Coronavirus Karnataka

ಕೊರೋನಾ ಮನೆ ಬಾಗಿಲಿಗೆ ಬಂದ್ರೂ ಕಲಬುರಗಿ ಮಂದಿಗೆ ಭಯವೇ ಇಲ್ಲ!

Apr 4, 2020, 2:41 PM IST

ಕಲಬುರಗಿ(ಏ.04): ಲಾಕ್‌ಡೌನ್‌ ಮಧ್ಯೆಯೂ ಜನರು ತರಕಾರಿ ಖರೀದಿಗೆ ಮುಗಿಬಿದ್ದ ಘಟನೆ ನಗರದ ಸುಲ್ತಾನಪೂರದ ಎಪಿಎಂಸಿಯಲ್ಲಿ ಇಂದು(ಶನಿವಾರ) ನಡೆದಿದೆ. ಕೊರೋನಾ ವೈರಸ್‌ ಅನ್ನು ಹೊಡೆದೋಡಿಸಲು ಜನರು ಗುಂಪು ಗುಂಪಾಗಿ ಸೇರಬೇಡಿ ಎಂದು ಸರ್ಕಾರ ಸಾಕಷ್ಟು ಮನವಿ ಮಾಡಿಕೊಂಡಿದೆ.

ಬೆಳಗಾವಿಯಲ್ಲಿ 3 ಕೊರೋನಾ ಪಾಸಿಟೀವ್ ಪತ್ತೆ; ಜಿಲ್ಲಾಡಳಿತಕ್ಕೆ ಟ್ರಾವೆಲ್ ಹಿಸ್ಟರಿ ಟೆನ್ಷನ್!

ಆದರೆ, ಇಲ್ಲಿನ ಜನರು ಮಾತ್ರ ಸರ್ಕಾರದ ಆದೇಶಗಳನ್ನ ಗಾಳಿಗೆ ತೂರಿ ತಮಗೆ ಹೇಗೆ ಬೇಕೋ ಹಾಗೆ ತರಕಾರಿ ಖರೀದಿಯಲ್ಲಿ ನಿರತರಾಗಿದ್ದಾರೆ. ಇವರಿಗೆ ಕೊರೋನಾ ಬಗ್ಗೆ ಭಯವೇ ಇಲ್ಲವೇನೋ ಎಂಬಂತೆ ಸಾಮಾಜಿಕ ಅಂತರ ಪಾಲಿಸದೆ ಓಡಾಡುತ್ತಿದ್ದಾರೆ.