Asianet Suvarna News Asianet Suvarna News

ಮಹಾಭಾರತದಲ್ಲಿ ಭಾನುಮತಿ ಯಾರು? ಆಕೆಯನ್ನೂ ಇಂದಿಗೂ ನೆನೆಸಿಕೊಳ್ಳೋಕೆ ಕಾರಣವೇನು?

ಮಹಾಭಾರತದಲ್ಲಿ ಭಾನುಮತಿಯ ಪ್ರಸ್ತಾಪ ಕಡಿಮೆ ಇರಬಹುದು, ಆದರೆ ಆಕೆಯ ಪಾತ್ರವನ್ನು ಪ್ರಮುಖವೆಂದು ಪರಿಗಣಿಸಲಾಗಿದೆ. ಭಾನುಮತಿ ಯಾರು, ದುರ್ಯೋಧನನಿಗೂ ಅವಳಿಗೂ ಏನು ಸಂಬಂಧ?

Who was Bhanumati why is she mentioned from Mahabharata till today skr
Author
First Published May 15, 2024, 6:31 PM IST

ಮಹಾಭಾರತವನ್ನು ಅತ್ಯಂತ ವಿನಾಶಕಾರಿ ಯುದ್ಧವೆಂದು ಪರಿಗಣಿಸಲಾಗಿದೆ. ಮಹಾಭಾರತದ ಪ್ರಸ್ತಾಪ ಬಂದಾಗಲೆಲ್ಲಾ, ಅದರ ಪ್ರಮುಖ ಪಾತ್ರಗಳಾದ ದುರ್ಯೋಧನ, ಪಾಂಡವರು, ದ್ರೌಪದಿ, ಶಕುನಿ ಮುಂತಾದವರ ಹೆಸರುಗಳು ಬಂದವು. ಮತ್ತೊಂದು ಹೆಸರು ಭಾನುಮತಿ- ಪ್ರಸ್ತಾಪ ಕಡಿಮೆ ಇದ್ದರೂ ಪಾತ್ರ ದೊಡ್ಡದಿದೆ.

ಈ ಭಾನುಮತಿ ಯಾರು, ದುರ್ಯೋಧನನಿಗೂ ಅವಳಿಗೂ ಏನು ಸಂಬಂಧ? ಭಾನುಮತಿಯ ಕಥೆ ಇಲ್ಲಿದೆ.

ಭಾನುಮತಿ ಯಾರು?
ಭಾನುಮತಿ ಕಾಂಬೋಜ ರಾಜ ಚಂದ್ರವರ್ಮನ ಮಗಳು. ಭಾನುಮತಿ ಅತ್ಯಂತ ಸುಂದರ ಮತ್ತು ಬುದ್ಧಿವಂತ ಮಹಿಳೆ. ಭಾನುಮತಿ ಕುಸ್ತಿಯಲ್ಲೂ ನಿಪುಣಳಾಗಿದ್ದಳು. ರಾಜ ಚಂದ್ರವರ್ಮನು ತನ್ನ ಮಗಳು ಭಾನುಮತಿಯ ವಿವಾಹಕ್ಕಾಗಿ ಸ್ವಯಂವರವನ್ನು ಏರ್ಪಡಿಸಿದನು ಮತ್ತು ಅದರಲ್ಲಿ ದುರ್ಯೋಧನನೂ ಭಾಗವಹಿಸಿದನು. ಭಾನುಮತಿಯನ್ನು ಕಂಡ ಕೂಡಲೇ ಅವಳ ಸೌಂದರ್ಯಕ್ಕೆ ಮನಸೋತನು.


 

ದುರ್ಯೋಧನ ಮತ್ತು ಭಾನುಮತಿ ಮದುವೆ
ಸ್ವಯಂವರಕ್ಕೆ ಮಾಲೆ ಹಿಡಿದು ಭಾನುಮತಿ ಮುಂದೆ ಬಂದಾಗ ದುರ್ಯೋಧನನನ್ನು ಆರಿಸದೆ ಇತರ ಯೋಧರ ಕಡೆಗೆ ತೆರಳಿದಳು. ದುರ್ಯೋಧನನಿಗೆ ಇದು ಅಪಮಾನವೆಂದೆನಿಸಿತು. ಬಲವಂತವಾಗಿ ತನ್ನ ಕೊರಳಿಗೆ ಸ್ವಯಂವರದ ಮಾಲೆಯನ್ನು ಹಾಕಿಸಿಕೊಂಡು ಆಕೆಯನ್ನು ತನ್ನ ಹೆಂಡತಿಯನ್ನಾಗಿ ಮಾಡಿಕೊಂಡನು. ದುರ್ಯೋಧನನ ಈ ಕೃತ್ಯದಿಂದ ಎಲ್ಲಾ ರಾಜರು ಕೋಪಗೊಂಡರು. ಆದರೆ ದುರ್ಯೋಧನನು ಎಲ್ಲಾ ಯೋಧರಿಗೆ ಯುದ್ಧಕ್ಕೆ ಸವಾಲು ಹಾಕಿದನು. ಇದರ ನಂತರ, ದುರ್ಯೋಧನನ ಸ್ನೇಹಿತ ಕರ್ಣ ಎಲ್ಲಾ ರಾಜರನ್ನು ಸೋಲಿಸಿದನು.

ಈ ರೀತಿಯಾಗಿ ಭಾನುಮತಿ ಬಲವಂತದಿಂದ ದುರ್ಯೋಧನನ ಹೆಂಡತಿಯಾದಳು. ಭಾನುಮತಿಯ ಮದುವೆ ಅಪಹರಣವಾದರೂ ಆಕೆ ತನ್ನ ಪತಿ ದುರ್ಯೋಧನನನ್ನು ಹೆಚ್ಚು ಪ್ರೀತಿಸುತ್ತಿದ್ದಳು ಎಂದು ಹೇಳಲಾಗುತ್ತದೆ. ಮದುವೆಯ ನಂತರ ಇಬ್ಬರು ಮಕ್ಕಳು ಜನಿಸಿದರು.

ಭಾನುಮತಿ ಕುಟುಂಬವನ್ನು ಉಳಿಸಿದ್ದು ಹೀಗೆ..
ಮಹಾಭಾರತ ಯುದ್ಧದ ಸಮಯದಲ್ಲಿ ಭಾನುಮತಿಯ ಮಗ ಲಕ್ಷ್ಮಣನನ್ನು ಅಭಿಮನ್ಯು ಕೊಂದನು. ಕೌರವರ ನಾಶ ಖಚಿತ ಎಂದು ಭಾನುಮತಿಗೆ ತಿಳಿದಿತ್ತು. ಆದ್ದರಿಂದ, ತನ್ನ ಕುಟುಂಬವನ್ನು ಉಳಿಸಲು, ಬುದ್ಧಿವಂತ ಭಾನುಮತಿ ತನ್ನ ಮಗಳನ್ನು ಕೃಷ್ಣನ ಮಗ ಸಾಂಬನಿಗೆ ಮದುವೆ ಮಾಡಿಸುವಲ್ಲಿ ರಹಸ್ಯ ಪಾತ್ರವನ್ನು ವಹಿಸಿದಳು.

ಮಹಾಭಾರತದ ಶಕುನಿಗಿತ್ತು ತಾಲಿಬಾನಿಗಳ ಅಫ್ಘಾನಿಸ್ತಾನದೊಂದಿಗೆ ನಂಟು!

ದುರ್ಯೋಧನನನ್ನು ಸೋಲಿಸಿದಳು
ಭಾನುಮತಿ ಆಟದಲ್ಲಿ ದುರ್ಯೋಧನನ ಜೊತೆ ಸೆಣಸಾಡುತ್ತಿದ್ದಳು, ಅದರಲ್ಲಿ ದುರ್ಯೋಧನನನ್ನು ಹಲವು ಬಾರಿ ಸೋಲಿಸಿದಳು ಎಂದು ಗಾಂಧಾರಿ ಸತಿ ಪರ್ವದಲ್ಲಿ ಹೇಳಿದ್ದಾಳೆ. ಮಹಾಭಾರತ ಯುದ್ಧದಲ್ಲಿ ದುರ್ಯೋಧನನ ಮರಣದ ನಂತರ ಭಾನುಮತಿ ಅರ್ಜುನನನ್ನು ಮದುವೆಯಾದಳು ಎಂದು ಹೇಳಲಾಗುತ್ತದೆ.

Latest Videos
Follow Us:
Download App:
  • android
  • ios