ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಮನೆ ಮೇಲೆ ದಾಳಿ: ಸಿಸಿಟಿವಿಯಲ್ಲಿ ಸೆರೆ

Jul 12, 2021, 4:51 PM IST

ಬೆಂಗಳೂರು, (ಜುಲೈ.12): ಮಂಡ್ಯದಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಸಂಸದೆ ಸುಮಲತಾ ಅಂಬರೀಶ್ ಸಿಡಿದೆದ್ದಿದ್ದು,ದಳಪತಿಗಳನ್ನ ಕೆರಳಿಸಿದೆ.

ರಾಕ್‌ಲೈನ್ ಮನೆ ಮುಂದೆ ಪ್ರತಿಭಟನೆ; ಜೆಡಿಎಸ್ ಕಾರ್ಯಕರ್ತರು ಪೊಲೀಸರ ವಶಕ್ಕೆ

ಇದರ ಮಧ್ಯೆ ನಿರ್ಮಾಪ ರಾಕ್‌ ಲೈನ್‌ ವೆಂಕಟೇಶ್ ಅವರು ಸುಮಲತಾ ಪರ ಮಾತನಾಡಿ, ಎಚ್‌ಡಿಕೆ ವಿರುದ್ಧ ಕಿಡಿಕಾರಿದ್ದಕ್ಕೆ ಮೊನ್ನೆ ಜೆಡಿಎಸ್ ಕಾರ್ಯಕರ್ತರು ರಾಕ್‌ಲೈನ್ ವೆಂಕಟೇಶ್‌ ಮನೆ ಮುಂದೆ ಪ್ರತಿಭಟನೆ ಮಾಡಿದ್ದರು. ಇದೀಗ ಯಾರೋ ಕಿಡಿಗೇಡಿಗಳು ಮನೆ ಮೇಲೆ ಬಾಟಲ್ ಎಸೆದು ಪರಾರಿಯಾಗಿದ್ದಾರೆ. ಆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.