Asianet Suvarna News Asianet Suvarna News

ಭಾರತೀಯತೆ ಅಪ್ಪಿಕೊಂಡಿದ್ದ ಸಿಸರ್ ಬಾಬಾ ಇನ್ನಿಲ್ಲ!

ಭಾರತದಲ್ಲೇ ಹುಟ್ಟುವ ಅದೆಷ್ಟೋ ಜನ ದೇಶಿ ಸಂಸ್ಕೃತಿ, ಆಚಾರ- ವಿಚಾರ ವಿರೋಧಿಸುತ್ತಾರೆ. ಆದರೆ, ಇಟಲಿಯಿಂದ ಭಾರತಕ್ಕೆ ಪ್ರವಾಸಕ್ಕೆಂದು ಬಂದು ಹಿಂದೂ ಧರ್ಮದಿಂದ ಪ್ರೇರಣೆಗೊಂಡು ಸನ್ಯಾಸ ದೀಕ್ಷೆ ಪಡೆದಿದ್ದ  ಸಿಸರ್ ಬಾಬಾ ನಿನ್ನೆ ಮೃತಪಟ್ಟಿದ್ದಾರೆ. 

Italy Sisar Baba Died in Gangavati
Author
Bengaluru, First Published Dec 29, 2018, 7:44 PM IST

ಕೊಪ್ಪಳ(ಡಿ.29): ಅನಾರೋಗ್ಯದ ಹಿನ್ನಲೆಯಲ್ಲಿ ಇಟಲಿ‌ ಮೂಲದ ಸಿಸರ್ ಬಾಬಾ ನಿನ್ನೆ ರಾತ್ರಿ ಕೊಪ್ಪಳದ ಗಂಗಾವತಿಯಲ್ಲಿ ಮೃತಪಟ್ಟಿದ್ದಾರೆ.

ಭಾರತದಲ್ಲೇ ಹುಟ್ಟುವ ಅದೆಷ್ಟೋ ಜನ ದೇಶಿ ಸಂಸ್ಕೃತಿ, ಆಚಾರ- ವಿಚಾರ ವಿರೋಧಿಸುತ್ತಾರೆ. ಆದರೆ, ಇಟಲಿಯಿಂದ ಭಾರತಕ್ಕೆ ಪ್ರವಾಸಕ್ಕೆಂದು ಬಂದು ಹಿಂದೂ ಧರ್ಮದಿಂದ ಪ್ರೇರಣೆಗೊಂಡು ಸನ್ಯಾಸ ದೀಕ್ಷೆ ಪಡೆದಿದ್ದ  ಸಿಸರ್ ಬಾಬಾ ನಿನ್ನೆ ಮೃತಪಟ್ಟಿದ್ದಾರೆ. 

ಮೂಲತಃ ಇಟಲಿಯ‌ ರೋಮ್ ನಗರದ ಈ ಬಾಬಾ, ಹಿಂದೂ ಧರ್ಮದಿಂದ ಪ್ರೇರಣೆಗೊಂಡು ಸನ್ಯಾಸ ದೀಕ್ಷೆ ಪಡೆದಿದ್ದರಂತೆ.‌  ಅಲ್ಲದೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಋಷಿಮುಖ ಪರ್ವತದಲ್ಲಿ ವಾಸವಾಗಿದ್ದ ಸಿಸರ್ ಹೆಸರಿನ ಬಾಬಾ ನಾಗಸಾಧುಗಳನ್ನು ನಾಚಿಸುವಂತೆ ಶಿವ ಪೂಜೆ ಮಾಡ್ತಾ ಇದ್ದರು. 

"

ಇನ್ನು ಕಳೆದ 30 ವರ್ಷದಿಂದ ಇಲ್ಲೇ ವಾಸವಾಗಿರುವ‌ ಬಾಬಾ, ತಾವು ಮೃತಪಟ್ಟರೆ ಭಾರತದಲ್ಲೇ ಅಂತ್ಯ ಸಂಸ್ಕಾರ ಮಾಡುವಂತೆ ಮನವಿ ಮಾಡಿದ್ದರಂತೆ.‌  

ಈ ಹಿನ್ನೆಲೆಯಲ್ಲಿ ಗಂಗಾವತಿ ಪೊಲೀಸರು ಇಟಲಿ ರಾಯಭಾರಿ ಕಚೇರಿಗೆ ಕರೆ ಮಾಡಿ, ಅಂತ್ಯ ಸಂಸ್ಕಾರಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ವಾರಾಂತ್ಯದ ರಜೆ ಇರುವುದರಿಂದ ಸೋಮವಾರ ಕಚೇರಿ ಆರಂಭವಾದ ಬಳಿಕ ಮಾತುಕತೆ ನಡೆಸಿ ಅಂತ್ಯ ಸಂಸ್ಕಾರ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Follow Us:
Download App:
  • android
  • ios