'ಪ್ರಧಾನಿ ಮೋದಿಗಿದೆ ಇಂತಹ ರೋಗ : ಕೆಸಿಆರ್
ಪ್ರಧಾನಿ ನರೇಂದ್ರ ಮೋದಿ ಇಂತಹ ಒಂದು ರೋಗವಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್ ರಾವ್ ಅವರು ಹೇಳಿದ್ದಾರೆ.
ಹೈದ್ರಾಬಾದ್ : ಹಿಂದೂ-ಮುಸ್ಲಿಂ ರೋಗ’ ಇದೆ. ಇದರಿಂದ ಇತರರಿಗೆ ‘ಜಾತಿಯ ಹುಚ್ಚು’ ಹಿಡಿಯುತ್ತದೆ ಎಂದು ತೆಲಂಗಾಣದ ಸಿಎಂ ಚಂದ್ರಶೇಖರ ರಾವ್ ಆರೋಪಿಸಿದ್ದಾರೆ.
ಇಲ್ಲಿ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಅವರು, ‘ಮೋದಿ ಹಾಗೂ ಬಿಜೆಪಿಗೆ ಒಂದು ರೋಗವಿದೆ.
ಅದು ಹಿಂದೂ-ಮುಸ್ಲಿಂ ವಿಭಜಿಸುವ ರೋಗ. ಹೀಗಾಗಿಯೇ ಬಿಜೆಪಿಯವರು ಪರಿಶಿಷ್ಟ ಜಾತಿ ಹಾಗೂ ಮುಸ್ಲಿಮರಿಗೆ ಮೀಸಲಾತಿ ಸಿಗದಂತೆ ತಡೆ ಒಡ್ಡಿದ್ದಾರೆ. ಪ್ರತಿಯೊಂದರಲ್ಲೂ ಅವರು ಹಿಂದೂ-ಮುಸ್ಲಿಂ ಎಂದು ವಿಭಜಿಸುತ್ತಾರೆ’ ಎಂದು ಟೀಕಿಸಿದರು.