ಮೆದುಳು ಹೃದಯ ವಿರುದ್ಧ ದಿಕ್ಕಲ್ಲಿ ಯೋಚಿಸಿದರೆ ಏನಾಗುತ್ತೆ? ಓದಿ ಈ ಗಂಡಭೇರುಂಡದ ಕತೆ

Published : Apr 24, 2023, 04:50 PM IST
ಮೆದುಳು ಹೃದಯ ವಿರುದ್ಧ ದಿಕ್ಕಲ್ಲಿ ಯೋಚಿಸಿದರೆ ಏನಾಗುತ್ತೆ? ಓದಿ ಈ ಗಂಡಭೇರುಂಡದ ಕತೆ

ಸಾರಾಂಶ

ಹಲವು ಬಾರಿ ನಮ್ಮ ಯೋಚನೆಗಳಲ್ಲಿ ವೈರುಧ್ಯತೆ ಇರುತ್ತದೆ. ಕೆಲವೊಮ್ಮೆ ಅವಮಾನಕ್ಕೆ ಸೇಡು ಎಂದು ತೀರಿಸಿಕೊಳ್ಳಲು ಹೋದದ್ದು ನಮ್ಮನ್ನೇ ಸುಡುತ್ತದೆ, ಮತ್ತೆ ಕೆಲವೊಮ್ಮೆ ಮತ್ತೊಬ್ಬರನ್ನು ಅವಮಾನಿಸುವುದಕ್ಕೆ ಎಂಥ ದೊಡ್ಡ ಮಟ್ಟದಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂಬುದಕ್ಕೆ ಗಂಡಭೇರುಂಡದ ಈ ಕತೆಯೇ ಉತ್ತರ ಹೇಳುತ್ತದೆ. 

ಗಂಡಭೇರುಂಡ ಎಂಬುದು ಪೌರಾಣಿಕವಾದ ಹಾಗೂ ಕಾಲ್ಪನಿಕವಾದ ಒಂದೇ ದೇಹದ, ಎರಡು ತಲೆಗಳುಳ್ಳ ಪಕ್ಷಿ. ಇದು ಕರ್ನಾಟಕದ ಹಲವು ರಾಜವಂಶಗಳ ಪ್ರಭುತ್ವಲಾಂಛನವಾಗಿ ಗುರುತಿಸಿಕೊಂಡಿತ್ತು. ಹಾಗಾಗಿ ಇದನ್ನು ಶಕ್ತಿಯುತ, ಅಧಿಕಾರಯುತವೆಂಬುದಕ್ಕೆ ಸಾಂಕೇತಿಕವಾಗಿ ಬಳಸಲಾಗುತ್ತದೆ. ಗಂಡಭೇರುಂಡಕ್ಕೆ ಸಂಬಂಧಿಸಿದ ಕತೆಯೊಂದಿದೆ. ಇದು ಹೇಗೆ ನಮ್ಮ ಮನಸ್ಸಿನಲ್ಲಿ ಯಾವುದೇ ವಿಷಯದ ಬಗ್ಗೆ ದ್ವಂದ್ವವಿದ್ದರೆ- ಮನಸ್ಸು ಮೆದುಳು ಎರಡೂ ವಿರುದ್ಧ ದಿಕ್ಕಿಗೆಳೆದರೆ ನಮ್ಮ ವಿನಾಶವಾಗುತ್ತದೆ ಎಂಬುದನ್ನು ತಿಳಿಸುತ್ತದೆ. ಅಷ್ಟೇ ಅಲ್ಲ, ಸಂಸಾರದ ವಿಷಯಕ್ಕೆ ಬಂದಾಗ ಗಂಡ ಹೆಂಡತಿ ಇಬ್ಬರಲ್ಲೂ ಸಮನ್ವಯವಿಲ್ಲವಾದರೆ, ವ್ಯವಹಾರದಲ್ಲಿ ಪಾಲುದಾರರ ನಡುವೆ ಜಗಳ ಎದ್ದರೆ ಏನಾಗುತ್ತದೆ ಎಂದೂ ಸಾಂಕೇತಿಕವಾಗಿ ತಿಳಿಸುತ್ತದೆ. ಕತೆ ಹೀಗಿದೆ..

ಇದು ಪ್ರಾಚೀನ ಕಾಲದ ವಿಷಯವಾಗಿದೆ. ಗಂಡಭೇರುಂಡ ಎಂಬ ವಿಚಿತ್ರ ಪಕ್ಷಿಯೊಂದು ಆಗ ವಾಸಿಸುತ್ತಿತ್ತು. ಅದಕ್ಕೆ ಎರಡು ತಲೆಗಳಿದ್ದರೂ ಒಂದೇ ದೇಹವಿತ್ತು. ಆದರೆ, ವಿಪರ್ಯಾಸವೆಂದರೆ ಎರಡೂ ತಲೆಯೊಳಗೆ ಏಕತೆ ಇರಲಿಲ್ಲ. ಎರಡು ಮೆದುಳುಗಳಿದ್ದ ಕಾರಣ ಆ ಹಕ್ಕಿಯು ಎರಡು ವಿರುದ್ಧ ದಿಕ್ಕುಗಳಲ್ಲಿ ಯೋಚಿಸುತ್ತಿತ್ತು. ಒಂದು ಮನಸ್ಸು ಒಂದು ದಿಕ್ಕಿಗೆ ಹೋಗಬೇಕೆಂದು ಯೋಚಿಸಿದರೆ, ಇನ್ನೊಂದು ಮನಸ್ಸು ಮತ್ತೊಂದು ದಿಕ್ಕಿಗೆ ಹೋಗಬೇಕೆಂದು ಯೋಚಿಸುತ್ತಿತ್ತು. ಎರಡೂ ತಲೆಗಳು ಪರಸ್ಪರ ದ್ವೇಷವನ್ನು ಹೊಂದಿದ್ದವು.

ಒಂದು ದಿನ ಭೇರುಂಡ ಆಹಾರವನ್ನು ಹುಡುಕಲು ಹೊರಟಿತು. ಅಲ್ಲಿ ಬಿದ್ದ ಹಣ್ಣನ್ನು ನೋಡಿದಾಗ, ಅವನು ಅದನ್ನು ಕಚ್ಚಿ ಹೇಳಿದನು - ವಾಹ್, ಎಂತಹ ರುಚಿಕರವಾದ ಹಣ್ಣು, ನಾನು ಮಾತ್ರ ತಿನ್ನುತ್ತೇನೆ ಎಂದು ತಿನ್ನಲು ಶುರು ಮಾಡಿತು.

ಗ್ರಹ ಅಸ್ತವಾಗುವುದು ಅಂದರೇನರ್ಥ? ಅದರ ಪರಿಣಾಮವೇನು?

ಆಗ ಮತ್ತೊಂದು ತಲೆಯು, 'ಅಷ್ಟು ಸೊಗಸಾಗಿದೆಯೇ? ನಾನೂ ಕೂಡ ರುಚಿ ನೋಡಿ ನೋಡುತ್ತೇನೆ' ಎಂದು ಹೇಳಿ ಆ ಹಣ್ಣನ್ನು ತಿನ್ನಲು ಹೊರಟಿತು. 
ಎರಡನೇ ತಲೆಯು ಹಣ್ಣನ್ನು ಕಚ್ಚಿ ತಿನ್ನಲು ಬಯಸಿದ ತಕ್ಷಣ, ಮೊದಲ ತಲೆ ಅದನ್ನು ತಡೆದು - 'ನಿನ್ನ ಕೊಳಕು ಕೊಕ್ಕನ್ನು ಈ ಹಣ್ಣಿನಿಂದ ದೂರವಿಡು, ನಾನು ಅದನ್ನು ಕಂಡುಕೊಂಡಿದ್ದೇನೆ. ಆದ್ದರಿಂದ ನಾನು ತಿನ್ನುತ್ತೇನೆ' ಎಂದಿತು. 
'ಹೇ, ನಾವಿಬ್ಬರೂ ಒಂದೇ ದೇಹದ ಎರಡು ಭಾಗಗಳು ಮತ್ತು ಅದಕ್ಕಾಗಿಯೇ ನಾವು ಕನಿಷ್ಠ ಆಹಾರ ಮತ್ತು ಪಾನೀಯವನ್ನು ಹಂಚಿಕೊಳ್ಳಬೇಕು' ಎಂದು ಎರಡನೇ ತಲೆ ಹೇಳಿತು.

ಇದಕ್ಕೆ ಮೊದಲ ತಲೆ ಒಪ್ಪಲಿಲ್ಲ. 'ನ್ನುವುದು ಎಂದರೆ ಹೊಟ್ಟೆ ತುಂಬುವುದು ಎಂದಲ್ಲ. ನಾಲಿಗೆಯ ರುಚಿಯೂ ಇರುತ್ತದೆ. ನಿನ್ನ ನಾಲಿಗೆಯ ರುಚಿಗೆ ನಾನು ಯಾವ ಗುತ್ತಿಗೆಯನ್ನೂ ತೆಗೆದುಕೊಂಡಿಲ್ಲ. ನನ್ನ ನಾಲಿಗೆಗೆ ತೃಪ್ತಿ ಪಡಿಸುವುದು ನನ್ನ ನಿರ್ಧಾರ. ನಾಲಿಗೆಯ ರುಚಿಯಿಂದ ಹೊಟ್ಟೆಗೆ ತೃಪ್ತಿ ಸಿಗುತ್ತದೆ. ಮೊದಲು ನನ್ನ ನಾಲಿಗೆ ಈ ಹಣ್ಣನ್ನು ತಿಂದು ತೃಪ್ತಿ ಪಡಲಿ' ಎನ್ನುತ್ತಾ ಅದು ಆ ಹಣ್ಣನ್ನು ತಿಂದು ಮುಗಿಸಿತು. 
ಈಗ ಇನ್ನೊಂದು ತಲೆ ತನ್ನ ಅವಮಾನಕ್ಕೆ ಸೇಡು ತೀರಿಸಿಕೊಳ್ಳಲು ನಿರ್ಧರಿಸಿತ್ತು. ಸರಿಯಾದ ಅವಕಾಶಕ್ಕಾಗಿ ಕಾಯುತ್ತಿತ್ತು. 

ಒಂದು ದಿನ ಗಂಡಭೇರುಂಡ ಆಹಾರವನ್ನು ಹುಡುಕುತ್ತಾ ಅಲೆದಾಡುತ್ತಿತ್ತು. ಆಗ ಒಂದು ಹಣ್ಣು ಅದರ ಕಣ್ಣಿಗೆ ಬಿತ್ತು. ಎರಡನೆಯ ತಲೆಯು ಆ ಹಣ್ಣನ್ನು ಎತ್ತಿಕೊಂಡು ತಿನ್ನಲು ಮುಂದಾದಾಗ ಮೊದಲನೆಯ ತಲೆಯು ಜೋರಾಗಿ ಕೂಗಿತು - 'ಹೇ, ಈ ಹಣ್ಣನ್ನು ತಿನ್ನಬೇಡ, ಇದು ನಮ್ಮನ್ನು ಕೊಲ್ಲುವ ವಿಷಕಾರಿ ಹಣ್ಣು.'

ವಿವಾಹಿತ ಮಹಿಳೆಯರು ಮಂಗಳಸೂತ್ರವನ್ನು ಏಕೆ ಧರಿಸಬೇಕು?

ಇನ್ನೊಂದು ತಲೆ ನಗುತ್ತಾ ಹೇಳಿತು - 'ನೀನು ಮೌನವಾಗಿ ನಾನು ತಿನ್ನುವುದನ್ನು ನೋಡು. ಈ ಹಣ್ಣನ್ನು ನಾನು ಕಂಡುಕೊಂಡಿದ್ದೇನೆ. ನನ್ನ ನಾಲಿಗೆಗೆ ಏನು ಬೇಕೆಂದು ನಾನೇ ನಿರ್ಧರಿಸುತ್ತೇನೆ. ಆ ದಿನವನ್ನು ಮರೆತೆಯಾ? ನಿನಗಿಷ್ಟವಾದದ್ದನ್ನು ನನಗೆ ಕೊಡದೆ ತಿಂದೆ. ಇಂದು ನನಗಿಷ್ಟ ಬಂದಿದ್ದನ್ನು ನಾನು ತಿನ್ನುತ್ತೇನೆ' ಎನ್ನುತ್ತಾ ತಿನ್ನಲಾರಂಭಿಸಿತು. 

ಮತ್ತೊಂದು ತಲೆ ಎಷ್ಟೇ ಬೇಡವೆಂದರೂ ಇದು ಕೇಳಲಿಲ್ಲ. ಕೊನೆಗೆ ವಿಷದ ಹಣ್ಣನ್ನು ತಿಂದಿದ್ದರಿಂದ ಆ ಪಕ್ಷಿ ಸತ್ತು ಹೋಯಿತು. ಎರಡೂ ತಲೆಗಳು ತಟಸ್ಥವಾದವು. 
 

PREV
Read more Articles on
click me!

Recommended Stories

ನಾಳೆ ಡಿಸೆಂಬರ್ 8 ರವಿ ಪುಷ್ಯ ಯೋಗ, 5 ರಾಶಿಗೆ ಅದೃಷ್ಟ ಮತ್ತು ಪ್ರಗತಿ
ಈ ಸಂಖ್ಯೆ ಹೊಂದಿರುವ ವ್ಯಕ್ತಿ ರಾತ್ರೋರಾತ್ರಿ ಸ್ಟಾರ್ ಆಗುತ್ತಾನೆ ಮತ್ತು ಹಣದ ಸುರಿಮಳೆಯೇ ಆಗುತ್ತದೆ!