ಒಂದೇ ಒಂದು ಕಲ್ಲಂಗಡಿಗಾಗಿ ರಕ್ತಸಿಕ್ತ ಯುದ್ಧ, ಸಾವಿರಾರು ಸೈನಿಕರ ಬಲಿ: ಕಾರಣವೇನು ಗೊತ್ತಾ?

Published : Jul 31, 2022, 09:11 PM ISTUpdated : Jul 31, 2022, 09:14 PM IST
ಒಂದೇ ಒಂದು ಕಲ್ಲಂಗಡಿಗಾಗಿ ರಕ್ತಸಿಕ್ತ ಯುದ್ಧ, ಸಾವಿರಾರು ಸೈನಿಕರ ಬಲಿ: ಕಾರಣವೇನು ಗೊತ್ತಾ?

ಸಾರಾಂಶ

Matire Ki Rad: 1644 ರಲ್ಲಿ ಕೇವಲ ಒಂದು ಕಲ್ಲಂಗಡಿ ಹಣ್ಣಿಗಾಗಿ ಎರಡು ರಾಜ್ಯಗಳ ನಡುವೆ ನಡೆದ ಯುದ್ಧದ ಕೆಲ ಮಾಹಿತಿ 

ಪ್ರಪಂಚದ ಇತಿಹಾಸದಲ್ಲಿ ನಡೆದ ಅನೇಕ ಯುದ್ಧಗಳ ಬಗ್ಗೆ ನೀವು ಓದಿರಬಹುದು ಮತ್ತು ಕೇಳಿರಬಹುದು. ಭಾರತೀಯ ಇತಿಹಾಸದಲ್ಲಿ ಅನೇಕ ಯುದ್ಧಗಳು ನಡೆದಿವೆ, ಅದರ ಬಗ್ಗೆ ಅನೇಕ ಕಥೆಗಳು ಪ್ರಚಲಿತದಲ್ಲಿವೆ. ಈ ಯುದ್ಧಗಳಲ್ಲಿ ಹೆಚ್ಚಿನವು ಇತರ ರಾಜ್ಯಗಳ ಮೇಲೆ ಆಕ್ರಮಣದಿಂದಾಗಿ ನಡೆದಿವೆ. ಆದರೆ 1644 ರಲ್ಲಿ ಕೇವಲ ಒಂದು ಕಲ್ಲಂಗಡಿ ಹಣ್ಣಿಗಾಗಿ ಯುದ್ಧ ನಡೆದಿತ್ತು. ಸುಮಾರು 376 ವರ್ಷಗಳ ಹಿಂದೆ ನಡೆದ ಈ ಯುದ್ಧದಲ್ಲಿ ಸಾವಿರಾರು ಸೈನಿಕರು ಮಡಿದರು. ಈ ಯುದ್ಧದ ಬಗ್ಗೆ ಇಲ್ಲಿದೆ ಕೆಲ ಮಾಹಿತಿ 

ಒಂದೇ ಒಂದು ಹಣ್ಣಿಗಾಗಿ ನಡೆದ ಜಗತ್ತಿನ ಮೊದಲ ಯುದ್ಧವಿದು. ಈ ಯುದ್ಧವು ಇತಿಹಾಸದಲ್ಲಿ 'ಮತಿರೇ ಕಿ ರಾಡ್' (Matire ki Rad) ಎಂದು ದಾಖಲಾಗಿದೆ. ಕಲ್ಲಂಗಡಿಯನ್ನು ರಾಜಸ್ಥಾನದ ಅನೇಕ ಪ್ರದೇಶಗಳಲ್ಲಿ ಮತಿರಾ ಎಂದು ಕರೆಯಲಾಗುತ್ತದೆ ಮತ್ತು ರಾಡ್ ಎಂದರೆ ಹೋರಾಟ. ಈ ವಿಶಿಷ್ಟ ಯುದ್ಧವು 376 ವರ್ಷಗಳ ಹಿಂದೆ ಅಂದರೆ 1644 ರಲ್ಲಿ ನಡೆಯಿತು. ಕಲ್ಲಂಗಡಿಗಾಗಿ ನಡೆದ ಈ ಹೋರಾಟವು ಎರಡು ಸಂಸ್ಥಾನಗಳ ಜನರ ನಡುವೆ ನಡೆಯಿತು.

ವಾಸ್ತವವಾಗಿ ಆ ಸಮಯದಲ್ಲಿ ಬಿಕಾನೇರ್ ರಾಜಪ್ರಭುತ್ವದ ಸಿಲ್ವಾ ಗ್ರಾಮ ಮತ್ತು ನಾಗೌರ್ ರಾಜ್ಯದ ಜಖಾನಿಯನ್ ಹಳ್ಳಿಯ ಗಡಿಗಳು ಪರಸ್ಪರ ಹೊಂದಿಕೊಂಡಿದ್ದವು. ಈ ಎರಡು ಗ್ರಾಮಗಳು ಈ ರಾಜ ಸಂಸ್ಥಾನಗಳ ಕೊನೆಯ ಗಡಿಯಾಗಿತ್ತು. ಬಿಕಾನೇರ್ ರಾಜ್ಯದ ಗಡಿಯಲ್ಲಿ ಈ ಕಲ್ಲಂಗಡಿ ಗಿಡವನ್ನು ನೆಡಲಾಗಿತ್ತು ಆದರೆ ಕಲ್ಲಂಗಡಿ ಬಳ್ಳಿ ಹಬ್ಬಿ ನಾಗೌರ್ ರಾಜ್ಯದ ಗಡಿಯಲ್ಲಿ ಹಣ್ಣು ಬೆಳೆದಿತ್ತು. ಇದೇ ಈ ಎರಡು ರಾಜ್ಯಗಳ ನಡುವೆ ಯುದ್ಧಕ್ಕೆ ಕಾರಣವಾಯಿತು.

ಎರಡು ರಾಜ್ಯಗಳ  ನಡುವೆ ರಕ್ತಸಿಕ್ತ ಯುದ್ಧ: ಸಿಲ್ವಾ ಗ್ರಾಮದ ನಿವಾಸಿಗಳು ಬಳ್ಳಿ ತಮ್ಮ ನೆಲದಲ್ಲಿದೆ ಹೀಗಾಗಿ ಹಣ್ಣಿನ ಮೇಲೆ ತಮ್ಮ ಹಕ್ಕು ಇದೆ ಎಂದು ಹೇಳಿದರೇ ಇತ್ತ ನಾಗೌರ್ ಜನರು ತಮ್ಮ ಗಡಿಯಲ್ಲಿ ಹಣ್ಣು ಬೆಳೆದಿದೆ ಹೀಗಾಗಿ ಹಣ್ಣು ನಮ್ಮದು ಎಂದು ಹೇಳಿದರು. ಹೀಗಾಗಿ ಈ ಹಣ್ಣಿನ ಮೇಲಿನ ಹಕ್ಕಿಗಾಗಿ ಎರಡೂ ರಾಜ್ಯಗಳಲ್ಲಿ ಆರಂಭವಾದ ಹೋರಾಟ ರಕ್ತಸಿಕ್ತ ಯುದ್ಧದ ರೂಪ ಪಡೆಯಿತು.

ಮಿಲಿಟರಿ ವ್ಯವಹಾರಗಳಲ್ಲಿನ ಕ್ರಾಂತಿ ಹಾಗೂ ತಲೆಮಾರುಗಳ ಯುದ್ಧ ತಂತ್ರ!

ರಾಜರಿಗಿರಲಿಲ್ಲ ಯುದ್ಧದ ಮಾಹಿತಿ: ಸಿಂಘ್ವಿ ಸುಖಮಲ್ ನಾಗೌರ್ ನ ಸೈನ್ಯವನ್ನು ಮುನ್ನಡೆಸಿದರೆ, ರಾಮಚಂದ್ರ ಮುಖಿಯಾ ಬಿಕಾನೇರ್ ನ ಸೈನ್ಯವನ್ನು ಮುನ್ನಡೆಸಿದ್ದರು ಎಂದು ಹೇಳಲಾಗುತ್ತದೆ. ಈ ಯುದ್ಧದ ಬಗ್ಗೆ ಎರಡೂ ರಾಜ್ಯಗಳ ರಾಜರಿಗೆ ತಿಳಿದಿರಲಿಲ್ಲ ಎಂಬುದು ಆಶ್ಚರ್ಯಕರ ವಿಷಯ. ಈ ಯುದ್ಧವು ನಡೆಯುತ್ತಿರುವಾಗ, ಬಿಕಾನೇರ್‌ನ ದೊರೆ ರಾಜಾ ಕರಣ್ ಸಿಂಗ್ ಪ್ರಚಾರದಲ್ಲಿದ್ದರೆ, ನಾಗೌರ್‌ನ ಆಡಳಿತಗಾರ ರಾವ್ ಅಮರ್ ಸಿಂಗ್‌ನನ್ನು ಮೊಘಲ್ ಸಾಮ್ರಾಜ್ಯದ ಸೇವೆಯಲ್ಲಿ ನಿರತರಾಗಿದ್ದರು. 

ಈ ಇಬ್ಬರೂ ರಾಜರು ಮೊಘಲ್ ಸಾಮ್ರಾಜ್ಯದ ಅಧಿಪತ್ಯವನ್ನು ಒಪ್ಪಿಕೊಂಡಿದ್ದರು. ಈ ಯುದ್ಧದ ಬಗ್ಗೆ ಇಬ್ಬರೂ ರಾಜರಿಗೆ ತಿಳಿದಾಗ, ಅವರು ಮೊಘಲ್ ರಾಜನಿಗೆ ಇದರಲ್ಲಿ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದರು. ಆದರೆ ಈ ವಿಷಯ ಮೊಘಲ್ ದೊರೆಗಳಿಗೆ ತಲುಪುವ ವೇಳೆಗೆ ಯುದ್ಧ ಪ್ರಾರಂಭವಾಯಿತು. ಈ ಯುದ್ಧದಲ್ಲಿ ಬಿಕಾನೆರ್ ರಾಜ್ಯವು ವಿಜಯಶಾಲಿಯಾಯಿತು, ಆದರೆ ಎರಡೂ ಕಡೆಗಳಲ್ಲಿ ಸಾವಿರಾರು ಸೈನಿಕರು ಕೊಲ್ಲಲ್ಪಟ್ಟರು ಎಂದು ಹೇಳಲಾಗುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

15 ವರ್ಷಗಳಿಂದ ನಾಪತ್ತೆ: ವಿಡಿಯೋ ವೈರಲ್ ಬಳಿಕ ಮರಳಿ ಕುಟುಂಬ ಸೇರಿದ ಮಾಜಿ ಯೋಧ
ಪೌರತ್ವ ಸಿಗುವ ಮುನ್ನವೇ ವೋಟರ್‌ ಲಿಸ್ಟ್‌ನಲ್ಲಿ ಹೆಸರು, ಸೋನಿಯಾ ಗಾಂಧಿಗೆ ನೋಟಿಸ್‌ ಕೊಟ್ಟ ದೆಹಲಿ ಕೋರ್ಟ್!