Asianet Suvarna News Asianet Suvarna News

ಕದ್ದ ಕಲ್ಲು ಒಡೆಯುತ್ತಿದ್ದೋರ‍್ಯಾರು, ದಾಖಲೆ ಬಿಡುಗಡೆ ಮಾಡಲಿ: ಕುಮಾರಸ್ವಾಮಿ

ಸರ್ಕಾರದ ರೆಕಾರ್ಡ್ ತಿದ್ದಿ, ಅಮಾಯಕರ ಭೂಮಿ ಯನ್ನು ಧಮ್ಮಿ ಹಾಕಿ ದಬ್ಬಾಳಿಕೆಯಿಂದ ಕಿತ್ತು ಕಲ್ಲು ಒಡೆಯುತ್ತಿದ್ದರಲ್ವ, ಅದನ್ನು ಮಾಡಿದವರು ಯಾರು ಅಂತ ಮೊದಲು ಹೇಳಲಿ ಎಂದು ತಿರುಗೇಟು ನೀಡಿದ ಎಚ್.ಡಿ. ಕುಮಾರಸ್ವಾಮಿ 

Former CM HD Kumaraswamy React to Bengaluru Rural Congress MP DK Suresh Statement grg
Author
First Published Apr 19, 2024, 8:30 AM IST

ಮೈಸೂರು(ಏ.19): ದೇವೇಗೌಡರ ಕುಟುಂಬದವರು ಕಲ್ಲು ಒಡೆಯುತ್ತಿದ್ದರು ಸಂಸದ ಡಿ.ಕೆ.ಸುರೇಶ್ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ. 

ನಗರದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ ಅವರು, ಸರ್ಕಾರದ ರೆಕಾರ್ಡ್ ತಿದ್ದಿ, ಅಮಾಯಕರ ಭೂಮಿ ಯನ್ನು ಧಮ್ಮಿ ಹಾಕಿ ದಬ್ಬಾಳಿಕೆಯಿಂದ ಕಿತ್ತು ಕಲ್ಲು ಒಡೆಯುತ್ತಿದ್ದರಲ್ವ, ಅದನ್ನು ಮಾಡಿದವರು ಯಾರು ಅಂತ ಮೊದಲು ಹೇಳಲಿ ಎಂದು ತಿರುಗೇಟು ನೀಡಿದ್ದಾರೆ. 

ಲೋಕಸಭೆ ಚುನಾವಣೆ ನಂತರ ರಾಜ್ಯ ಸರ್ಕಾರ ಅಸ್ತಿತ್ವದಲ್ಲಿ ಇರುವುದೇ ಡೌಟ್: ಎಚ್.ಡಿ.ಕುಮಾರಸ್ವಾಮಿ

ಸಾವಿರಾರು ಜನ ಕಲ್ಲಿನ ಬ್ಯುಸಿನೆಸ್ ಮಾಡುತ್ತಾರೆ. ಯಾರು ಕಲ್ಲು ಒಡೆಯುತ್ತಿದ್ದರು, ಕಳ್ಳತನದಿಂದ ಕಾನೂನು ಬಾಹಿರವಾಗಿ ಯಾರು ಕಲ್ಲು ಒಡೆದರು ಎಂಬ ಕುರಿತು ದಾಖಲೆಬಿಡುಗಡೆಮಾಡಲಿ. ನಮ್ಮ ಕುಟುಂಬಸ್ಥರು ಅಥವಾ ಬೇರಿನ್ಯಾವ ಕುಟುಂ ಬಸ್ಥರ ದಾಖಲೆ ಇದ್ದರೂ ಬಿಡುಗಡೆ ಮಾಡಲಿ. ನಾನು ಆ ವ್ಯವಹಾರ ಮಾಡಿಲ್ಲ. ನನ್ನ ಕುಟುಂಬ ಎಂದರೆ ನಾನು, ನನ್ನ ಹೆಂಡತಿ, ಮಗ, ಸೊಸೆ ಮೊಮ್ಮಗ ಅಷ್ಟೆ ಎಂದರು.

Follow Us:
Download App:
  • android
  • ios