ಎದುರು ಮನೆಯ ಹುಡುಗನಿಗೆ ಮನಸೋತಿದ್ದಳು: ಜಾತ್ರೆಗೆ ಬಂದವಳನ್ನ ಕೊಂದು ಮುಗಿಸಿದ..!

May 8, 2024, 12:22 PM IST

ಬೆಂಗಳೂರು(ಮೇ.08):  ಅದು ಗಂಡು ದಿಕ್ಕಿಲ್ಲದ ಮನೆ.. ಇದ್ದಿದ್ದು ಅಮ್ಮ ಮಗಳು ಮಾತ್ರ.. ಗಂಡ ತೀರಿಹೋದ ಮೇಲೆ ಅಮ್ಮನೇ ಕಷ್ಟಪಟ್ಟು ಮಗಳನ್ನ ಸಾಕಿ, ಸಲುಹಿ ಓದಿಸುತ್ತಿದ್ಲು.. ಆದ್ರೆ ಆವತ್ತೊಂದು ದಿನ.. ಹೆತ್ತ ಅಮ್ಮನೇ ಮಗಳ ಹೆಣ ಹಾಕಿದ್ಲು... ಅಷ್ಟೇ ಅಲ್ಲ ಮಗಳ ಕಥೆ ಮುಗಿಸಿ ತಾನೂ ಆತ್ಮಹತ್ಯೆ ಮಾಡಿಕೊಳ್ಳೋದಕ್ಕೆ ಮುಂದಾಗಿದ್ಲು.. ಆದ್ರೆ ಅವಳ ಆಯಸ್ಸು ಗಟ್ಟಿ ಇತ್ತು.. ಬದುಕಿಬಿಟ್ಟಳು.. ಅಷ್ಟಕ್ಕೂ ಆ ತಾಯಿ ಮಗಳನ್ನ ಕೊಂದಿದ್ದೇಕೆ..? ಅಂಥಹ ತಪ್ಪು ಮಗಳು ಮಾಡಿದ್ದಾದ್ರೂ ಏನು..? ಆವತ್ತು ಆ ಮನೆಯಲ್ಲಿ ನಡೆದಿದ್ದಾದ್ರೂ ಏನು ಅನ್ನೋದನ್ನ ತಿಳಿದುಕೊಳ್ಳೋದೇ ಇವತ್ತಿನ ಎಫ್‌ಐಆರ್​​. 

ಆವತ್ತು ಆ ಗ್ರಾಮದಲ್ಲಿ ಜಾತ್ರೆ ಇತ್ತು... ಪ್ರತೀ ಮನೆಯಲ್ಲೂ ಹಬ್ಬದ ವಾತವರಣ.. ಎಲ್ಲಾ ಸಂಬಂಧಿಕರು, ನೆಂಟರು ಆಗಮಿಸಿದ್ರು.. ಆದ್ರೆ ಜಾತ್ರೆ ಶುರುವಾಗೋದಕ್ಕೂ ಮೊದಲೇ ಆ ಗ್ರಾಮದಲ್ಲಿ ಹೆಣ ಬಿದ್ದಿತ್ತು... ಗ್ರಾಮದ ಹೆಣ್ಣು ಮಗಳನ್ನ ಹಂತಕ ಕೊಂದು ನಾಲೆಗೆ ಎಸೆದಿದ್ದ.. ಇನ್ನೂ ಕೇಸ್​​​ನ ತನಿಖೆ ನಡೆಸಿದ ಪೊಲೀಸರಿಗೆ ಆ ಮಹಿಳೆಯನ್ನ ಕೊಂದಿದ್ದು ಆಕೆಯ ಗಂಡನೇ ಅನ್ನೋದು ಗೊತ್ತಾಗಿತ್ತು.. ಅಷ್ಟಕ್ಕೂ ತಾಳಿ ಕಟ್ಟಿದ ಹೆಂಡತಿಯನ್ನೇ ಆ ಪಾಪಿ ಗೊಂಡ ಕೊಂದಿದ್ದೇಕೆ ಗೊತ್ತಾ..? ಮುನಿಸಿಕೊಂಡು ಹೋದವಳು ವಾಪಸ್​​ ಮನೆಗೆ ಬರಲಿಲ್ಲ ಅಂತ.

ಮದುವೆಯಾಗಿ 8 ತಿಂಗಳಿಗೇ ಅವಳು ಬೇಡವಾಗಿದ್ಲು..! ಅವಳ ಕಥೆ ಮುಗಿಸಿ ಬಾಮೈದನಿಗೆ ಚಾಲೆಂಜ್​ ಹಾಕಿದ..!

ಎಷ್ಟು ಹೇಳಿದ್ರು ವಾಪಸ್ ಮನೆಗೆ ಬರಲಿಲ್ಲ ಎಂಬ ಸಿಟ್ಟಿಗೆ ಪ್ರೀತಿಸಿ ಮದುವೆಯಾಗಿದ್ದ ಹೆಂಡತಿಯನ್ನ ಹತ್ಯೆ ಮಾಡಿ ಚರಣ್ ಪೋಲೀಸರಿಗೆ ಅತಿಥಿಯಾಗಿದ್ದಾನೆ. ನೂರಾರು ಕನಸು ಹೊತ್ತಿದ್ದ ಮೇಘನಾ ಪ್ರೀತಿಸಿದವನ ಮಚ್ಚಿನೇಟಿಗೆ  ಬಲಿಯಾಗಿದ್ದಾಳೆ.