಆರೋಪಿಗಳನ್ನು ಪತ್ತೆ ಮಾಡಲಾಗುತ್ತದೆ. ಡ್ಯೂಟಿಯಲ್ಲಿ ಇದ್ದ ಎಟಿಎಂ ಸೆಕ್ಯೂರಿಟಿ ಗಾರ್ಡ್ ಹತ್ಯೆಯ ಕಹಾನಿ ಇವತ್ತಿನ (Suvarna FIR) ಎಫ್‌ಐಆರ್ ನಲ್ಲಿ...

ನಿಂತಿಲ್ಲ ಭೀಮಾ ತೀರದ ಕಾಳಗ; ರಾಜಕಾರಣದ ಕಡೆ ಮುಖ ಮಾಡಿದ್ದವ ಹೆಣವಾದ

ಹತ್ಯೆ ಮಾಡಿದ ಆರೋಪಿಗಳೆಲ್ಲರೂ ಒಂದೇ ಕುಟುಂಬದವರು. ಪೊಲೀಸರಿಗೆ ವಿಚಾರ ಗೊತ್ತಾಗಿದ್ದು ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ಮಾಡಿದ್ದಾರೆ. ಆದರೆ ಇದು ದರೋಡೆಗೆ ನಡೆದ ಕೊಲೆಯಾಗಿರಲಿಲ್ಲ ಎಂಬಂತೆ ಮೊದಲು ಕಂಡಿದೆ. ಎಟಿಎಂ ಪಕ್ಕದಲ್ಲಿ ಹಂತಕರು ಬಳಸಿದ ರಾಡ್ ಪತ್ತೆಯಾಗುತ್ತದೆ. ಬ್ಯಾಂಕ್ ದೋಚಲು ಬಂದವರು ಅಮಾಯಕ ಸೆಕ್ಯೂರಿಟಿ ಗಾರ್ಡ್ ಹತ್ಯೆ ಮಾಡಿದ್ದರು.