ಹೆಂಡತಿಯನ್ನು ಗರ್ಭಿಣಿ ಮಾಡ್ಬೇಕು ಅನ್ನೋ ಕಾರಣಕ್ಕೆ 15 ದಿನದ ಪೆರೋಲ್ ಪಡೆದ ಅಪರಾಧಿ!

By Santosh NaikFirst Published Apr 22, 2022, 10:36 PM IST
Highlights

ಗರ್ಭಿಣಿಯಾಗೋದು ನನ್ನ ಹಕ್ಕು ಎಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಅಪರಾಧಿಯ ಪತ್ನಿ ರಾಜಸ್ಥಾನ ಕೋರ್ಟ್ ನ ಮೊರೆ ಹೋಗಿದ್ದರು. ಪತ್ನಿ ಮನವಿಯನ್ನು ಆಲಿಸಿದ ಕೋರ್ಟ್, ಅಪರೂಪದ ಆದೇಶವನ್ನು ನೀಡಿದ್ದು, ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ವ್ಯಕ್ತಿಗೆ 15 ದಿನದ ಪೆರೋಲ್ ನಲ್ಲಿ ಬಿಡುಗಡೆ ಮಾಡುವಂತೆ ಹೇಳಿದೆ.
 

ಜೈಪುರ (ಏ.22): ಇದನ್ನ ನಂಬ್ತೀರೋ, ಬಿಡ್ತೀರೋ ನಿಮಗೆ ಬಿಟ್ಟಿದ್ದು. ಆದರೆ, ರಾಜಸ್ಥಾನದ ಹೈಕೋರ್ಟ್ (Rajasthan High Court) ಅಪರೂಪದ ಆದೇಶವೊಂದನ್ನು ಇತ್ತೀಚೆಗೆ ಪ್ರಕಟಿಸಿದೆ. ಹೆಂಡತಿಯನ್ನು ಗರ್ಭಿಣಿ ಮಾಡೋ ಸಲುವಾಗಿ ಜೈಲಿನಲ್ಲಿ ಜೀವಾವಧಿ ಶಿಕ್ಷೆ (Life imprisonment) ಅನುಭವಿಸುತ್ತಿರುವ ವ್ಯಕ್ತಿಗೆ 15 ದಿನದ ಪೆರೋಲ್ ನಲ್ಲಿ (Parole) ಬಿಡುಗಡೆ ಮಾಡುವಂತೆ ಕೋರ್ಟ್ ಆದೇಶ ನೀಡಿದೆ.

ಗರ್ಭಿಣಿಯಾಗೋದು ಅಥವಾ ಸಂತಾನ ಪಡೆಯುವುದು ನನ್ನ ಹಕ್ಕು ಹಾಗಾಗಿ ಪತ್ನಿಯನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಕೋರಿ, ಖೈದಿಯ ಪತ್ನಿ ನ್ಯಾಯಾಲಯದ ಮೊರೆ ಹೋಗಿದ್ದರು. ಆ ಬಳಿಕ ಈ ಆದೇಶವನ್ನು ಕೋರ್ಟ್ ನೀಡಿದೆ.

ನ್ಯಾಯಮೂರ್ತಿಗಳಾದ ಸಂದೀಪ್ ಮೆಹ್ತಾ (Sandeep Mehta) ಮತ್ತು ಫರ್ಜಂದ್ ಅಲಿ (Farzand Ali) ಅವರ ಜೋಧ್‌ಪುರ ಹೈಕೋರ್ಟ್ ಪೀಠವು (Jodhpur High Court bench) ಈ ಅಚ್ಚರಿಯ ನಿರ್ಧಾರವನ್ನು ನೀಡಿದೆ. ಜೈಲುವಾಸದಿಂದಾಗಿ ಖೈದಿಯ ಹೆಂಡತಿಯ ಲೈಂಗಿಕ ಮತ್ತು ಭಾವನಾತ್ಮಕ ಅಗತ್ಯಗಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ನ್ಯಾಯಾಧೀಶರು ಉಲ್ಲೇಖಿಸಿದ್ದಾರೆ.

ಇಷ್ಟು ಮಾತ್ರವೇ ಅಲ್ಲ, ಋಗ್ವೇದ ಸೇರಿದಂತೆ ಹಿಂದೂ ಧರ್ಮಗ್ರಂಥಗಳನ್ನೂ ನ್ಯಾಯಾಲಯ ಉಲ್ಲೇಖಿಸಿದೆ. ಕೈದಿಗಳಿಗೆ 15 ದಿನಗಳ ಪೆರೋಲ್ ನೀಡಲು ಅವರು ಜುದಾಯಿಸಂ, ಕ್ರಿಶ್ಚಿಯನ್ ಧರ್ಮ ಮತ್ತು ಇಸ್ಲಾಂ ಧರ್ಮದ ಸಿದ್ಧಾಂತಗಳನ್ನು ಉಲ್ಲೇಖಿಸಿದ್ದಾರೆ. 16 ಸಂಸ್ಕಾರಗಳಲ್ಲಿ (ಅಗತ್ಯ ಸಮಾರಂಭಗಳು) ಮಗುವನ್ನು ಗರ್ಭಧರಿಸುವುದು ಮಹಿಳೆಯ ಮೊದಲ ಮತ್ತು ಅಗತ್ಯ ಹಕ್ಕು ಎಂದು ನ್ಯಾಯಾಲಯವು ಒತ್ತಿಹೇಳಿತು.

ವರದಿಗಳ ಪ್ರಕಾರ ಖೈದಿಯ ಹೆಸರು 34 ವರ್ಷದ ನಂದಲಾಲ್ (Nand Lal) ಮತ್ತು ಆತನ ಪತ್ನಿ ರೇಖಾ (Rekha) ಎಂದು ಹೇಳಲಾಗಿದೆ. ವಂಶಾವಳಿಗಾಗಿ ಮಕ್ಕಳನ್ನು ಹೊಂದುವುದು ಧಾರ್ಮಿಕ ತತ್ವಗಳು, ಭಾರತೀಯ ಸಂಸ್ಕೃತಿ ಮತ್ತು ವಿವಿಧ ಕಾನೂನು ಅಂಶಗಳಿಂದ ಗುರುತಿಸಲ್ಪಟ್ಟಿದೆ ಎಂದು ಹೈಕೋರ್ಟ್ ತೀರ್ಪು ನೀಡಿದೆ. "ತೃಪ್ತಿಯ ಹಕ್ಕನ್ನು ವೈವಾಹಿಕ ಜೀವನದ ಮೂಲಕ ಚಲಾಯಿಸಬಹುದು. ಇದು ಅಪರಾಧಿಯನ್ನು ಸಾಮಾನ್ಯಗೊಳಿಸುವ ಪರಿಣಾಮವನ್ನು ಸಹ ಹೊಂದಿದೆ. ಇದು ಅಪರಾಧಿ-ಕೈದಿಗಳ ನಡವಳಿಕೆಯನ್ನು ಬದಲಾಯಿಸಲು ಸಹಾಯ ಮಾಡುತ್ತದೆ" ಎಂದು ಅದು ಹೇಳಿದೆ.

ರಾಜಸ್ಥಾನದಲ್ಲೊಂದು ನಿಗೂಢ ತಾಣ; ರಾತ್ರೋರಾತ್ರಿ ಊರಿಗೂರೇ ಖಾಲಿ!

ನಂದಲಾಲ್ ರಾಜಸ್ಥಾನದ ಭಿಲ್ವಾರಾ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ನೀಡಿದೆ. ಕೈದಿಯನ್ನು ಅಜ್ಮೀರ್ ಜೈಲಿನಲ್ಲಿ ಇರಿಸಲಾಗಿದೆ. 2021 ರಲ್ಲಿ ಅವರಿಗೆ 20 ದಿನಗಳ ಪೆರೋಲ್ ನೀಡಲಾಗಿತ್ತು. ಅವರು ಪೆರೋಲ್ ಅವಧಿಯಲ್ಲಿ ಉತ್ತಮವಾಗಿ ವರ್ತಿಸಿದರು ಮತ್ತು ಅವಧಿ ಮುಗಿದಾಗ ಶರಣಾಗಿದ್ದರು ಎಂದು ನ್ಯಾಯಾಲಯ ಗಮನಿಸಿದೆ. ನ್ಯಾಯಾಲಯವು "ಪರೋಲ್‌ನ ಉದ್ದೇಶವು ಅಪರಾಧಿಯನ್ನು ಬಿಡುಗಡೆ ಮಾಡಿದ ನಂತರ ಶಾಂತಿಯುತವಾಗಿ ಸಮಾಜದ ಮುಖ್ಯವಾಹಿನಿಗೆ ಮರುಪ್ರವೇಶಿಸಲು ಅವಕಾಶ ನೀಡುವುದು." ಖೈದಿಯ ಪತ್ನಿ ಯಾವುದೇ ಅಪರಾಧ ಮಾಡದಿರುವಾಗ ಮತ್ತು ಯಾವುದೇ ಶಿಕ್ಷೆಗೆ ಒಳಗಾಗದೇ ಇರುವಾಗ ಸಂತತಿಯನ್ನು ಹೊಂದುವ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಹೀಗಾಗಿ, ಅಪರಾಧಿ-ಕೈದಿ ತನ್ನ ಹೆಂಡತಿಯೊಂದಿಗೆ ವೈವಾಹಿಕ ಸಂಬಂಧವನ್ನು ಮಾಡಲು ನಿರಾಕರಿಸುವುದು ಅವನ ಹೆಂಡತಿಯ ಹಕ್ಕುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಹೇಳುವ ಮೂಲಕ ಅಪರೂಪದ ನಿರ್ಧಾರವನ್ನು ಪ್ರಕಟಿಸಿದೆ. 

ಈ ರಾಜ್ಯದಲ್ಲಿನ್ನು ಹಸು ಸಾಕಲು ಲೈಸನ್ಸ್‌ ಕಡ್ಡಾಯ, ಬಿಡಾಡಿ ಹಸುಗಳ ಹಾವಳಿ ತಪ್ಪಿಸಲು ನಿಯಮ!

ಕಾನೂನು ಅಂಶವನ್ನು ಪ್ರಸ್ತುತಪಡಿಸುವ ನ್ಯಾಯಾಲಯವು ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸಿದ ಜೀವನದ ಮೂಲಭೂತ ಹಕ್ಕಿಗೆ ಸಂತತಿಯ ಹಕ್ಕನ್ನು ಜೋಡಣೆ ಮಾಡಿದೆ. "ಕಾನೂನು ಸ್ಥಾಪಿಸಿದ ಕಾರ್ಯವಿಧಾನದ ಪ್ರಕಾರ ಹೊರತುಪಡಿಸಿ ಯಾವುದೇ ವ್ಯಕ್ತಿ ತನ್ನ ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳಬಾರದು ಎಂದು ಸಂವಿಧಾನವು ಖಾತರಿಪಡಿಸುತ್ತದೆ. ಇದು ತನ್ನ ವ್ಯಾಪ್ತಿಯೊಳಗೆ ಕೈದಿಗಳನ್ನೂ ಒಳಗೊಂಡಿರುತ್ತದೆ, ”ಎಂದು ನ್ಯಾಯಾಧೀಶರು ಹೇಳಿದರು.

click me!