Asianet Suvarna News Asianet Suvarna News

ಮೋದಿಗೆ ಹಿಂದೂ-ಮುಸ್ಲಿಂ ರೋಗವಿದೆ: ಕೆಸಿಆರ್!

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕೆಸಿಆರ್ ವಾಗ್ದಾಳಿ! ಮೋದಿಗೆ ಹಿಂದೂ-ಮುಸ್ಲಿಂರನ್ನು ಒಡೆಯುವ ಕಾಯಿಲೆ! ಮುಸ್ಲಿಮರ ಮೀಸಲಾತಿ ಪ್ರಸ್ತಾವ ತಡೆದಿರುವ ಕೇಂದ್ರ ಸರ್ಕಾರ! ಲೋಕಸಭೆ ಚುನಾವಣೆಯಲ್ಲಿ ಟಿಆರ್ ಎಸ್ ಗೆದ್ದರೆ ಮೀಸಲಾತಿ ಹೆಚ್ಚಳ

Telangana CM Says PM Modi Has Hindu Muslim Disease
Author
Bengaluru, First Published Nov 23, 2018, 7:46 PM IST

ಹೈದರಾಬಾದ್(ನ.23): ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಗೆ ಹಿಂದೂ - ಮುಸ್ಲಿಮರನ್ನು ಒಡೆಯುವ ಕಾಯಿಲೆ ಇದೆ ಎಂದು ತೆಲಂಗಾಣ ಹಂಗಾಮಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಆರೋಪಿಸಿದ್ದಾರೆ.

ಇಂದು ನರ್ಸಂಪೇಟ್ ನಲ್ಲಿ ಚುನಾವಣಾ ಪ್ರಚಾರ ಉದ್ದೇಶಿಸಿ ಮಾತನಾಡಿದ ಟಿಆರ್ ಎಸ್ ಮುಖ್ಯಸ್ಥ, ಪ್ರಧಾನಿಗೆ ಎಲ್ಲರನ್ನೂ ಸಮಾನವಾಗಿ ನೋಡಿಕೊಳ್ಳುವ ಹೃದಯವಿಲ್ಲ. ಮೋದಿಗೆ ಮತ್ತು ಬಿಜೆಪಿಗೆ ಕೋಮುವಾದಿ ಹುಚ್ಚು ಹಿಡಿದಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು.

ರಾಜ್ಯ ಸರ್ಕಾರಿ ನೌಕರಿಯಲ್ಲಿರುವ ಮುಸ್ಲಿಮರ ಮೀಸಲಾತಿಯನ್ನು ಶೇ.4ರಿಂದ ಶೇ.12ಕ್ಕೆ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ.6ರಿಂದ 10ಕ್ಕೆ ಏರಿಸಬೇಕು ಎಂದು ನಿರ್ಣಯ ಕೈಗೊಂಡಿದ್ದರೂ ಕೇಂದ್ರ ಸರ್ಕಾರ ಅದನ್ನು ತಡೆ ಹಿಡಿದಿದೆ ಎಂದು ಕೆಸಿಆರ್ ಆರೋಪಿಸಿದರು.

ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 17 ಲೋಕಸಭಾ ಕ್ಷೇತ್ರದಲ್ಲಿ ಜನ ಟಿಆರ್ ಎಸ್ ಅನ್ನು ಗೆಲ್ಲಿಸಿದರೆ ಮೀಸಲಾತಿಯನ್ನು ಹೆಚ್ಚಿಸುವಂತೆ ನೋಡಿಕೊಳ್ಳಲಾಗುವುದು ಎಂದು ಚಂದ್ರಶೇಖರ್ ರಾವ್ ಭರವಸೆ ನೀಡಿದರು.

Follow Us:
Download App:
  • android
  • ios