ದರ್ಶನ್ ತೂಗುದೀಪ iPhone ಎಫ್‌ಎಸ್‌ಎಲ್ ರಿಪೋರ್ಟ್ ಬಂದರೆ ದೊಡ್ಡವರಿಗೂ ಸಂಕಷ್ಟ!

Aug 14, 2024, 8:00 PM IST

ಕನ್ನಡ ಚಿತ್ರರಂಗದ ನಟ ದರ್ಶನ್ ತೂಗುದೀಪ ಅವರ ರಾಕ್ಷಸ ಕೃತ್ಯದ ಬಗ್ಗೆ ಎಫ್‌ಎಸ್‌ಎಲ್ (FSL) ರಿಪೋರ್ಟ್‌ನಲ್ಲಿ ಅನಾವಣವಾಗಿದೆ. ಈವರೆಗೆ ರೇಣುಕಾಸ್ವಾಮಿ ಹತ್ಯೆಗೆ ಸಂಬಂಧಿಸಿದಂತೆ ಒಟ್ಟು ಐದು ಎಫ್‌ಎಸ್‌ಎಲ್ ರಿಪೋರ್ಟ್ ಹಾಗೂ 200 ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಟ ದರ್ಶನ್‌ಗೆ ಸಂಕಷ್ಟ ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.

ಬೆಂಗಳೂರಿನಲ್ಲಿ ನಡೆದ ರೇಣುಕಾಸ್ವಾಮಿ ಕೊಲೆಯ ಕರಾಳತೆಯ ಕಥೆಯನ್ನ FSL ವರದಿಗಳು ಬಿಚ್ಚಿಡುತ್ತಿವೆ. ಇನ್ನು ಎಲ್ಲ ಸಾಕ್ಷಿಗಳು ಲಭ್ಯ ಆಗುತ್ತಿದ್ದಂತೆ ದರ್ಶನ್ ಅಂಡ್ ಗ್ಯಾಂಗ್‌ಗೆ ಕಾನೂನು ಕುಣಿಕೆ ಹೆಚ್ಚು ಬಿಗಿ ಆಗುತ್ತಿದೆ. ಪೊಲೀಸರು ಸಂಗ್ರಹಿಸಿದ್ದ ಸಾಕ್ಷ್ಯಗಳಿಗೂ ಹಾಗೂ ಎಫ್‌ಎಸ್ಎಲ್ ವರದಿಗೂ ಸಾಮ್ಯತೆಗಳು ಕಂಡುಬರುತ್ತಿವೆ. ಈಗಾಗಲೇ ಪೊಲೀಸರಿಗೆ ಕೈಗೆ ನಾಲ್ಕು FSL ವರದಿಗಳು ಲಭ್ಯವಾಗಿವೆ. ಈ ಇನ್ನೊಂದು ವರದಿ ಮಾತ್ರ ಪೊಲೀಸರ ಕೈಗೆ ಸಿಗಬೇಕಿದೆ. ಇನ್ನು ಆ ವರದಿ ಏನಾದರೂ ಪೊಲೀಸರ ಕೈ ಸೇರಿದಲ್ಲಿ ಕೊಲೆ ಮಾಡಿದ ಆರೋಪಿಗಳನ್ನ ಬಿಟ್ಟು, ಈ ಕೇಸನ್ನು ಮುಚ್ಚಿ ಹಾಕಲು ಪ್ರಯತ್ನ ಮಾಡಿದ ಕಾಣದ ಕೈಗಳು ಹಾಗೂ ದೊಡ್ಡವರ ಹೆಸರು ಕೂಡ ಹೊರಗೆ ಬರುವ ಸಾದ್ಯತೆ ಇದೆ. 

ನಮ್ಮ ಹುಡುಗ್ರು ಮಾಡಿರೋದು, ನಾನೇನು ಮಾಡಿಲ್ಲ ಸಾರ್; ಎಸಿಪಿ ಚಂದನ್‌ಗೆ ಅವಾಜ್ ಹಾಕಿದ್ದ ನಟ ದರ್ಶನ್

ಹೈದರಾಬಾದ್ ನಗರಕ್ಕೆ ಕಳುಹಿಸಿದ್ದ ಎಲೆಕ್ಟ್ರಾನಿಕ್ ಉಪಕರಣಗಳ ಎಫ್‌ಎಸ್‌ಎಲ್  ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಈ ವರದಿ ಬಂದಲ್ಲಿ ಕೊಲೆ ಪ್ರಕರಣಕ್ಕೆ ಇನ್ನಷ್ಟು ಮಾಹಿತಿಗಳು ಲಭ್ಯವಾಗಲಿವೆ. ಈಗಾಗಲೇ ನಟ ಚಿಕ್ಕಣ್ಣ ಅವರ 164 ಹೇಳಿಕೆಯನ್ನ ಪಡೆದ ಬೆನ್ನಲ್ಲೆ, ಮತ್ತೊಬ್ಬ ನಟನ ಹೇಳಿಕೆಯನ್ನೂ ತನಿಖಾಧಿಕಾರಿಗಳು ದಾಖಲಿಸಿಕೊಂಡಿದ್ದಾರೆ. ಕೊಲೆ ಪ್ರಕರಣದ ನಡೆದ ದಿನ ನಟ ದರ್ಶನ್ ಜೊತೆಗೆ ನಟ ಯಶಸ್ ಸೂರ್ಯ ಕೂಡ ಭಾಗಿಯಾಗಿದ್ದರು. ಹೀಗಾಗಿ, ರೇಣುಕಾಸ್ವಾಮಿ ಕೊಲೆ ಕೇಸಿನ ನಟ ಸೂರ್ಯ ಅವರಿಂದಲೂ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ.