ಬಾಹುಬಲಿ ಮಹಾಮಸ್ತಾಭಿಷೇಕ: ರೈಲ್ವೇ ಇಲಾಖೆಯಿಂದ ಹೆಚ್ಚುವರಿ ರೈಲು, ಹಲವು ವ್ಯವಸ್ಥೆ
ಯಶವಂತಪುರ - ಶ್ರವಣಬೆಳಗೊಳ, ಶ್ರವಣಬೆಳಗೊಳ - ಹಾಸನಕ್ಕೆ ಹೆಚ್ಚುವರಿ ರೈಲು, ಮೀರಜ್ನಿಂದ ಹಾಸನಕ್ಕೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದ್ದು ಫೆ.26ರವರೆಗೂ ರೈಲುಗಳು ಸಂಚರಿಸಲಿವೆ.
ಬೆಂಗಳೂರು(ಫೆ.12): ಶ್ರವಣ ಬೆಳಗೊಳದಲ್ಲಿ ನಡೆಯುತ್ತಿರುವ ಬಾಹುಬಲಿ ಮಹಾಮಸ್ತಾಭಿಷೇಕ ಹಿನ್ನಲೆಯಲ್ಲಿ ಪ್ರಯಾಣಿಕರು, ಪ್ರವಾಸಿಗರು, ಯಾತ್ರಾರ್ಥಿಗಳ ಅನುಕೂಲಕ್ಕಾಗಿ ರೈಲ್ವೇ ಇಲಾಖೆ ಹೆಚ್ಚುವರಿ ರೈಲುಗಳು ಸೇರಿದಂತೆ ಹಲವು ವ್ಯವಸ್ಥೆ ಮಾಡಲಾಗಿದೆ.
ಯಶವಂತಪುರ - ಶ್ರವಣಬೆಳಗೊಳ, ಶ್ರವಣಬೆಳಗೊಳ - ಹಾಸನಕ್ಕೆ ಹೆಚ್ಚುವರಿ ರೈಲು, ಮೀರಜ್ನಿಂದ ಹಾಸನಕ್ಕೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದ್ದು ಫೆ.26ರವರೆಗೂ ರೈಲುಗಳು ಸಂಚರಿಸಲಿವೆ. ಶ್ರವಣಬೆಳಗೊಳದಲ್ಲಿ 8 ವಿಶೇಷ ಟಿಕೆಟ್ ಕೌಂಟರ್ಗಳನ್ನು ತೆರೆಯಲಾಗಿದ್ದು ಸಂಗೊಳ್ಳಿ ರಾಯಣ್ಣ ನಿಲ್ದಾಣ, ಯಶವಂತಪುರ, ಶ್ರವಣಬೆಳಗೊಳದಲ್ಲಿ ಮಾಹಿತಿ ಫಲಕಗಳ ಅಳವಡಿಸಲಾಗಿದೆ.
ಶ್ರವಣಬೆಳಗೊಳದಲ್ಲಿ 2 ಸಾವಿರ ಜನರು ಕೂರುವ ಶೆಲ್ಟರ್, ನಿಲ್ದಾಣದಲ್ಲಿ ಹೆಚ್ಚುವರಿ ಶೌಚಾಲಯಗಳು, ವಿಕಲಾಂಗರಿಗೆ ವೀಲ್ಹ್ ಚೇರ್, ರೈಲ್ವೆ ನಿಲ್ದಾಣಕ್ಕೆ ಬರುವ ವಾಹನಗಳಿಗೆ ಪಾರ್ಕಿಂಗ್,ಹೆಚ್ಚಿನ ಭದ್ರತಾ ಸಿಬ್ಬಂದಿ, ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ, ಮೆಡಿಕಲ್ ವ್ಯವಸ್ಥೆ ಸೇರಿದಂತೆ ಪ್ರಯಾಣಿಕರಿಗೆ ಹಲವು ಅನುಕೂಲ ಕಲ್ಪಿಸಲಾಗಿದೆ.