ಇನ್ಮುಂದೆ ಸಹಕಾರಿ ಬ್ಯಾಂಕ್‌ ಆರ್‌ಬಿಐ ಅಧೀನಕ್ಕೆ

Published : Jun 28, 2020, 11:24 AM ISTUpdated : Jun 28, 2020, 11:44 AM IST
ಇನ್ಮುಂದೆ ಸಹಕಾರಿ ಬ್ಯಾಂಕ್‌ ಆರ್‌ಬಿಐ ಅಧೀನಕ್ಕೆ

ಸಾರಾಂಶ

ದೇಶಾದ್ಯಂತ ಇರುವ ಪಟ್ಟಣ ಸಹಕಾರಿ ಬ್ಯಾಂಕ್‌ಗಳು ಹಾಗೂ ಬಹುರಾಜ್ಯ ಸಹಕಾರಿ ಬ್ಯಾಂಕುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ)ನ ಅಧೀನಕ್ಕೆ ತರುವ ಕೇಂದ್ರ ಸರ್ಕಾರದ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಶನಿವಾರ ಸಹಿ ಹಾಕಿದ್ದಾರೆ. ಅದರೊಂದಿಗೆ, 1482 ಪಟ್ಟಣ ಸಹಕಾರಿ ಬ್ಯಾಂಕ್‌ ಹಾಗೂ 58 ಬಹುರಾಜ್ಯ ಸಹಕಾರಿ ಬ್ಯಾಂಕ್‌ಗಳು ಇನ್ನುಮುಂದೆ ಆರ್‌ಬಿಐನ ನಿಯಂತ್ರಣಕ್ಕೆ ಒಳಪಡಲಿವೆ.

ನವದೆಹಲಿ (ಜೂ. 28): ದೇಶಾದ್ಯಂತ ಇರುವ ಪಟ್ಟಣ ಸಹಕಾರಿ ಬ್ಯಾಂಕ್‌ಗಳು ಹಾಗೂ ಬಹುರಾಜ್ಯ ಸಹಕಾರಿ ಬ್ಯಾಂಕುಗಳನ್ನು ಭಾರತೀಯ ರಿಸವ್‌ರ್‍ ಬ್ಯಾಂಕ್‌ (ಆರ್‌ಬಿಐ)ನ ಅಧೀನಕ್ಕೆ ತರುವ ಕೇಂದ್ರ ಸರ್ಕಾರದ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಶನಿವಾರ ಸಹಿ ಹಾಕಿದ್ದಾರೆ. ಅದರೊಂದಿಗೆ, 1482 ಪಟ್ಟಣ ಸಹಕಾರಿ ಬ್ಯಾಂಕ್‌ ಹಾಗೂ 58 ಬಹುರಾಜ್ಯ ಸಹಕಾರಿ ಬ್ಯಾಂಕ್‌ಗಳು ಇನ್ನುಮುಂದೆ ಆರ್‌ಬಿಐನ ನಿಯಂತ್ರಣಕ್ಕೆ ಒಳಪಡಲಿವೆ.

ಕಾಯ್ದೆ ತಿದ್ದುಪಡಿಯಿಂದ ರಾಜ್ಯ ಸಹಕಾರಿ ಸಂಘಗಳ ರಿಜಿಸ್ಟ್ರಾರ್‌ಗೆ ಈ ಬ್ಯಾಂಕುಗಳ ಮೇಲಿರುವ ಅಧಿಕಾರ ಮೊಟಕಾಗುವುದಿಲ್ಲ ಹಾಗೂ ರಾಜ್ಯ ಸಹಕಾರಿ ಕಾಯ್ದೆಗೂ ಧಕ್ಕೆಯಾಗುವುದಿಲ್ಲ. ಹಾಗೆಯೇ ಈ ತಿದ್ದುಪಡಿ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಅನ್ವಯಿಸುವುದಿಲ್ಲ. ಸರಳವಾಗಿ ಹೇಳುವುದಾದರೆ, ತಮ್ಮ ಹೆಸರಿನಲ್ಲಿ ಬ್ಯಾಂಕ್‌, ಬ್ಯಾಂಕರ್‌ ಅಥವಾ ಬ್ಯಾಂಕಿಂಗ್‌ ಎಂಬ ಪದ ಹೊಂದಿಲ್ಲದ ಸಹಕಾರಿ ಸಂಘಗಳಿಗೆ ಇದು ಅನ್ವಯಿಸುವುದಿಲ್ಲ ಎಂದು ತಿದ್ದುಪಡಿಯಲ್ಲಿ ಹೇಳಲಾಗಿದೆ.

50 ಸಾವಿರ ರುಪಾಯಿ ದಾಟಿದ ಚಿನ್ನದ ಬೆಲೆ!

ಕಾಯ್ದೆ ತಿದ್ದುಪಡಿಯಿಂದ ಒಟ್ಟಾರೆ 8.6 ಕೋಟಿ ಠೇವಣಿದಾರರಿರುವ ಹಾಗೂ 4.85 ಲಕ್ಷ ಕೋಟಿ ರು. ಠೇವಣಿ ಹೊಂದಿರುವ ಸಹಕಾರಿ ಬ್ಯಾಂಕುಗಳು ಆರ್‌ಬಿಐನ ನಿಯಂತ್ರಣಕ್ಕೆ ಒಳಪಟ್ಟಂತಾಗುತ್ತದೆ. ಕಳೆದ ವರ್ಷ ನಡೆದ ಪಿಎಂಸಿ ಬ್ಯಾಂಕ್‌ ಹಗರಣ, ಈ ವರ್ಷ ಬೆಂಗಳೂರಿನ ಗುರುರಾಘವೇಂದ್ರ ಸಹಕಾರಿ ಬ್ಯಾಂಕ್‌ನಿಂದ ಗ್ರಾಹಕರು ಠೇವಣಿ ಹಿಂಪಡೆಯದಂತೆ ಆರ್‌ಬಿಐ ವಿಧಿಸಿದ್ದ ನಿರ್ಬಂಧಗಳ ಹಿನ್ನೆಲೆಯಲ್ಲಿ ಕಾಯ್ದೆ ತಿದ್ದುಪಡಿ ಮಹತ್ವ ಪಡೆದಿದೆ.

ಸಹಕಾರಿ ಬ್ಯಾಂಕುಗಳಲ್ಲಿ ಹೆಚ್ಚುತ್ತಿರುವ ಅವ್ಯವಹಾರಗಳ ಹಿನ್ನೆಲೆಯಲ್ಲಿ ಗ್ರಾಹಕರ ಠೇವಣಿಗೆ ಸುರಕ್ಷತೆ ಒದಗಿಸಲು ಹಾಗೂ ಸಹಕಾರಿ ಬ್ಯಾಂಕುಗಳ ಆಡಳಿತವನ್ನು ಸುಧಾರಿಸಲು ಬ್ಯಾಂಕಿಂಗ್‌ ನಿಯಂತ್ರಣ (ತಿದ್ದುಪಡಿ) ಸುಗ್ರೀವಾಜ್ಞೆ-2020 ಜಾರಿಗೊಳಿಸಲು ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿತ್ತು. ಅದು ಈಗ ಜಾರಿಗೆ ಬಂದಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್, ಪುತ್ರನ ವಿರುದ್ದ 228 ಕೋಟಿ ರೂ ವಂಚನೆ ಕೇಸ್
ಮದ್ಯ ಮಾರಾಟಕ್ಕೆ ಇಳಿದ ಯುವರಾಜ್‌ ಸಿಂಗ್‌, ಒಂದು ತಿಂಗಳ ಸಂಬಳಕ್ಕೆ ಬರುತ್ತೆ ಒಂದು ಬಾಟಲ್‌!