Asianet Suvarna News Asianet Suvarna News

ವೃಷಭ : ಸಂತಾನ ಪ್ರಾಪ್ತಿಯಿಂದ ಈ ವರ್ಷ ಸಂತಸದಾಯಕ

ವಿದ್ವಾನ್ ಕಮಲಾಕರ್ ಭಟ್ ಅವರ ವಾರ್ಷಿಕ ದೀಪಾವಳಿ ಭವಿಷ್ಯದ ಪ್ರಕಾರ ವೃಷಭ ರಾಶಿ ಫಲಾ ಫಲ ಈ ವರ್ಷ ಹೇಗಿದೆ. 

Deepavali 2018 yearly kannada horoscope for every zodiac sign Taurus
Author
Bengaluru, First Published Nov 8, 2018, 2:21 PM IST

ವೃಷಭ  : ಸಂತಾನ ಪ್ರಾಪ್ತಿಯಿಂದ ಈ ವರ್ಷ ಸಂತಸದಾಯಕ

ವರ್ತಮಾನದಲ್ಲಿ ಅಷ್ಟಮಿ ಶನಿ ನಡೆಯುತ್ತಿದ್ದು, ಗುರುವಿನ ಪ್ರಭಾವದಿಂದ ಅನುಕೂಲವಾಗಲಿದೆ. ಮನೆ ನಿರ್ಮಾಣ ಅಥವಾ ಆಸ್ತಿ ಸಂಬಂಧಿತ ವಿಚಾರದಲ್ಲಿ ಸಮಾನತೆ. 

ಸಂತಾನ ಪ್ರಾಪ್ತಿಯಿಂದ ಮನೆಯಲ್ಲಿ ಸಂತಸ ಮೂಡಲಿದೆ. ಹೊಸ ವಾಹನ ಖರೀದಿ ಸಾಧ್ಯತೆ. ಬಂಧುಗಳ ಜತೆಗಿನ ಮನಸ್ತಾಪ ನಿವಾರಣೆ. ಸ್ಥಿರಾಸ್ತಿಯ ಲಾಭಾಂಶಗಳು ವರ್ಷಾಂತ್ಯಕ್ಕೆ ದೊರಕಲಿದ್ದು, ಹೊಸ ಯೋಜನೆ ಸಾಕಾರಗೊಳ್ಳಲಿದೆ. 

ಕಲಾವಿದರ ಜೀವನದಲ್ಲಿ ಹೊಸ ಅವಕಾಶಗಳು ಸಿಗಲಿದೆ. ಸರಕಾರಿ ನೌಕರರಿಗೆ ಮುಂಬಡ್ತಿ ದೊರಕಲಿದ್ದು, ಎಚ್ಚರ ತಪ್ಪಿದರೆ ತೊಂದರೆ ನಿಶ್ಚಿತ. ನ್ಯಾಯಿಕ ವ್ಯವಸ್ಥೆಯಲ್ಲಿ ಪರಿತಪಿಸುತ್ತಿರುವವರಿಗೆ ಸುಖಾಂತ್ಯ ದೊರೆಯಲಿದೆ. 

ಮಕ್ಕಳ ವಿದ್ಯಾಭ್ಯಾಸದಲ್ಲಿ ಅನುಕೂಲ ಕಾಣಲಿದ್ದೀರಿ. ಹಿತಶತ್ರುಗಳ ದಮನವಾಗಲಿದೆ. 2019 ಜೂನ್ ನಂತರ ಅಂದುಕೊಂಡ ಕಾರ್ಯದಲ್ಲಿ ಜಯ. ನಿಮ್ಮ ಹಾಗೂ ಕುಟುಂಬದ ಅನಾರೋಗ್ಯ ನಿವಾರಣೆ. ಜನವರಿ ಫೆಬ್ರವರಿ ತಿಂಗಳಲ್ಲಿ ಹೊಸ ಆಲೋಚನೆ ಆರಂಭ. ಹೆಣ್ಣು ಮಕ್ಕಳಿಗೆ ತವರು ಮನೆಯಿಂದ ಉಡುಗೊರೆ ಸಾಧ್ಯಯ. ಆಂತರಿಕ ವಿಚಾರಗಳನ್ನು ಸ್ನೇಹಿತರು, ಬಂಧುಗಳ ಕೊರತೆ ಹಂಚಿಕೊಳ್ಳದಿರಿ. 

ತೆಂಗು ವ್ಯಾಪಾರ, ಅಡಿಕೆ ಬೆಳೆಗಳಿಂದ ರೈತರಿಗೆ ಲಾಭ ಸಿಗಲಿದೆ. ಹಣಕಾಸಿನ ವಿಚಾರ ಬಗೆಹರೆಯಲಿದೆ. ಮುಕ್ಕಳ ವಿದ್ಯಾಭ್ಯಾಸದಲ್ಲಿ ಅಡೆತಡೆ ಸಾಧ್ಯತೆ.


ಶುಭ ಸಂಖ್ಯೆ: 8 16 21

ವಿದ್ವಾನ್ ಕಮಲಾಕರ ಭಟ್

Follow Us:
Download App:
  • android
  • ios