ಭಾರತ ಜಲಸೀಮೆಗೆ ಪ್ರವೇಶ ಮಾಡಿದ್ದ ಚೀನಾದ ಹಡಗು

Published : Dec 04, 2019, 09:28 AM IST
ಭಾರತ ಜಲಸೀಮೆಗೆ ಪ್ರವೇಶ  ಮಾಡಿದ್ದ ಚೀನಾದ ಹಡಗು

ಸಾರಾಂಶ

ಚೀನಾ ಸೇನೆಯ ಹಡಗೊಂದು ಕಳೆದ ಸೆಪ್ಟೆಂಬರ್‌ನಲ್ಲಿ ಅಕ್ರಮವಾಗಿ ಭಾರತದ ಜಲಸೀಮೆ ಪ್ರವೇಶಿಸಿದ್ದ ಘಟನೆ ನಡೆದಿದ್ದ ಘಟನೆ ತಡವಾಗಿ ಬಹಿರಂಗವಾಗಿದೆ. ಭಾರತದ ನೌಕಾಪಡೆಯು ಇದನ್ನು ಗಮನಿಸಿ ಎಚ್ಚರಿಕೆ ನೀಡಿದ ನಂತರ ಚೀನಾ ಹಡಗು ವಾಪಸಾಗಿದೆ.

ನವದೆಹಲಿ (ಡಿ. 04): ಚೀನಾ ಸೇನೆಯ ಹಡಗೊಂದು ಕಳೆದ ಸೆಪ್ಟೆಂಬರ್‌ನಲ್ಲಿ ಅಕ್ರಮವಾಗಿ ಭಾರತದ ಜಲಸೀಮೆ ಪ್ರವೇಶಿಸಿದ್ದ ಘಟನೆ ನಡೆದಿದ್ದ ಘಟನೆ ತಡವಾಗಿ ಬಹಿರಂಗವಾಗಿದೆ. ಭಾರತದ ನೌಕಾಪಡೆಯು ಇದನ್ನು ಗಮನಿಸಿ ಎಚ್ಚರಿಕೆ ನೀಡಿದ ನಂತರ ಚೀನಾ ಹಡಗು ವಾಪಸಾಗಿದೆ.

ಇದು ‘ಶಿ ಯಾನ್‌ 1’ ಹೆಸರಿನ ಚೀನಾ ಸೇನೆಯ ಸಂಶೋಧನಾ ಹಡಗು ಆಗಿದ್ದು, ಅಂಡಮಾನ್‌-ನಿಕೋಬಾರ್‌ ದ್ವೀಪದ ಸಮೀಪ ಇರುವ ಭಾರತಕ್ಕೆ ಸೇರಿದ ಆರ್ಥಿಕ ಜಲ ವಲಯಕ್ಕೆ ಪ್ರವೇಶಿಸಿ ಸಮುದ್ರದಾಳದಲ್ಲಿ ಏನಿದೆ ಎಂಬ ಸಂಶೋಧನೆ ನಡೆಸುತ್ತಿತ್ತು.

ಭಾರತಕ್ಕೆ ಬೆದರಿ ಫೋನ್‌ ಬಳಕೆ ಬಿಟ್ಟ ದಾವೂದ್‌!

ಭಾರತದ ಜಲವಲಯ ಪ್ರವೇಶಿಸಬೇಕು ಎಂದರೆ ಅದಕ್ಕೆ ಭಾರತೀಯ ನೌಕಾಪಡೆಯ ಅನುಮತಿ ಬೇಕು. ಆದರೆ ಅನುಮತಿ ಪಡೆಯದೇ ಈ ಹಡಗು ಭಾರತದ ಆರ್ಥಿಕ ಜಲವಲಯ ಪ್ರವೇಶಿಸಿದ್ದ ಕಾರಣ ನೌಕಾಪಡೆಯು ಎಚ್ಚರಿಕೆ ನೀಡಿತು. ಬಳಿಕ ಚೀನಾ ಹಡಗು ಅಲ್ಲಿಂದ ನಿರ್ಗಮಿಸಿತು ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್‌ ಕರಮ್‌ಬೀರ್‌ ಸಿಂಗ್‌ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ವಿಶ್ವಸಂಸ್ಥೆಯ ನಿಯಮದ ಪ್ರಕಾರ, ಒಂದು ದೇಶವು ತನ್ನ ಕರಾವಳಿ ತೀರದಿಂದ 200 ನಾಟಿಕಲ್‌ ಮೈಲು ದೂರದವರೆಗೆ ಸಮುದ್ರದ ಮೇಲೆ ಹಕ್ಕು ಹೊಂದಿರುತ್ತದೆ. ಇದಕ್ಕೆ ಜಲ ಆರ್ಥಿಕ ವಲಯ ಎಂದು ಕರೆಯುತ್ತಾರೆ. ಈ 200 ನಾಟಿಕಲ್‌ ಮೈಲು ಜಲವಲಯದ ವ್ಯಾಪ್ತಿಯಲ್ಲಿ ಮೀನುಗಾರಿಕೆ, ಉತ್ಖನನ ನಡೆಸಬಹುದು ಹಾಗೂ ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ ಮಾಡಬಹುದು.

ರಾಹುಲ್‌ರಂಥದ್ದೇ ಕಾರಲ್ಲಿ ಪ್ರಿಯಾಂಕ ಮನೆಗೆ ಅಪರಿಚಿತರು!

ಹಿಂದೂ ಮಹಾಸಾಗರ ವಲಯದಲ್ಲಿ ಚೀನಾದ 7-8 ಹಡಗುಗಳು ಯಾವಾಗಲೂ ಸಂಚರಿಸುತ್ತ ಸಮುದ್ರದ ಆಳದಲ್ಲಿ ಏನಿವೆ ಎಂಬ ಸಂಶೋಧನೆ ನಡೆಸುತ್ತಿರುತ್ತವೆ. ಇವು ಭಾರತೀಯ ಜಲಸೀಮೆ ಪ್ರವೇಶಿಸದಂತೆ ನೌಕಾಪಡೆ ಸದಾ ಹದ್ದಿನ ಕಣ್ಣಿಟ್ಟಿರುತ್ತದೆ ಎಂದು ಅಡ್ಮಿರಲ್‌ ಸಿಂಗ್‌ ಹೇಳಿದರು.

ಹಿಂದೂ ಮಹಾಸಾಗರದಲ್ಲಿ ತನ್ನ ಅಸ್ತಿತ್ವ ಕಂಡುಕೊಳ್ಳಲು ಶ್ರೀಲಂಕಾ ಜತೆ ಚೀನಾ ಈಗಾಗಲೇ ಒಪ್ಪಂದ ಮಾಡಿಕೊಂಡು ಅಲ್ಲಿನ ಒಂದು ಬಂದರನ್ನು ನಿರ್ವಹಿಸುತ್ತಿದೆ. ಆದರೆ ಈ ವಲಯದಲ್ಲಿ ಚೀನಾ ಪ್ರಭಾವ ತಡೆಯಲು ಭಾರತ ಶತಾಯ-ಗತಾಯ ಯತ್ನಿಸುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ
ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳಿಂದ ಹಲ್ಲೆ: ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್