Delhi Pollution: ಮಾಲಿನ್ಯ ನಿಯಂತ್ರಣಕ್ಕೆ ಟಾಸ್ಕ್‌ ಫೋರ್ಸ್‌ : ಸುಪ್ರೀಂಕೋರ್ಟ್‌ಗೆ ಮಾಹಿತಿ!

By Kannadaprabha NewsFirst Published Dec 4, 2021, 8:04 AM IST
Highlights

*ದಿಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಟಾಸ್ಕ್‌ ಫೋರ್ಸ್‌
*40 ಜನರಿರುವ 17 ತಂಡ ರಚನೆ : 5 ಜನರಿರುವ ಟಾಸ್ಕ್‌ ಫೋರ್ಸ್‌
*ಪಾಕ್‌ನಿಂದ ಮಾಲಿನ್ಯ: ಉತ್ತರ ಪ್ರದೇಶ ಸರ್ಕಾರ

ನವದೆಹಲಿ(ಡಿ. 04): ದೆಹಲಿಯಲ್ಲಿ ಮಾಲಿನ್ಯ ನಿಯಂತ್ರಣಕ್ಕಾಗಿ 5 ಜನರಿರುವ ಟಾಸ್ಕ್‌ ಫೋರ್ಸ್‌ (Task Force) ಹಾಗೂ 40 ಜನರ ತಂಡದ 17 ಸ್ಕ್ವಾಡ್‌ (Squad) ರಚನೆ ಮಾಡಲಾಗುವುದು ಎಂದು ದೆಹಲಿ ವಾಯು ಗುಣಮಟ್ಟನಿರ್ವಹಣಾ ಆಯೋಗ (Commission for Air Quality Management) ಶುಕ್ರವಾರ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದೆ. ಮಾಲಿನ್ಯ ನಿಯಂತ್ರಣಕ್ಕೆ ಏನು ಮಾಡಬಹುದು ಎಂಬುದರ ಬಗ್ಗೆ 24 ಗಂಟೆಗಳಲ್ಲಿ ವರದಿ ನೀಡಿ ಎಂಬ ಸುಪ್ರೀಂಕೋರ್ಟ್‌ (Supreme Court) ಕಟು ಎಚ್ಚರಿಕೆ ಬೆನ್ನಲ್ಲೇ ಈ ಮಾಹಿತಿ ಸಲ್ಲಿಸಲಾಗಿದೆ.

ಅದರನ್ವಯ, ‘ಮಾಲಿನ್ಯ ನಿಯಂತ್ರಣಕ್ಕಾಗಿ ಈಗಾಗಲೇ ತೆಗೆದುಕೊಂಡಿರುವ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಇದರ ಮೇಲ್ವಿಚಾರಣೆ ನೋಡಿಕೊಳ್ಳಲು ರಾಷ್ಟ್ರ ರಾಜಧಾನಿ ವಲಯಕ್ಕೆ ಸೇರುವ ರಾಜ್ಯಗಳಿಂದ 5 ಜನರಿರುವ ಟಾಸ್ಕ್‌ಫೋರ್ಸ್‌ ರಚನೆ ಮಾಡಲಾಗುವುದು. 40 ಜನರ 17 ಫ್ಲೈಯಿಂಗ್‌ ಸ್ಕಾ$್ವಡ್‌ ರಚನೆ ಮಾಡಲಾಗುವುದು. ಈ ಫ್ಲೈಯಿಂಗ್‌ ಸ್ಕ್ವಾಡ್‌ಗಳು ಪ್ರತಿನಿತ್ಯ ಟಾಸ್ಕ್‌ಫೋರ್ಸ್‌ಗೆ ಮಾಹಿತಿ ನೀಡಲಿವೆ. ಈ ಮಾಹಿತಿಯ ಆಧಾರದಲ್ಲಿ ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಮರು ಪರಿಶೀಲಿಸುವ ಅಧಿಕಾರವನ್ನು ಟಾಸ್ಕ್‌ಫೋರ್ಸ್‌ಗೆ ನೀಡಲಾಗಿದೆ ಎಂದು ಆಯೋಗ ಸುಪ್ರೀಂಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಹೇಳಿದೆ.

Delhi Air Pollution: ದೆಹಲಿ, ನಮ್ಮ 'ಗಾಳಿ' ಮಾಲಿನ್ಯಗೊಳಿಸಿದ್ದು ಪಾಕ್: ಸುಪ್ರೀಂನಲ್ಲಿ ಯುಪಿ ಸ್ಪಷ್ಟನೆ!

ಈ ನಿಯಮಗಳನ್ನು ಕಟ್ಟುನಿಟ್ಟಾಗಿ ದೆಹಲಿ (Delhi) ಮತ್ತು ರಾಷ್ಟ್ರ ರಾಜಧಾನಿ ವಲಯದಲ್ಲಿ ಪಾಲಿಸುವಂತೆ ಸರ್ಕಾರಕ್ಕೆ ಸುಪ್ರೀ ಕೋರ್ಟ್‌ ಹೇಳಿದೆ. ಆಯೋಗ ಸಲ್ಲಿಸಿರುವ ಅಫಿಡವಿಟ್‌ (Affidavit) ಅನ್ನು ಸೂಕ್ಷ್ಮವಾಗಿ ಕೋಟ್‌ ಅವಲೋಕಿಸಿದೆ. ಈ ನಿಯಗಳನ್ನು ಗಂಭೀರವಾಗಿ ಜಾರಿ ಮಾಡಬೇಕು. ಮುಂದಿನ ಶುಕ್ರವಾರ ಈ ಕುರಿತು ವಿಚಾರಣೆ ನಡೆಸಲಾಗುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಅವರಿದ್ದ ಪೀಠ ಹೇಳಿದೆ.

ಮಾಲಿನ್ಯಕ್ಕೆ ಪಾಕಿಸ್ತಾನದಿಂದ  ಬರುತ್ತಿರುವ ಹೊಗೆ ಕಾರಣ

ದೆಹಲಿ (Delhi) ಮತ್ತು ಸುತ್ತಲಿನ ನಗರಗಳಲ್ಲಿ ಉಂಟಾಗುತ್ತಿರುವ ಮಾಲಿನ್ಯಕ್ಕೆ ಪಾಕಿಸ್ತಾನದಿಂದ (Pakistan) ಬರುತ್ತಿರುವ ಹೊಗೆ ಕಾರಣ ಎಂದು ಉತ್ತರ ಪ್ರದೇಶ ಸರ್ಕಾರ ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ಹೇಳಿದೆ. ಕಾರ್ಖಾನೆಗಳನ್ನು ಮುಚ್ಚುವಂತೆ ಸುಪ್ರೀಂ ಸೂಚನೆ ನೀಡಿರುವುದಕ್ಕೆ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶ ಸರ್ಕಾರ (Uttar Pradesh) ಪಾಕಿಸ್ತಾನ ಕಾರಣ ಎಂದು ಹೇಳಿದೆ. ಈ ವಾದಕ್ಕೆ ಕೋಪಗೊಂಡ ಮುಖ್ಯನ್ಯಾಯಮೂರ್ತಿ ಎನ್‌.ವಿ. ರಮಣ, ಪಾಕಿಸ್ತಾನದ ಕಾರ್ಖಾನೆಗಳನ್ನು ಮುಚ್ಚಿಸಬೇಕಾ? ಎಂದು ಪ್ರಶ್ನಿಸಿದ್ದಾರೆ.

ಲಾಹೋರ್ ವಿಶ್ವದ ಅತ್ಯಂತ ಕಲುಷಿತ ನಗರ

ಕಮಿಷನರ್ ನಿವೃತ್ತ ಕ್ಯಾಪ್ಟನ್ ಮುಹಮ್ಮದ್ ಉಸ್ಮಾನ್ ಅವರು ಲಾಹೋರ್ ವಿಶ್ವದ ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ನಂತರ ಐದು ಆಂಟಿಸ್ಮಾಗ್ ಸ್ಕ್ವಾಡ್‌ಗಳನ್ನು ರಚಿಸಿದ್ದಾರೆ. ಈ ತಂಡಗಳು ಕೈಗಾರಿಕೆಗಳಿಗೆ ಭೇಟಿ ನೀಡುತ್ತವೆ ಮತ್ತು ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸುವಂತಹ ಕ್ರಮಗಳನ್ನು ತೆಗೆದುಕೊಳ್ಳುತ್ತವೆ. ಪರಿಸರ ಸಂರಕ್ಷಣಾ ಇಲಾಖೆ ತಂಡಕ್ಕೆ ನೇತೃತ್ವ ವಹಿಸಲಿದ್ದು, ಪೊಲೀಸರಲ್ಲದೆ ನಗರಸಭೆ ಮತ್ತಿತರ ಇಲಾಖೆಗಳ ಪ್ರತಿನಿಧಿಗಳೂ ತಂಡಗಳ ಸದಸ್ಯರಾಗಿರುತ್ತಾರೆ. 

Delhi Air Pollution:ನಿಮಗೆ ಸಾಧ್ಯವಿಲ್ಲದಿದ್ದರೆ ಸರ್ಕಾರ ನಡೆಸಲು ಅಧಿಕಾರಿ ನೇಮಕ, ಕೇಜ್ರಿ ಸರ್ಕಾರಕ್ಕೆ ಸುಪ್ರೀಂ ವಾರ್ನಿಂಗ್!

ಏತನ್ಮಧ್ಯೆ, ಆಂಟಿಸ್ಮಾಗ್ ಸ್ಕ್ವಾಡ್‌ಗಳು ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಮಾಲಿನ್ಯಕಾರಕ ಪೈರೋಲಿಸಿಸ್ ಘಟಕಗಳು, ಇಟ್ಟಿಗೆ ಗೂಡುಗಳು ಮತ್ತು ಇತರ ಕೈಗಾರಿಕಾ ಘಟಕಗಳನ್ನು ಮುಚ್ಚಿವೆ. ಲಾಹೋರ್ ಜಿಲ್ಲಾಡಳಿತದ ಪ್ರಕಾರ, ನಗರದಲ್ಲಿ 18 ಪೈರೋಲಿಸಿಸ್ ಪ್ಲಾಂಟ್‌ಗಳಿವೆ. ಅವರು ಪ್ಲಾಸ್ಟಿಕ್‌ಗಳು, ಬಳಸಿದ ಟೈರ್‌ಗಳು, ಕಬ್ಬಿಣ ಮತ್ತು ಹೈಡ್ರೋಕಾರ್ಬನ್‌ಗಳನ್ನು ಇತರ ಬಳಸಿದ ಸರಕುಗಳೊಂದಿಗೆ ಕರಗಿಸುತ್ತಾರೆ. ಹೊಗೆ ವಿರೋಧಿ ಈ ಸಸ್ಯಗಳನ್ನು ಮುಚ್ಚಲಾಯಿತು ಮತ್ತು ಅವುಗಳನ್ನು ಕೆಲಸ ಮಾಡುವುದನ್ನು ನಿಲ್ಲಿಸಿದೆ. ಆದಾಗ್ಯೂ, ನಾಲ್ಕು ಪ್ಲಾಂಟ್‌ಗಳು ಇವೆಲ್ಲವನ್ನೂ ಉಲ್ಲಂಘಿಸಿ ಮತ್ತೆ ಕಾರ್ಯ ಆರಂಭಿಸಿವೆ. 

click me!