Asianet Suvarna News Asianet Suvarna News

ಕಾವೇರಿ ನೀರಿಗಾಗಿ ತಮಿಳುನಾಡು ಖ್ಯಾತೆ; ಸುಪ್ರೀಂಕೋರ್ಟ್'ನಲ್ಲಿ ಮುಖಭಂಗ

ಕಾವೇರಿ ನೀರಿಗಾಗಿ ತಮಿಳುನಾಡು ಮತ್ತೆ ಖ್ಯಾತೆ ತೆಗೆದಿದೆ. ನೀರು ಕೇಳಿ ಸುಪ್ರೀಂಕೋರ್ಟ್​ನಲ್ಲಿ ತಮಿಳುನಾಡು ಮುಖಭಂಗಕ್ಕೀಡಾಗಿದೆ.  

Tamilnadu facing Embarassment in Supreme Court

ನವದೆಹಲಿ (ನ.21): ಕಾವೇರಿ ನೀರಿಗಾಗಿ ತಮಿಳುನಾಡು ಮತ್ತೆ ಖ್ಯಾತೆ ತೆಗೆದಿದೆ. ನೀರು ಕೇಳಿ ಸುಪ್ರೀಂಕೋರ್ಟ್​ನಲ್ಲಿ ತಮಿಳುನಾಡು ಮುಖಭಂಗಕ್ಕೀಡಾಗಿದೆ.  

ಕರ್ನಾಟಕ 53  ಟಿಎಂಸಿ ನೀರು ಬಿಡುವಂತೆ  ತಮಿಳುನಾಡು ಸುಪ್ರೀಂಕೋರ್ಟ್ ಎದುರು ಬೇಡಿಕೆ ಇಟ್ಟಿದ್ದು,  ಮಧ್ಯಂತರ ಅರ್ಜಿ ಸಲ್ಲಿಸಲು ಅವಕಾಶ ಕೋರಿದೆ. ತಮಿಳುನಾಡಿನ ಮನವಿಯನ್ನು ಸುಪ್ರೀಂಕೋರ್ಟ್  ತಿರಸ್ಕರಿಸಿದೆ.  ಪ್ರಕರಣ ಈಗಾಗಲೇ ನ್ಯಾಯಾಲಯದ ವ್ಯಾಪ್ತಿಯಲ್ಲಿದ್ದು, ತೀರ್ಪು ಕಾದಿರಿಸಿದ್ದೇವೆ.  ಈ ಸಂದರ್ಭದಲ್ಲಿ ಮಧ್ಯಂತರ ಅರ್ಜಿ ಸಲ್ಲಿಕೆಗೆ ಅವಕಾಶ ಇಲ್ಲ ಎಂದು ಮುಖ್ಯ ನ್ಯಾ. ದೀಪಕ್ ಮಿಶ್ರಾ ಅವರಿದ್ದ ತ್ರಿಸದಸ್ಯ ಪೀಠ ಹೇಳಿದೆ.

Follow Us:
Download App:
  • android
  • ios