Asianet Suvarna News Asianet Suvarna News

ಬಿ.ಎಸ್‌. ಯಡಿಯೂರಪ್ಪಗೆ ಮತ್ತೆ ಮುಖ್ಯಮಂತ್ರಿ ಪಟ್ಟ

ಇನ್ನೇನು ದೇಶದಲ್ಲಿ ಚುನಾವಣೆ ಸಮೀಪಿಸುತ್ತಿದೆ. ಇದೇ ಸಂದರ್ಭದಲ್ಲಿ ಸನಾತನ ಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದು ದೇಶದಲ್ಲಿ  ಬಿ.ಎಸ್ ಯಡಿಯೂರಪ್ಪ ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಿದ್ದಾರೆ. 

Sanatan Shri Predicts Again BS Yeddyurappa Will Become Karnataka CM
Author
Bengaluru, First Published Nov 24, 2018, 10:47 AM IST

ನೆಲಮಂಗಲ :  ಮುಂಬ​ರು​ವ ಲೋಕ​ಸಭಾ ಚುನಾ​ವ​ಣೆ​ಯಲ್ಲಿ ಯಾವುದೇ ಪಕ್ಷಕ್ಕೆ ಬಹು​ಮ​ತ ಬರುವುದಿಲ್ಲ. ಆದರೆ, ನರೇಂದ್ರ ​ಮೋದಿ ಮತ್ತೊಮ್ಮೆ ಪ್ರಧಾ​ನಿ​ಯಾ​ಗ​ಲಿದ್ದಾರೆ. 

ಅದೇ ರೀತಿ ರಾಜ್ಯ​ದಲ್ಲಿ ಬಿಜೆಪಿ ರಾಜ್ಯಾ​ಧ್ಯಕ್ಷ ಬಿ.ಎ​ಸ್‌.​ಯ​ಡಿ​ಯೂ​ರಪ್ಪ ಕೂಡ ಮತ್ತೊಮ್ಮೆ ಮುಖ್ಯ​ಮಂತ್ರಿ​ಯಾ​ಗ​ಲಿ​ದ್ದಾರೆ ಎಂದು ತಾಲೂ​ಕಿ​ನ ಅರ್ಜುನ ಬೆಟ್ಟ​ಹ​ಳ್ಳಿಯ ಶ್ರೀ ಪರಿ​ಪೂರ್ಣ ಸನಾ​ತನ ಮಠದ ಶ್ರೀನಿ​ವಾಸ ಸ್ವಾಮೀಜಿ ಭವಿಷ್ಯ ನುಡಿ​ದಿದ್ದಾ​ರೆ. ಶುಕ್ರ​ವಾರ ಸಂಜೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮಠಕ್ಕೆ ಭೇಟಿ ನೀಡಿ​ದಾಗ ಆಶೀ​ರ್ವ​ದಿಸಿ ಈ ಭವಿಷ್ಯ ಹೇಳಿದರು.

2019ರ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟಬಹುಮತ ಬರುವುದಿಲ್ಲ. ಆದರೆ 2019ರ ಚುನಾವಣೆ ನಂತರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ. ರಾಜ್ಯದಲ್ಲಿ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಇದೇ ವೇಳೆ ತಿಳಿಸಿದ್ದಾರೆ.

Follow Us:
Download App:
  • android
  • ios