Save Soil Movement: ನೀವು ತಿಳಿದಿರಲೇಬೇಕಾದ 15 ಮಹತ್ವದ ಸಂಗತಿಗಳು!

Published : May 25, 2022, 01:21 PM ISTUpdated : May 26, 2022, 06:28 PM IST
Save Soil Movement: ನೀವು ತಿಳಿದಿರಲೇಬೇಕಾದ 15 ಮಹತ್ವದ ಸಂಗತಿಗಳು!

ಸಾರಾಂಶ

ಒಂದು ಚಮಚದ ಮಣ್ಣಿನಲ್ಲಿ ಪ್ರಪಂಚದ ಜನರಿಗಿಂತ ಹೆಚ್ಚು ಜೀವಿಗಳಿವೆ ಎಂದು ನಿಮಗೆ ತಿಳಿದಿದೆಯೇ?  

ನವದೆಹಲಿ (ಮೇ 25): ಸತತ 70 ದಿನಗಳ ಕಾಲ ರಸ್ತೆಯಲ್ಲಿ ಸಂಚರಿಸಿದ ಬಳಿಕ, ಆಧ್ಯಾತ್ಮಿಕ ನಾಯಕ ಸದ್ಗುರು (Spiritual leader Sadhguru ) ಮೇ 29 ರಂದು ಭಾರತದಲ್ಲಿ ಮಣ್ಣು ಉಳಿಸಿ ಯಾತ್ರೆಯ (Save Soil Movement) ಅಂತಿಮ ಹಂತಕ್ಕಾಗಿ ಗುಜರಾತ್‌ನ ಜಾಮ್‌ನಗರಕ್ಕೆ ಆಗಮಿಸಲಿದ್ದಾರೆ. ಮಣ್ಣು ಉಳಿಸಿ ಎನ್ನುವ ಏಕಮೇವ ಉದ್ದೇಶ ಹಾಗೂ ಸಂದೇಶದೊಂದಿಗೆ ಸದ್ಗುರು ಕಳೆದ ಎರಡು ತಿಂಗಳಿಂದ ಒಂದೇ ಬೈಕ್ ನಲ್ಲಿ ವಿಶ್ವ ಸಂಚಾರ ಮಾಡಿದ್ದು, ವಿಶ್ವದ ಪ್ರಮುಖ ನಗರಗಳಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಅವರದೇ ಮಾತಿನಲ್ಲಿ ಹೇಳುವುದಾದರೆ, "ಮಣ್ಣು ಅಕ್ಷರಶಃ ಈ ಗ್ರಹದಲ್ಲಿ ಜೀವವೈವಿಧ್ಯದ ತಾಯಿಯಾಗಿದೆ. ಶ್ರೀಮಂತ ಮಣ್ಣಿಲ್ಲದೆ, ಜೀವವೈವಿಧ್ಯತೆಯ ಸಾಧ್ಯತೆಯಿಲ್ಲ. ಈ ಗ್ರಹದಲ್ಲಿ ಜೀವಕ್ಕೆ ಜನ್ಮ ನೀಡುವ ಗರ್ಭ ಮಣ್ಣು" ಎನ್ನುತ್ತಾರೆ.

ಮಣ್ಣಿನ ಬಗ್ಗೆ ನೀವು ತಿಳಿದಿರಬೇಕಾದ 15 ಮಹತ್ವದ ಸಂಗತಿಗಳು ಇಲ್ಲಿವೆ:

1. ನಾವು ಸೇವಿಸುವ ಆಹಾರದ ಕನಿಷ್ಠ 95 ಪ್ರತಿಶತವು ಮಣ್ಣಿನಿಂದ ಬರುತ್ತದೆ.

2.ಮೇಲ್ಪದರದ ಆರು ಇಂಚುಗಳಷ್ಟು ಮಣ್ಣಿನಲ್ಲಿ ಸಾವಯವ ಪದಾರ್ಥವನ್ನು ಶೇಕಡಾ ಒಂದರಷ್ಟು ಹೆಚ್ಚಿಸುವುದರಿಂದ ಪ್ರತಿ ಎಕರೆಗೆ 20,000 ಗ್ಯಾಲನ್‌ಗಳಷ್ಟು ಹೆಚ್ಚು ನೀರನ್ನು ಹಿಡಿದಿಟ್ಟುಕೊಳ್ಳುತ್ತದೆ.


3. ಮಣ್ಣಿನ ಅವನತಿಯು ಪ್ರಪಂಚದಾದ್ಯಂತ 3.2 ಶತಕೋಟಿ ಜನರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ.

4. ಒಂದು ಗ್ರಾಂ ಆರೋಗ್ಯಕರ ಮಣ್ಣಿನಲ್ಲಿ, ಒಬ್ಬರು 100 ಮಿಲಿಯನ್‌ನಿಂದ 1 ಬಿಲಿಯನ್ ಬ್ಯಾಕ್ಟೀರಿಯಾ ಮತ್ತು 100,000 ರಿಂದ 1 ಮಿಲಿಯನ್ ಶಿಲೀಂಧ್ರಗಳನ್ನು ಕಾಣಬಹುದು, ಇದು ಸಸ್ಯದ ಬೆಳವಣಿಗೆ ಮತ್ತು ಆರೋಗ್ಯವನ್ನು ಬೆಂಬಲಿಸುತ್ತದೆ.

5. ನಾವು ಈಗ ಕಾರ್ಯ ಪ್ರವೃತ್ತರಾಗದೇ ಇದ್ದಲ್ಲಿ, 2050 ರ ವೇಳೆಗೆ, ಭೂಮಿಯ ಶೇಕಡಾ 90 ರಷ್ಟು ಮಣ್ಣು ಕುಸಿಯಬಹುದು.

6. ಮಣ್ಣಿನ ಸಾವಯವ ಅಂಶವನ್ನು 0.5 ರಿಂದ 3 ಪ್ರತಿಶತಕ್ಕೆ ಹೆಚ್ಚಿಸುವುದರಿಂದ ಮಣ್ಣಿನಿಂದ ಹಿಡಿದಿಟ್ಟುಕೊಳ್ಳುವ ನೀರನ್ನು ದ್ವಿಗುಣಗೊಳಿಸಬಹುದು

7. ಮಣ್ಣಿನ ಫಲವತ್ತತೆ ಕ್ಷೀಣಿಸುತ್ತಿರುವುದರಿಂದ ಗ್ರಹದ ಶೇಕಡ ಇಪ್ಪತ್ತು ಸಸ್ಯವರ್ಗವು ಉತ್ಪಾದಕತೆಯ ಕುಸಿತವನ್ನು ಅನುಭವಿಸಿದೆ.


8. ಆಹಾರ ಮತ್ತು ಮಣ್ಣಿನಲ್ಲಿ ಪೋಷಕಾಂಶಗಳ ಕೊರತೆಯಿಂದಾಗಿ ವಿಶ್ವದ ಜನಸಂಖ್ಯೆಯ ಶೇಕಡ 60 ರಷ್ಟು ಜನರು ಕಬ್ಬಿಣದಂತಹ ಪೋಷಕಾಂಶಗಳ ಕೊರತೆಯನ್ನು ಹೊಂದಿದ್ದಾರೆ.

9. ಒಂದು ಚಮಚ ಮಣ್ಣಿನಲ್ಲಿ ಪ್ರಪಂಚದ ಜನರಿಗಿಂತ ಹೆಚ್ಚು ಜೀವಂತ ಜೀವಿಗಳಿವೆ. ಆರೋಗ್ಯಕರ ಮಣ್ಣಿನ ಒಂದು ಚಮಚದಲ್ಲಿ ಸುಮಾರು 10,000-50,000 ಸೂಕ್ಷ್ಮಜೀವಿಗಳ ಪ್ರಭೇದಗಳಿವೆ.

10. ಪ್ರಪಂಚದ ಎಲ್ಲಾ ಮೇಲ್ಮೈ ಮಣ್ಣು ಮುಂದಿನ 60 ವರ್ಷಗಳಲ್ಲಿ ಮಾಯವಾಗಬಹುದು. ಪ್ರಪಂಚದಾದ್ಯಂತ ಪ್ರತಿ ವರ್ಷ ಸುಮಾರು 12 ಮಿಲಿಯನ್ ಹೆಕ್ಟೇರ್ ಮೇಲ್ಮಣ್ಣು ನಾಶವಾಗುತ್ತಿದೆ. ಇದು ಇಡೀ ಗ್ರೀಸ್ ದೇಶದ ಗಾತ್ರವಾಗಿದೆ.

11. ಪ್ರಪಂಚದ 90% ಕೃಷಿಗೆ ಮಣ್ಣು ನೀರಿನ ಮೂಲವಾಗಿದೆ. ಆದರೆ ಶೇ.52ರಷ್ಟು ಕೃಷಿ ಮಣ್ಣು ಈಗಾಗಲೇ ಹಾಳಾಗಿದೆ.


12. ವ್ಯಾಪಕವಾಗಿ ಬಳಸಲಾಗುವ ಅನೇಕ ಪ್ರತಿಜೀವಕಗಳು ಮಣ್ಣಿನ ಸೂಕ್ಷ್ಮಜೀವಿಗಳಿಂದ ಹುಟ್ಟಿಕೊಂಡಿವೆ. ಇದು ವಿಶ್ವದ ಮೊದಲ ಪ್ರತಿಜೀವಕ ಪೆನ್ಸಿಲಿನ್ ಅನ್ನು ಒಳಗೊಂಡಿದೆ.

13. ಎರೆಹುಳುಗಳ ಉಪಸ್ಥಿತಿಯು ಇಳುವರಿಯನ್ನು 43-350% ಹೆಚ್ಚಿಸಬಹುದು

Save Soil Movement: ‘ಮಣ್ಣು ಉಳಿಸಿ’ಗೆ ಹಾಲಿ, ಮಾಜಿ ಸಿಎಂಗಳ ಬೆಂಬಲ

14. ಮಣ್ಣಿನಲ್ಲಿರುವ ಇಂಗಾಲವನ್ನು ಕೇವಲ 0.4% ಹೆಚ್ಚಿಸಿದರೆ ಆಹಾರ ಧಾನ್ಯ ಉತ್ಪಾದನೆಯು ಪ್ರತಿ ವರ್ಷ 1.3% ರಷ್ಟು ಹೆಚ್ಚಾಗುತ್ತದೆ

Save Soil: ಮಣ್ಣು ಸವಕಳಿಯಿಂದ ಆಹಾರ ಕೊರತೆ.. ಎಚ್ಚರ ವಹಿಸಲು ಸದ್ಗುರು ಕರೆ

15. ಯುಎನ್ ಅಂದಾಜಿನ ಪ್ರಕಾರ, ಮಣ್ಣನ್ನು ಪುನರುಜ್ಜೀವನಗೊಳಿಸುವುದರಿಂದ ಮಾನವನು ಪ್ರಸ್ತುತ ವಾರ್ಷಿಕ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು 25-35 ಪ್ರತಿಶತದಷ್ಟು ಕಡಿಮೆ ಮಾಡಬಹುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಇಂಡಿಗೋ ವಿಮಾನ ರದ್ದತಿ ಕೊಂಚ ಸರಿ ದಾರಿಗೆ
ಹಿಂದಿ ಹೇರಿಕೆ ಬಗ್ಗೆ ನ್ಯಾ। ನಾಗರತ್ನ ಬೇಸರ