ಬೆಂಗಳೂರು: ಒಂದೇ ಏರಿಯಾಗೆ ಸಿಎಂ ಸಿಟಿ ರೌಂಡ್ ಸೀಮಿತ..!
* ಬಿಜೆಪಿ ಶಾಸಕ ಸತೀಶ್ ರೆಡ್ಡಿ ಕ್ಷೇತ್ರದಲ್ಲಷ್ಟೇ ಸಿಎಂ ರೌಂಡ್ಸ್
* ಬೆಂಗಳೂರಿನಲ್ಲಿ ಮಳೆಯಿಂದಾಗಿ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ಕೊಡ್ತೇನೆ ಅಂತ ಸಜ್ಜಾಗಿದ್ದ ಸಿಎಂ
* ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಮಳೆ ಹಾನಿ ಬಗ್ಗೆ ಸಿಎಂ ಪರಿಶೀಲನೆ
ಬೆಂಗಳೂರು(ಅ.18): ಒಂದೇ ಏರಿಯಾಗೆ ಸೀಮಿತವಾಯ್ತು ಸಿಎಂ ಸಿಟಿ ರೌಂಡ್ಸ್. ಬಿಜೆಪಿ ಶಾಸಕ ಸತೀಶ್ ರೆಡ್ಡಿ ಕ್ಷೇತ್ರದಲ್ಲಷ್ಟೇ ಸಿಎಂ ಬಸವರಾಜ ಬೊಮ್ಮಾಯಿ ರೌಂಡ್ಸ್ ಹೊಡೆದಿದ್ದಾರೆ. ಬೆಂಗಳೂರಿನಲ್ಲಿ ಮಳೆಯಿಂದಾಗಿ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ಕೊಡ್ತೇನೆ ಅಂತ ಸಿಎಂ ಸಜ್ಜಾಗಿದ್ದರು. ಆದರೆ, ಅವರ ಸಿಟಿ ರೌಂಡ್ಸ್ ಕೇವಲ ಒಂದೇ ಕ್ಷೇತ್ರಕಷ್ಟೇ ಸೀಮಿತವಾಗಿದೆ. ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಮಳೆ ಹಾನಿ ಬಗ್ಗೆ ಸಿಎಂ ಪರಿಶೀಲನೆ ನಡೆಸಿದ್ದಾರೆ.