ಮಗನ ಸಾವಿನಿಂದ ನೊಂದು ತಂದೆಯೂ ಸಾವು
ಪುತ್ರನ ಸಾವಿನಿಂದ ನೊಂದಿದ್ದ ತಂದೆಯೂ ಹೃದಯಾಘಾತದಿಂದ ಮೃತಪಟ್ಟ ಘಟನೆ ಚಿತ್ರದುರ್ಗದ ಆಲಘಟ್ಟ ಗ್ರಾಮದಲ್ಲಿ ನಡೆದಿದೆ.
ಚಿತ್ರದುರ್ಗ : ಪುತ್ರನ ಸಾವಿನಿಂದ ನೊಂದಿದ್ದ ತಂದೆಯೂ ಹೃದಯಾಘಾತದಿಂದ ಮೃತಪಟ್ಟ ಘಟನೆ ಇಲ್ಲಿನ ಆಲಘಟ್ಟ ಗ್ರಾಮದಲ್ಲಿ ನಡೆದಿದೆ.
ಶೇಖರಪ್ಪ ಮೃತ ತಂದೆಯಾಗಿದ್ದು, ಅವರ ಪುತ್ರ ಶಶಿಧರ [32] ಹೊಳಲ್ಕೆರೆ ತಾಲೂಕಿನ ಕೆಪಿಟಿಸಿಎಲ್ ನಲ್ಲಿ ಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿದ್ದರು.
ಜನವರಿ 31 ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಪುತ್ರನ ಸಾವಿನಿಂದ ನೊಂದಿದ್ದ ತಂದೆಯೂ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.