ಈ ರಾಶಿಗೆ ಧನಮೂಲ ಸಮೃದ್ಧಿಯಾಗಲಿದೆ: ಶುಭಕಾಲ
ಈ ರಾಶಿಗೆ ಧನಮೂಲ ಸಮೃದ್ಧಿಯಾಗಲಿದೆ: ಶುಭಕಾಲ
21-11-18 - ಬುಧವಾರ
ಶ್ರೀ ವಿಲಂಬಿ ನಾಮ ಸಂವತ್ಸರ
ದಕ್ಷಿಣಾಯನ
ಶರದೃತು
ಕಾರ್ತೀಕ ಮಾಸ
ಶುಕ್ಲ ಪಕ್ಷ
ತ್ರಯೋದಶಿ
ಅಶ್ವಿನಿ
ರಾಹುಕಾಲ : 12.05 ರಿಂದ 01.31
ಯಮಗಂಡ ಕಾಲ : 07.48 ರಿಂದ 09.14
ಗುಳಿಕ ಕಾಲ : 10.40 ರಿಂದ 12.05
ಈ ರಾಶಿಗೆ ಧನಮೂಲ ಸಮೃದ್ಧಿಯಾಗಲಿದೆ: ಶುಭಕಾಲ
ಮೇಷ ರಾಶಿ : ಇಂದು ನಿಮ್ಮ ಸಹೋದರಿ ಅಥವಾ ಸಹೋದರಿ ಭಾವದವರು ನಿಮ್ಮ ಸಹಾಯಕ್ಕೆ ಬರುತ್ತಾರೆ. ನಿಮ್ಮ ದಿನದ ಮುಖ್ಯ ಕಾರ್ಯದಲ್ಲಿ ಅವರ ಸಹಕಾರ ಇರಲಿದೆ. ಕುಜನರು ನಿಮ್ಮ ಧನ ವ್ಯಯಕ್ಕೆ ಕಾರಣವಾಗಬಹುದು ಎಚ್ಚರವಾಗಿರಿ.
ದೋಷಪರಿಹಾರ : ಕೆಂಪು ವಸ್ತ್ರ ದಾನ ಮಾಡಿ, ತೊಗರಿ ಬೇಳೆ ದಾನ ಮಾಡಿ
ವೃಷಭ : ಆತ್ಮೀಯರೇ ಇಂದು ನಿಮ್ಮ ಧನಮೂಲ ಸಮೃದ್ಧಿಯಾಗಲಿದೆ. ಆರೋಗ್ಯದಲ್ಲಿ ಏರುಪೇರಾಗುತ್ತದೆ, ನಿಮ್ಮ ಮಕ್ಕಳು ನಿಮ್ಮ ಮನಸ್ಸಿನ ಭಾವನೆಗಳನ್ನ ಹತಾಶೆ ಮಾಡುತ್ತಾರೆ. ಕಾಲಿನ ಭಾಗದಲ್ಲಿ ನೋವು ಕಾಣಿಸುವ ಸಾಧ್ಯತೆ ಇದೆ. ಶ್ರೀಸೂಕ್ತ ಪಾರಾಯಣ ಮಾಡಿಸಿ
ದೋಷ ಪರಿಹಾರ : ದುರ್ಗಾ ದೇವಸ್ಥಾನದಲ್ಲಿ ಕ್ಷೀರಾಭಿಷೇಕ ಮಾಡಿಸಿ
ಮಿಥುನ : ಆತ್ಮೀಯರೇ ಇಂದು ನಿಮ್ಮ ಮನಸ್ಸು ಸ್ವಲ್ಪ ಚಂಚಲವಾಗಲಿದೆ. ನಿಮ್ಮ ಸಂಗಾತಿಯಲ್ಲಿ ಹೆಚ್ಚಿನ ಆಸಕ್ತಿ, ನಿಮ್ಮ ಕಾರ್ಯ ಸ್ಥಳದಲ್ಲಿ ಅಸಹಕಾರ ಹಾಗೂ ಅನಾನುಕೂಲ ಉಂಟಾಗಲಿದೆ. ದಾಂಪತ್ಯದಲ್ಲಿ ಸ್ವಲ್ಪ ಭಿನ್ನಾಭಿಪ್ರಾಯವೂ ಇದೆ. ನಿಮ್ಮ ಮಕ್ಕಳು ನಿಮಗೆ ಅನುಕೂಲವಾಗುತ್ತಾರೆ.
ದೋಷ ಪರಿಹಾರ : ವಿಷ್ಣು ಸಹಸ್ರನಾಮ ಪಠಿಸಿ
ಕಟಕ : ಇಂದು ನಿಮ್ಮ ದೇಹಾರೋಗ್ಯ ವ್ಯತ್ಯಯವಾಗುತ್ತದೆ. ಅಷ್ಟೇ ಅಲ್ಲ ನಿಮ್ಮ ತಂದೆಯವರು ನಿಮ್ಮ ಆರೋಗ್ಯ ಕಾಳಜಿವಹಿಸಿ ಸಹಾಯ ಹಸ್ತ ಚಾಚುತ್ತಾರೆ. ನಿಮ್ಮ ಬಂಧುಗಳಲ್ಲಿ ಉತ್ತಮ ಬಾಂಧವ್ಯ ಮೂಡಿ ಸಹಾಯ ದೊರೆಯಲಿದೆ. ನಿಮ್ಮ ಸಹೋದರಿಯರು ಕಿರಿಕಿರಿಯನ್ನೂ ಮಾಡಲಿದ್ದಾರೆ. ಮಿಶ್ರಫಲ ಹೊಂದಲಿದ್ದೀರಿ.
ದೋಷ ಪರಿಹಾರ : ದುರ್ಗಾಸಪ್ತಶತಿ ಪಾರಾಯಣ ಮಾಡಿಸಿ
ಸಿಂಹ : ಇಂದು ನಿಮ್ಮ ಆತ್ಮಸ್ಥೈರ್ಯ ಕುಸಿಯಲಿದೆ. ನಿಮ್ಮ ಆತ್ಮೀಯ ಸ್ನೇಹಿತೆ ನಿಮ್ಮ ಧನವ್ಯಯಕ್ಕೆ ಕಾರಣರಾಗುತ್ತಾರೆ. ನಿಮ್ಮ ಸಹೋದರರು ನಿಮ್ಮ ಕಷ್ಟಕ್ಕೆ ನೆರವಾಗುತ್ತಾರೆ. ನಿಮ್ಮ ಆರೋಗ್ಯ ಕ್ಷೀಣವಾಗುವ ಮುನ್ನ ಭಾಸ್ಕರನ ಪ್ರಾರ್ಥನೆ ಮಾಡಿ.
ದೋಷ ಪರಿಹಾರ : ಶಿವನಿಗೆ ಗೋಧಿ ದಾನ ಮಾಡಿ
ಕನ್ಯಾ : ನಿಮ್ಮ ಸರ್ವ ಕಾರ್ಯಗಳೂ ಈಡೇರಿಲಿವೆ, ಯಾವುದಕ್ಕೂ ಹೆಚ್ಚು ಚಿಂತಿಸುವ ಪ್ರಮೇಯವಿಲ್ಲ. ನಿಮಗೆ ಬರಬೇಕಿದ್ದ ಹಣ ಮರಳಿ ಬರಲಿದೆ. ನಿಮ್ಮ ಮಕ್ಕಳಿಂದ ಸಿಹಿ ಸುದ್ದಿ ಬರಲಿದೆ. ಸಮಾಧಾನದ ದಿನ.
ದೋಷ ಪರಿಹಾರ : ವಿಷ್ಣು ದೇವಸ್ಥಾನಕ್ಕೆ ತುಳಸಿ ಮಾಲೆ ಸಮರ್ಪಣೆ ಮಾಡಿ
ತುಲಾ : ನಿಮ್ಮ ದೇಹಾರೋಗ್ಯ ವೃದ್ಧಿಯಾಗಲಿದೆ, ಸದ್ಗುರುಗಳ ದರ್ಶನವಾಗಲಿದೆ, ಆದರೆ ನೀವು ಸಂಚಾರ ಮಾಡುವಾಗ ಮಾತ್ರ ಎಚ್ಚರದಿಂದ ಇರಬೇಕಾಗುತ್ತದೆ. ವಾಹನ ಅಥವಾ ನಿಮ್ಮ ನಡಿಗೆಯಿಂದ ಎಡವಿ ಬೀಳುವ ಸಾಧ್ಯತೆ ಇದೆ. ಜಾಗ್ರತೆ ಇರಲಿ.
ದೋಷ ಪರಿಹಾರ : ಸುಮಂಗಲಿಯರಿಗೆ ವಸ್ತ್ರ ದಾನ ಮಾಡಿ
ವೃಶ್ಚಿಕ : ಇಂದು ನಿಮ್ಮ ಮಾತಿನಿಂದ ಕಾರ್ಯದಲ್ಲಿ, ಕುಟುಂಬದಲ್ಲಿ ಕಲಹವಾಗುವ ಸಾಧ್ಯತೆ ಇದೆ. ಆದಷ್ಟು ಕಡಿಮೆ ಮಾತಾಡಿದರೆ ಒಳಿತು. ನಿಮ್ಮ ಮನೆಯಲ್ಲಿ ಕಳ್ಳಕಾಕರ ಭಯ ಕಾಣಬಹುದು, ಮನೆ ಬೀಗ ಹಾಕುವಾಗ ಜಾಗ್ರತೆ ವಹಿಸಿ.
ದೋಷ ಪರಿಹಾರ : ನಾಗ ದೇವರ ಪ್ರಾರ್ಥನೆ ಮಾಡಿ
ಧನಸ್ಸು : ಇಂದು ನಿಮ್ಮ ಶರೀರದಲ್ಲಿ ಒಂದುವಿಧವಾದ ಪ್ರಯಾಸ, ಅಶಾಂತಿ ಕುಟುಂಬದಲ್ಲಿ ಅಸಹಕಾರ, ನೆಮ್ಮದಿ ಭಂಗ ಇತ್ಯಾದ ಬೇಸರ ಸಂಗತಿಗಳೇ ಇವೆ. ಆದರೆ ಜೊತೆಗೆ ಧನ ಲಾಭವೂ ಇದೆ. ಮಿಶ್ರಫಲ
ದೋಷ ಪರಿಹಾರ : ಗಾಣಗಾಪುರ ದತ್ತನ ದರ್ಶನ ಮಾಡಿ
ಮಕರ : ಇಂದು ನಿಮ್ಮ ಮನೆಯಲ್ಲಿ ಸಣ್ಣಮಟ್ಟದ ಕಲಹ ಸಂಭವಿಸಬಹುದು, ನಿಮ್ಮ ಆಲೋಚನೆಗಳಿಗೆ ವಿರುದ್ಧ ಅಭಿಪ್ರಾಯಬರಬಹುದು. ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಯವೂ ಆಗಿ ಶೀತಬಾಧೆ ಕಾಡಲಿದೆ. ಆದಷ್ಟು ಆಹಾರದಲ್ಲಿ ಜಾಗ್ರತೆ ಇರಲಿ.
ದೋಷ ಪರಿಹಾರ : ನಿಮ್ಮ ಕುಲದೇವತಾ ಆರಾಧನೆ ಮಾಡಿ
ಕುಂಭ : ಇಂದು ನಿಮ್ಮ ಮನಸ್ಸಿಗೆ ಉಲ್ಲಾಸದ ದಿನ, ನಿಮ್ಮ ಬಂಧುಗಳು ಹಾಗೂ ನಿಮ್ಮ ಮಕ್ಕಳು ನಿಮ್ಮ ಸಂತಸವನ್ನು ಇಮ್ಮಡಿಮಾಡಲಿದ್ದಾರೆ. ಆದರೆ ನೀವು ತೆಗೆದುಕೊಂಡ ನಿರ್ಧಾರಗಳು ಬದಲಾಗಲಿವೆ. ಅನುಕೂಲವೂ ಇದೆ.
ದೋಷ ಪರಿಹಾರ : ಶಿವನಿಗೆ ಭಸ್ಮಾಭಿಷೇಕ ಮಾಡಿಸಿ
ಮೀನ : ಇಂದು ನಿಮ್ಮ ಸುಖ ಇಮ್ಮಡಿಯಾಗಲಿದೆ. ತಾಯಿಯ ಸಹಕಾರ ಹೆಚ್ಚಾಗಿ ಲಭ್ಯವಾಗಲಿದೆ. ಬಂಧುಗಳ ಸಹಾಯದಿಂದ ನಿಮ್ಮ ಕಾರ್ಯ ಸುಲಭವಾಗಲಿದೆ. ಉತ್ತಮ ದಿನ. ಆದರೆ ನಿಮ್ಮ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಯವೂ ಇದೆ ಎಚ್ಚರವಾಗಿರಿ.
ದೋಷ ಪರಿಹಾರ : ದತ್ತಾತ್ರೇಯನಿಗೆ ಪಂಚಾಮೃತ ಅಭಿಷೇಕ ಮಾಡಿಸಿ.
ವಾಞ್ಮಯೀ.