ರಾಜಿ ಆಗಿದ್ದಕ್ಕೇ ಉರುಳಿಬಿತ್ತಾ ರಾಜ ಕಿರೀಟ? 3ನೇ ತಲೆಮಾರಿಗೆ ಕರಗಿತಾ ಶಿವಸೇನೆ?
- ಉದ್ಧವ್ ಮಾಡಿಕೊಂಡ ಆ ಎಡವಟ್ಟೇನು ಗೊತ್ತಾ..?
- ಸಿದ್ಧಾಂತ ಕೈಬಿಟ್ಟು `ಕೈ' ಜೋಡಿಸಿದ್ದೇ ತಪ್ಪಾಯ್ತಾ!?
- ನಾಲ್ಕೇ ದಿನಕ್ಕೆ ಒಬ್ಬಂಟಿಯಾದರಾ ಬಾಳ್ ಠಾಕ್ರೆ ಮಗ.?
ಮಹಾರಾಷ್ಟ್ರದಲ್ಲಿ ರಾಜಕೀಯ ಮಹಾಸಂಗ್ರಾಮವೇ ಶುರುವಾಗಿದೆ.ಶಿವಸೇನೆಯ ಹಿರಿಯ ನಾಯಕ, ಸಚಿವ ಏಕನಾಥ ಶಿಂಧೆ ಬಂಡಾಯದ ಬಾವುಟ ಬೀಸಿದ್ದಾರೆ. ಬರೀ ಶಿಂಧೆ ಮಾತ್ರವೇ ಅಲ್ಲ, ಅವರ ಹಿಂದೆ ಮಿನಿ ಸೇನೆಯೇ ಇದೆ,.. ಇವರೆಲ್ಲರೂ ರಾಜೀನಾಮೆ ಕೊಟ್ರೆ, ಕೈಎತ್ತಿದ್ರೆ ಸರ್ಕಾರ ಪತನವಾಗೋದೇ ಗ್ಯಾರೆಂಟಿ.ಬಾಳ್ ಠಾಕ್ರೆ ಯಾವ ಅಧಿಕಾರ ಬೇಡ್ವೇ ಬೇಡ ಅಂತ ಕೂತಿದ್ರೋ, ಅದೇ ಅಧಿಕಾರದ ಆಸೆಗೆ ಬಿದ್ದು ಉದ್ಧವ್ ಠಾಕ್ರೆ ಪದ್ಮವ್ಯೂಹದಲ್ಲಿ ಸಿಲುಕಿಕೊಂಡಂತೆ ಕಾಣ್ತಾ ಇದೆ.ನಿಜಕ್ಕೂ ಕಣ್ಮರೆಯಾಗಲಿದೆಯಾ ಉದ್ಧವ್ ಠಾಕ್ರೆ ನೆತ್ತಿ ಮೇಲಿನ ಕಿರೀಟ..?