ಮನ್ ಕಿ ಬಾತ್ ಧ್ವನಿ ನಂದಲ್ಲ: ಪ್ರಧಾನಿ ಮೋದಿ!
50ನೇ ಕಂತು ಪೂರೈಸಿದ ಪ್ರಧಾನಿ ಮೋದಿ ಮನ್ ಕಿ ಬಾತ್! ಮನ್ ಕಿ ಬಾತ್ ಸರ್ಕಾರದ ಧ್ವನಿಯಲ್ಲ ಎಂದ ಪ್ರಧಾನಿ ಮೋದಿ! ಮನ್ ಕಿ ಬಾತ್ ಪ್ರತಿಯೊಬ್ಬ ಭಾರತೀಯನ ಧ್ವನಿ ಎಂದ ಮೋದಿ! ಮನ್ ಕಿ ಬಾತ್ ಆರಂಭಿಸುವ ಹಿಂದಿನ ಕಾರಣ ಬಿಚ್ಚಟ್ಟ ಪ್ರಧಾನಿ! ಶೇ.70 ರಷ್ಟು ಜನ ಮನ್ ಕಿ ಬಾತ್ ಕಾರ್ಯಕ್ರಮ ಕೇಳುತ್ತಾರೆ
ನವದೆಹಲಿ(ನ.25): ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ಸರ್ಕಾರದ ಧ್ವನಿಯಲ್ಲ, ಬದಲಿಗೆ ಅದು ಭಾರತದ ಧ್ವನಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
A big thank you to all those sisters and brothers from across the length and breadth of India who have been a part of the ‘Mann Ki Baat’ journey for the last 50 episodes. I look forward to more people enriching the platform with their participation. #MannKiBaat50
— Narendra Modi (@narendramodi) November 25, 2018
ಪ್ರಧಾನಿ ಅವರ ಜನಪ್ರಿಯಮಾಸಿಕ 'ಮನ್ ಕಿ ಬಾತ್' ರೇಡಿಯೋ ಕಾರ್ಯಕ್ರಮ ಇಂದಿಗೆ 50ನೇ ಕಂತುಗಳನ್ನು ಪೂರೈಸಿದ್ದು, ಈ ಹಿನ್ನಲೆಯಲ್ಲಿ ಮನ್ ಕಿ ಬಾತ್ ನ ಪ್ರಯಾಣವನ್ನು ಮೋದಿ ಮೆಲುಕು ಹಾಕಿದ್ದಾರೆ.
ಮನ್ ಕಿ ಬಾತ್ ಕೇವಲ ಸರ್ಕಾರದ ಧ್ವನಿಯಲ್ಲ. ಇದು ಪ್ರತಿಯೊಬ್ಬ ಭಾರತೀಯನ ಧ್ವನಿಯಾಗಿದೆ. ಭಾರತದ ಆಕಾಂಕ್ಷೆಗಳ ಬಗ್ಗೆ ಇದು ಮಾತನಾಡುತ್ತದೆ. ಮನ್ ಕಿ ಬಾತ್ ಬಗ್ಗೆ ಕೆಲ ಯುವ ಸ್ನೇಹಿತರು ಅಧ್ಯಯನ ನಡೆಸಲು ಯತ್ನಿಸಿದ್ದಾರೆ ಎಂದು ಮೋದಿ ಹೇಳಿದರು.
Someone asked me today- how much do you prepare before every episode.
— Narendra Modi (@narendramodi) November 25, 2018
My simple answer- nothing...because 'Mann Ki Baat' is the voice of 130 crore Indians. What is shared is their ideas and inputs. #MannKiBaat50 pic.twitter.com/GDHkku1VBO
ಮನ್ ಕಿ ಬಾತ್ ನಲ್ಲಿ ತಾವು ಆಡಿದ್ದ ಮಾತುಗಳನ್ನು ವಿಮರ್ಶೆ ಮಾಡಲಾಗಿದ್ದು, ರಾಜಕೀಯವಲ್ಲದ ವಿಚಾರಗಳ ಬಗ್ಗೆಯೇ ಹೆಚ್ಚು ಮಾತನಾಡಿರುವುದನ್ನು ವರದಿಯಲ್ಲಿ ತಿಳಿಸಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಜನರ ಮನಸ್ಸನ್ನು ತಲುಪಲು ರೇಡಿಯೋ ಅತ್ಯುತ್ತಮವಾದದ್ದು ಎಂದು ನಾನು ತಿಳಿಸಿದ್ದೆ. ನಾನು ಪ್ರಧಾನಮಂತ್ರಿಯಾದಾಗ ದೇಶವನ್ನು ಒಗ್ಗೂಡಿಸಲು ವೇದಿಕೆ ಬೇಕಿತ್ತು. ಹೀಗಾಗಿ ಮನ್ ಕಿ ಬಾತ್ ಆರಂಭಿಸಿದ್ದಾಗಿ ಮೋದಿ ಹೇಳಿದರು.
'Mann Ki Baat' manifests the spirit of young and aspirational India, an India that will not easily accept status quo, an India that is at the forefront of innovation and vibrancy. #MannKiBaat50 pic.twitter.com/p03NLesbTg
— Narendra Modi (@narendramodi) November 25, 2018
ಮನ್ ಕಿ ಬಾತ್ ಕಾರ್ಯಕ್ರಮ ಕುರಿತಂತೆ ಆಲ್ ಇಂಡಿಯಾ ರೇಡಿಯಾ ಸಮೀಕ್ಷೆ ನಡೆಸಿದ್ದು, ಕಾರ್ಯಕ್ರಮವನ್ನು ಪ್ರತಿನಿತ್ಯ ಶೇ.70 ರಷ್ಟು ಕೇಳುತ್ತಿರುವುದು ತಿಳಿದುಬಂದಿದೆ. ಟಿವಿ. ಎಫ್ಎಂ ರೇಡಿಯೋ, ಮೊಬೈಲ್, ಇಂಟರ್ನೆಟ್, ಫೇಸ್ ಬುಕ್ ಮೂಲಕ ಜನರು ಸಂಪರ್ಕವನ್ನು ಹೊಂದುತ್ತಿದ್ದಾರೆ.
ಮನ್ ಕಿ ಬಾತ್ ನಿಂದ ನಮ್ಮ ಸಮಾಜದಲ್ಲಿ ಧನಾತ್ಮಕ ಪರಿಣಾಮಗಳು ಬೀರುತ್ತಿವೆ ಎಂದು ಜನರು ನಂಬಿದ್ದಾರೆ. ಮನ್ ಕಿ ಬಾತ್ ನಿಂದ ಹಲವಾರು ವಿಚಾರಗಳ ಬಗ್ಗೆ ಜನರು ಚರ್ಚೆ ನಡೆಸಲು ಆರಂಭಿಸಿದ್ದಾರೆ.
'Mann Ki Baat' is about the inherent strength of our society. It is about the power of collective efforts to bring a positive change in India.
— Narendra Modi (@narendramodi) November 25, 2018
One of the listeners asked me how has this medium remained apolitical. Here is what I said. #MannKiBaat50 pic.twitter.com/eDWefa8mZa
ಸರ್ಕಾರ ಅತ್ಯಂತ ಮುಖ್ಯವಾದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಕರ್ತಾರ್ಪುರ ಕಾರಿಡಾರ್ ತೆರೆಯುವ ಮೂಲಕ ಪಾಕಿಸ್ತಾನದ ಕರ್ತಾರ್ಪುರಕ್ಕೆ ಜನರು ಸುಲಭವಾಗಿ ಹೋಗಲು, ಗುರು ನಾನಕ್ ದೇವ್ ಅವರ ಪಾವಿತ್ರ್ಯ ಸ್ಥಳಕ್ಕೆ ಭೇಟಿ ನೀಡಲು ಅನುವು ಮಾಡಿಕೊಟ್ಟಿದೆ ಎಂದು ಇದೇ ವೇಳೆ ಪ್ರಧಾನಿ ಮಾಹಿತಿ ನೀಡಿದರು.