Asianet Suvarna News Asianet Suvarna News

ಈ ರಾಶಿಗೆ ದಿನದ ಅಂತ್ಯದಲ್ಲಿ ಶುಭ ಸುದ್ದಿಯೊಂದು ತಿಳಿಯಲಿದೆ

ಈ ರಾಶಿಗೆ ದಿನದ ಅಂತ್ಯದಲ್ಲಿ ಶುಭ ಸುದ್ದಿಯೊಂದು ತಿಳಿಯಲಿದೆ

Daily Bhavishya 23 January 2019
Author
Bengaluru, First Published Jan 23, 2019, 7:03 AM IST

ಈ ರಾಶಿಗೆ ದಿನದ ಅಂತ್ಯದಲ್ಲಿ ಶುಭ ಸುದ್ದಿಯೊಂದು ತಿಳಿಯಲಿದೆ

ಮೇಷ
ಆಗುವ ಕೆಲಸ ಆಗುತ್ತದೆಂದು ಸುಮ್ಮನೆ ಇದ್ದರೆ
ಯಾವುದು ಆಗದು. ಅದರಲ್ಲಿ ನಿಮ್ಮ ಶ್ರಮ
ವೂ ಇರಬೇಕು. ಆಗ ಮಾತ್ರ ಜಯ ಸಿಗುತ್ತದೆ.

ವೃಷಭ
ಬೆಂಕಿ ಬಗ್ಗೆ ಎಚ್ಚರ ಇರಲಿ. ಮನಸ್ಸಲ್ಲಿ ಭಯ,
ಆತಂಕವಿದ್ದಲ್ಲಿ ಅದನ್ನು ಧ್ಯಾನದಿಂದ ಮಾತ್ರ
ದೂರಾಗಿಸಲು ಸಾಧ್ಯ. ಮಕ್ಕಳಿಗೆ ಶುಭದಿನ

ಮಿಥುನ
ಮನುಷ್ಯನೂ ವಿಷ ಜಂತುವಿದ್ದಂತೆ. ಹಾಗಾಗಿ
ತಕ್ಷಣ ಯಾರನ್ನೂ ನಂಬದಿರುವುದು ಒಳಿತು.
ಮನೆಯಲ್ಲಿ ನೆಮ್ಮದಿ ಇರಲಿದೆ.

ಕಟಕ
ಇಷ್ಟು ದಿನ ನೀವು ಪ್ರಯತ್ನಿಸುತ್ತಿದ್ದ
ವಿಷಯದಲ್ಲಿ ಸಫಲರಾಗುವಿರಿ.
ಮನೆಯವರಿಂದ ಪ್ರಶಂಸೆಗೆ ಪಾತ್ರರಾಗುವಿರಿ.

ಸಿಂಹ
ಆರೋಗ್ಯದ ಕಡೆ ಗಮನವಿರಲಿ. ದೇಹಕ್ಕೆ
ಒಗ್ಗುವ ಆಹಾರ ಪದಾರ್ಥಗಳನ್ನು ಸೇವಿಸಿ.
ದಿನದಂತ್ಯದಲ್ಲಿ ಸಿಹಿ ಸುದ್ದಿ ಸಿಗಲಿದೆ. 

ಕನ್ಯಾ
ಇಂದು ತುಂಬಾ ಮೌನವಾಗಿರುವಿರಿ. ಆದರೆ
ಕೆಲಸ ಕಾರ್ಯಗಳಲ್ಲಿ ನಿರೀಕ್ಷೆಗಿಂತಲೂ ಹೆಚ್ಚು
ಯಶಸ್ಸು ಸಿಗಲಿದೆ. ಶುಭ ದಿನ.

ತುಲಾ
ಮಕ್ಕಳಿಗೆ ಓದಿನಲ್ಲಿ ಸ್ವಲ್ಪ ಅಡೆತಡೆ ಬಂದರೂ
ದಿನದಂತ್ಯದಲ್ಲಿ ನಿರಾಳರಾಗಿ ಪೂರ್ಣಗೊಳಿ
ಸುವಿರಿ. ಶ್ರಮದ ದಿನ ನಿಮ್ಮದಾಗುತ್ತದೆ.

ವೃಶ್ಚಿಕ
ಹೊಸ ಸ್ನೇಹಿತರು ಸಿಗಲಿದ್ದು, ಹಳೆಯ
ಸ್ನೇಹಿತರ ಭೇಟಿ ಸಾಧ್ಯತೆ. ಪುರುಷರಿಗೆ
ಆರೋಗ್ಯದಲ್ಲಿ ವ್ಯತ್ಯಯ ಸಾಧ್ಯತೆ. 

ಧನುಸ್ಸು
ದೂರದ ಪ್ರಯಾಣದಿಂದ ಆಯಾಸವಾಗಲಿದೆ.
ಮಹತ್ವದ ವಿಚಾರವಗಳನ್ನು ಮನೆಯವರ
ಜೊತೆ ಸೇರಿ ನಿರ್ಧರಿಸಿದರೆ ಒಳಿತು.

ಮಕರ
ಕೆಲಸ ಕಾರ್ಯಗಳಲ್ಲಿ ಗಡಿಬಿಡಿ ಬೇಡ. ಎಲ್ಲಾ
ಕಾರ್ಯ ಸುಗಮವಾಗಿ ಆಗಲಿದೆ. ತಲೆಕೆಡಿಸಿ
ಕೊಂಡರೆ ಆರೋಗ್ಯದಲ್ಲಿ ಏರುಪೇರಾಗಲಿದೆ.

ಕುಂಭ
ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ.
ದಿನದಂತ್ಯದಲ್ಲಿ ಧನಲಾಭ. ಮಕ್ಕಳಿಂದ
ಮನೆಯಲ್ಲಿ ನೆಮ್ಮದಿ. ಮಕ್ಕಳಿಗೆ ಶುಭ ದಿನ.

ಮೀನ 
ಸಿಟ್ಟಿನ ಕೈಯಲ್ಲಿ ಬುದ್ಧಿ ಕೊಡದಿರಿ. ಅತಿಯಾದ
ಸಿಟ್ಟಿನಿಂದ ಸಂಬಂಧದಲ್ಲಿ ಬಿರುಕು ಸಾಧ್ಯ.
ಆದಷ್ಟು ಸಂಗೀತ ಕೇಳಿ ನಿರಾಳರಾಗಿ.

Follow Us:
Download App:
  • android
  • ios