Suvarna FIR: ಮಧ್ಯರಾತ್ರಿ ಹೆಣದ ಜೊತೆ ಜರ್ನಿ: ಅಪಘಾತದಿಂದ ಬಯಲಾಯ್ತು ಕೊಲೆ ರಹಸ್ಯ!

May 13, 2022, 6:47 PM IST

ಬೆಂಗಳೂರು (ಮೇ. 13): ಅವರು ಅನಾಥರು... ದಿಕ್ಕಿಲ್ಲದವರೆಲ್ಲಾ ಸೇರಿಕೊಂಡು ಕುಟುಂಬದಂತಿದ್ರು. ಆದ್ರೆ ಅದೇ ಕುಟುಂಬದಲ್ಲಿದ್ದ ಒಬ್ಬಳನ್ನ ಆಶ್ರಯ ಕೊಟ್ಟವರೇ ಕೊಂದು ಹಾಕಿದ್ರು. ಅಷ್ಟೇ ಅಲ್ಲ ಕೊಂದ ನಂತರ ಅನಾಥ ಶವವನ್ನಾಗಿಸಿ ಕೈ ತೊಳೆದುಕೊಳ್ಳಲು ಪ್ಲಾನ್ ಮಾಡಿದ್ರು. ಆದ್ರೆ ಮಾಡಿದ ಪಾಪ ಬಿಡಬೇಕಲ್ಲ, ದೇವರಿಗೆ ಅನಾಥರಾದರೇನು..? ಶ್ರಿಮಂತರಾದ್ರೇನು, ಮಾಡಿದ ಪಾಪಕ್ಕೆ ಇಲ್ಲೇ ಅನುಭವಿಸಬೇಕು ಎಂದು ನಿರ್ಧರಿಸಿಬಿಟ್ಟಿದ್ದ ಅನಿಸುತ್ತೆ. 

ಇದನ್ನೂ ಓದಿ: ಕುಡುಕ ಗಂಡ ಹೆಂಡತಿಯ ಹೆಣ ಮಲಗಿಸಿದ, ಪಾಪ ಪ್ರಜ್ಞೆಯಲ್ಲಿ ನೇಣಗೆ ಶರಣಾದ!

ಶವದ ಜೊತೆಗೆ ಕೊಂದವರೂ ಪೊಲೀಸರ (Police) ಮುಂದೆ ನಿಲ್ಲುವಂತೆ ಆಗಿಬಿಟ್ಟಿತ್ತು. ಹೀಗೆ ಮಾಡಿದ ಪಾಪವನ್ನ ಮುಚ್ಚಿಹಾಕಲು ಹೋಗಿ ಕೊನೆಗೆ ಪೊಲೀಸರಿಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ರೋಚಕ ಮರ್ಡರ್ ಮಿಸ್ಟರಿ (Murder Mystery) ಕಥೆಯೇ ಇವತ್ತಿನ ಎಫ್.ಐ.ಆರ್ (Suvarna FIR)