ಕೊಪ್ಪಳದ ಗವಿಮಠ ಜಾತ್ರೆ: ಎರಡೇ ದಿನದಲ್ಲಿ 5 ಲಕ್ಷ ಭಕ್ತರಿಂದ ಪ್ರಸಾದ ಸ್ವೀಕಾರ

Kannadaprabha News   | Asianet News
Published : Jan 15, 2020, 08:56 AM IST
ಕೊಪ್ಪಳದ ಗವಿಮಠ ಜಾತ್ರೆ: ಎರಡೇ ದಿನದಲ್ಲಿ 5 ಲಕ್ಷ ಭಕ್ತರಿಂದ ಪ್ರಸಾದ ಸ್ವೀಕಾರ

ಸಾರಾಂಶ

ತಲಾ 200 ಕ್ವಿಂಟಲ್ ಅಕ್ಕಿ, ಮಾದಲಿ, 7.5 ಕ್ವಿಂಟಲ್ ತುಪ್ಪ, 3000 ಲೀಟರ್ ಹಾಲು ಬಳಕೆ| 10 ಕ್ವಿಂಟಲ್ ಉಪ್ಪಿನಕಾಯಿ ಬಳಕೆ| ತಡರಾತ್ರಿ 2 ಗಂಟೆವರೆಗೂ ಪ್ರಸಾದ ವಿತರಣೆ|

ಕೊಪ್ಪಳ(ಜ.15): ದಾಸೋಹಕ್ಕೆ ಹೆಸರಾದ ದಕ್ಷಿಣ ಭಾರತದ ಕುಂಭಮೇಳ ಖ್ಯಾತಿಯ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದಲ್ಲಿ ಕೇವಲ 2 ದಿನದಲ್ಲಿ ಪ್ರಸಾದ ಸ್ವೀಕರಿಸಿದ ಭಕ್ತರ ಸಂಖ್ಯೆ 5 ಲಕ್ಷ. ಎರಡೂ ದಿನವೂ ಮುಂಜಾನೆ 9 ಗಂಟೆಗೆ ಆರಂಭವಾದ ದಾಸೋಹ ಸೇವೆ ಮುಗಿದಿದ್ದು ಮಧ್ಯರಾತ್ರಿ 2 ಗಂಟೆಯ ಬಳಿಕವೇ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಎರಡು ದಿನದಲ್ಲಿ ಪ್ರಸಾದ ಸ್ವೀಕರಿಸಿದ ಭಕ್ತರ ಸಂಖ್ಯೆ ಲಕ್ಷಕ್ಕೂ ಅಧಿಕ ಎನ್ನಲಾಗಿದೆ. ದಾಸೋಹದಲ್ಲಿ ಎರಡೇ ದಿನದಲ್ಲಿ 200 ಕ್ವಿಂಟಲ್ ಮಾದಲಿ (ಸಿಹಿ ಪದಾರ್ಥ), 200 ಕ್ವಿಂಟಲ್ ಅಕ್ಕಿ ಅನ್ನ ಬಳಕೆಯಾಗಿದೆ. ಇದರ ಜೊತೆ 3 ಸಾವಿರ ಲೀಟರ್ ಹಾಲು, 7.5 ಕ್ವಿಂಟಲ್ ತುಪ್ಪ, ಸುಮಾರು 40 ಕ್ವಿಂಟಲ್ ತರಕಾರಿ, 35 ಕ್ವಿಂಟಲ್ ದಾಲ್, 12 ಕೊಪ್ಪರಿಗೆ ಸಾಂಬಾರು, 8 ಕ್ವಿಂಟಲ್ ಪುಟಾಣಿ ಚಟ್ನಿ, 10 ಕ್ವಿಂಟಲ್ ಉಪ್ಪಿನಕಾಯಿ ಹಾಗೂ 6 ಕ್ವಿಂಟಲ್ ಕೆಂಪು ಚಟ್ನಿಯನ್ನು ಪ್ರಸಾದ ಭೋಜನದ ರೂಪದಲ್ಲಿ ನೀಡಲಾಗಿದೆ. ಇದಲ್ಲದೆ ನಾಲ್ಕೆದು ಲಕ್ಷ ರೊಟ್ಟಿ ಸಹ ಬಳಕೆಯಾಗಿವೆ.ಇಷ್ಟೊಂದು ದವಸ, ಧಾನ್ಯಗಳು, ಬೇಳೆಕಾಳುಗಳು, ತರಕಾರಿ ಬಳಕೆ ಯಾಗಿದ್ದು ಸುಮಾರು 5 ಲಕ್ಷ ಜನ ಭಕ್ತರು ಪ್ರಸಾದ ಸ್ವೀಕರಿಸಿದ್ದಾರೆ ಎಂದು ಅಂದಾಜು ಮಾಡಲಾಗಿದೆ. 

ತಡ ರಾತ್ರಿವರೆಗೂ ಪ್ರಸಾದ: 

ಜಾತ್ರೆಯ ಮಹಾ ದಾಸೋಹ ಮಂಟಪದಲ್ಲಿ ರಾತ್ರಿ 2 ಗಂಟೆಯ ವರೆಗೂ ಪ್ರಸಾದ ವಿತರಣೆ ಮಾಡಲಾಗಿದೆ. ಮಧ್ಯರಾತ್ರಿಯ ವೇಳೆಯಲ್ಲೂ ಸುಮಾರು ಅರ್ಧ ಕಿ.ಮೀ. ಸರದಿ ಇತ್ತು. ಸೋಮವಾರ ರಾತ್ರಿ 2 ಗಂಟೆಯವರೆಗೂ ಪ್ರಸಾದ ವಿತರಿಸಲಾಗಿತ್ತು. ಇನ್ನೇನು ಪ್ರಸಾದ ವಿತರಣೆ ಮುಗಿಸಲಾಗಿತ್ತು. ಆ ಸಂದರ್ಭದಲ್ಲಿ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳ ಬಳಿ ಆಗಮಿಸಿದ 15 ಭಕ್ತರಿಗೆ 2.30 ಕ್ಕೆ ಮತ್ತೆ ಪ್ರಸಾದ ವಿತರಿಸಲಾಯಿತು. 

ಗವಿಶ್ರೀ ಮಲಗಿದ್ದೇ 3 ಗಂಟೆಗೆ: 

ದಾಸೋಹ, ಪ್ರಸಾದ ವ್ಯವಸ್ಥೆಯೆಲ್ಲ ಪೂರೈಸಿ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಮಧ್ಯ ರಾತ್ರಿ 1.30 ಕ್ಕೆ ಗುಡ್ಡ ಮೇಲೆ ಹೋಗಿದ್ದಾರೆ. ಪೂಜೆ, ಪ್ರಸಾದ ಮುಗಿಸಿ, ಬಂದ ಭಕ್ತರನ್ನು ಮಾತನಾಡಿಸಿ ಅವರಿಗೆ ಪ್ರಸಾದ ಕೊಡಿಸಿ ಮಲಗುವಾಗ 3 ಗಂಟೆ ಆಗಿದೆ. ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ಮುಂಜಾನೆ 4 ಕ್ಕೆಲ್ಲ ಮತ್ತೆ ಎದ್ದಿದ್ದಾರೆ. ಎದ್ದು, ಬೆಳಗಿನ ಕರ್ಮಾದಿಗಳನ್ನು ಪೂರ್ಣಗೊಳಿಸಿ, ಪುನಃ ಜಾತ್ರೆಯ ಆವರಣಕ್ಕೆ ನಸುಕಿನಲ್ಲಿಯೇ ಆಗಮಿಸಿದ್ದಾರೆ.
ಜಾತ್ರೆಯ ದಾಸೋಹದ ಎರಡೇ ದಿನದಲ್ಲಿ 200 ಕ್ವಿಂಟಲ್ ಅಕ್ಕಿ, 200 ಕ್ವಿಂಟಲ್ ಮಾದಲಿ ಬಳಕೆಯಾಗಿದ್ದು, ಸುಮಾರು 4.5 -5 ಲಕ್ಷ ಭಕ್ತರು ಪ್ರಸಾದ ಸ್ವೀಕರಿಸಿರಬಹುದು ಎಂದು ಅಂದಾಜಿಸಲಾಗಿದೆ. ಇದು ಇನ್ನೂ ಅಧಿಕನೂ ಇರಬಹುದು ಎಂದು ಉಸ್ತುವಾರಿ ಪ್ರಕಾಶ ಚಿನಿವಾಲರ ಹೇಳಿದ್ದಾರೆ. 

ಪ್ರಸಾದಕ್ಕೆ ಇದುವರೆಗೂ 7.5 ಕ್ವಿಂಟಲ್ ತುಪ್ಪ, 3 ಸಾವಿರ ಲೀಟರ್ ಹಾಲು ಬಳಕೆಯಾಗಿದೆ. ಹಗಲು-ರಾತ್ರಿ ಭಕ್ತರೇ ಸ್ವಯಂಪ್ರೇರಿತವಾಗಿ ಬಾಣಸಿಗರಂತೆ ಕೆಲಸ ಮಾಡುತ್ತಿದ್ದಾರೆ ಎಂದು ಉಸ್ತುವಾರಿ ರಾಮನಗೌಡ ತಿಳಿಸಿದ್ದಾರೆ. 
 

PREV
click me!

Recommended Stories

ಡಿವೈಡರ್‌ನಿಂದ ಹಾರಿ KSRTC ಬಸ್‌ಗೆ ಡಿಕ್ಕಿಯಾದ ಕಾರ್, ಮೂರು ಸಾವು ಚೆಲ್ಲಾಪಿಲ್ಲಿಯಾದ ಮೃತದೇಹಗಳು
ಸರ್ಕಾರಿ ಶಾಲೆ ಟಾಯ್ಲೆಟ್‌ ಸ್ವಚ್ಛತೆಗೆ ಉದ್ಯಮಿ ನೆರವು