ಲಂಕಾ ದಹನಕ್ಕೆ ವಿರಾಟ್ ಕೊಹ್ಲಿ ಪಡೆ ರೆಡಿ..!

Jan 10, 2020, 3:52 PM IST

ಪುಣೆ(ಜ.10): ಭಾರತ-ಶ್ರೀಲಂಕಾ ತಂಡಗಳ ನಡುವಿನ ಮೂರನೇ ಹಾಗೂ ಅಂತಿಮ ಟಿ20 ಪಂದ್ಯಕ್ಕೆ ಪುಣೆ ಸಜ್ಜಾಗಿದೆ. ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು. ಇನ್ನು ಎರಡನೇ ಪಂದ್ಯವನ್ನು ವಿರಾಟ್ ಪಡೆ ಅನಾಯಾಸವಾಗಿ ಗೆಲುವಿನ ನಗೆ ಬೀರಿತ್ತು.

ಪುಣೆಯಲ್ಲಿಂದು ಇಂಡೋ-ಲಂಕಾ ನಿರ್ಣಾಯಕ ಟಿ20 ಕದನ

ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ, ಲಂಕಾವನ್ನು ಮಣಿಸಿ ಎರಡನೇ ಗೆಲುವಿನ ಲೆಕ್ಕಾಚಾರದಲ್ಲಿದೆ. ಇನ್ನು ಲಸಿತ್ ಮಾಲಿಂಗ ನೇತೃತ್ವದ ಲಂಕಾ, ಭಾರತಕ್ಕೆ ಆಘಾತ ನೀಡಿ ಸರಣಿ ಸಮಬಲ ಮಾಡಿಕೊಳ್ಳುವತ್ತ ಚಿತ್ತ ನೆಟ್ಟಿದೆ.

ಮೂರನೇ ಪಂದ್ಯದಲ್ಲಿ ಉಭಯ ತಂಡಗಳ ಬಲಾಬಲ ಹೇಗಿದೆ. ಮೂರನೇ ಪಂದ್ಯ ಹೇಗಿರಲಿದೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...