ಆನೆ ಹತ್ಯೆ ಬೆನ್ನಲ್ಲೇ ಮತ್ತೊಂದು ಘಟನೆ; ಸ್ಫೋಟಕ ಜಗಿದು ನರಳಾಡುತ್ತಿದೆ ಗರ್ಭಿಣಿ ದನ!

By Suvarna NewsFirst Published Jun 6, 2020, 6:37 PM IST
Highlights

ಕೇರಳದಲ್ಲಿನ ಗರ್ಭಿಣಿಗೆ ಆನೆಗೆ ಸ್ಫೋಟಕ ತುಂಬಿದ ಪೈನಾಪಲ್ ನೀಡಿ ಹತ್ಯೆ ಮಾಡಿದ ಘಟನೆಯನ್ನು ಯಾವ ಭಾರತೀಯನೂ ಇನ್ನು ಆರಗಿಸಿಕೊಂಡಿಲ್ಲ. ಈ ಘಟನೆ ಮಾಸುವ ಮುನ್ನವೇ ಗರ್ಭಿಣಿ ದನಕ್ಕೆ ಸ್ಫೋಟಕ ನೀಡಿದ ಘಟನೆ ಬೆಳಕಿಗೆ ಬಂದಿದೆ. ಸ್ಫೋಟಕ ಜಗಿದ ದನದ ದವಡೆ ಪುಡಿ ಪುಡಿಯಾಗಿದ್ದು, ನೋವಿನಿಂದ ನರಳಾಡುತ್ತಿದೆ.

ಹಿಮಾಚಲ ಪ್ರದೇಶ(ಜೂ.06): ದೇಶದಲ್ಲಿ ಮಾನವೀಯತೆ ಸತ್ತುಹೋಗುತ್ತಿದೆಯಾ ಎಂಬ ಪ್ರಶ್ನೆಗೆ ಕೇರಳದ ಗರ್ಭಿಣಿ ಆನೆ ಕೊಂದ ಪ್ರಕರಣ ಕನ್ನಡಿಯಂತಿದೆ.  ಸ್ಫೋಟಕ ತುಂಬಿದ ಪೈನಾಪಲ್‌ ತಿಂದ ಗರ್ಭಿಣಿ ಆನೆಯ ಸಂಪೂರ್ಣ ದವಡೆ ಪುಡಿ ಪುಡಿಯಾಗಿತ್ತು. ನೋವು ತಾಳಲಾರದೆ ನದಿಯ ನೀರಿನಲ್ಲಿ ಸೊಂಡಿಲ ಮುಳುಗಿಸಿ ನಿಂತ ಆನೆ ಪ್ರಾಣಬಿಟ್ಟಿತು. ಈ ಘಟನೆ ಬಿಸಿ ಇನ್ನೂ ಆರಿಲ್ಲ, ಆಕ್ರೋಶ ತಣ್ಣಗಾಗಿಲ್ಲ, ತನಿಖೆ ಮುಗಿದಿಲ್ಲ. ಇದರ ಬೆನ್ನಲ್ಲೇ ಗರ್ಭಿಣಿ ದನಕ್ಕೆ ಸ್ಫೋಟಕ ನೀಡಿ ದವಡೆಯನ್ನೇ ಪುಡಿ ಪುಡಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಗರ್ಭಿಣಿ ಆನೆ ಕೊಂದ ಪ್ರಕರಣ; ಮರಳು ಶಿಲ್ಪದ ಮೂಲಕ ಕ್ರೂರತೆ ಖಂಡಿಸಿ ಸುದರ್ಶನ ಪಟ್ನಾಯಕ್!

ಹಿಮಾಚಲ ಪ್ರದೇಶದ ಬಿಲಾಸ್ಪುರ್ ಜಿಲ್ಲೆಯ ಜಂದುತಾ ಗ್ರಾಮದಲ್ಲಿ ಈ ಕ್ರೂರ ಘಟನೆ ನಡೆದಿದೆ. ದನದ ಮಾಲೀಕ ಗುರುಡಿಯಲ್ ಸಿಂಗ್ ವಿಡಿಯೋ ಮೂಲಕ ಈ ಘಟನೆ ಬಹಿರಂಗ ಪಡಿಸಿದ್ದಾರೆ. ನೆರಮನೆಯ ನಂದ್ ಲಾಲ್ ದನಕ್ಕೆ ಸ್ಫೋಟಕ ತುಂಬಿದ ಆಹಾರ ನೀಡಿದ್ದಾರೆ. ಆಹಾರ ಜಗಿದ ದನದ ದವಡೆ ಪುಡಿ ಪಡಿಯಾಗಿದೆ. ತಕ್ಷಣವೇ ತಪ್ಪಿತಸ್ಥನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ  ಗುರುಡಿಯಲ್ ಸಿಂಗ್ ಆಗ್ರಹಿದ್ದಾರೆ.

ವನ್ಯಜೀವಿಗಳ ವಿರುದ್ಧ ಕ್ರೌರ್ಯ: ಕಾಯ್ದೆ ತಿದ್ದುಪಡಿ, ಕಠಿಣ ಶಿಕ್ಷೆಗೆ ಸಂಸದ ರಾಜೀವ್ ಆಗ್ರಹ

ಗರ್ಭಿಣಿ ದನ ನೆರೆಮನೆಯ ಆವರ ಪ್ರವೇಶಿಸುತ್ತಿದೆ ಅನ್ನೋ ಕಾರಣಕ್ಕೆ ಈ ರೀತಿ ಮಾಡಿದ್ದಾರೆ. ಇದು ಅತ್ಯಂತ ಕ್ರೂರ ನಡೆಯಾಗಿದೆ. ಘಟನೆ ಬಳಿಕ ನೆರೆಮನೆಯ ನಂದ್ ಲಾಲ್ ಕಾಣೆಯಾಗಿದ್ದಾರೆ. 10 ದಿನಗಳ ಹಿಂದೆ ಈ ಘಟನೆ ನಡೆದಿದೆ. ದವಡೆ ಸಂಪೂರ್ಣ ಗುಣವಾಗುವ ವರೆಗೆ ದನಕ್ಕೆ ಏನೂ ತಿನ್ನಲು ಸಾಧ್ಯವಿಲ್ಲ. ನನ್ನ ದನವನ್ನು ಕಾಪಾಡಿ ಎಂದು ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.

ಕೇರಳದಲ್ಲಿ ಪ್ರತಿ ವರ್ಷ 600 ಆನೆಗಳ ಹತ್ಯೆ; ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಮೇನಕಾ ಗಾಂಧಿ!.

ಈ ಕುರಿತು ದೂರು ದಾಖಲಾಗಿದೆ. ತನಿಖೆ ನಡೆಯುತ್ತಿದೆ. ಇಷ್ಟೇ ಅಲ್ಲ ದನಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಕೇರಳದ ಗರ್ಭಿಣಿ ಆನೆ ಹತ್ಯೆ ಪ್ರಕರಣ ಬೆನ್ನಲ್ಲೇ ಪ್ರಾಣಿ ಹಿಂಸೆ ನೀಡಿದ ಘಟನೆಗಳು ವರದಿಯಾಗುತ್ತಿದೆ. ಭಾರತದಲ್ಲಿ ಇಂತಹ ಹಲವು ಘಟನೆಗಳು ನಡೆಯುತ್ತಿದೆ. ಆದರೆ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತಿಲ್ಲ. 

click me!