ಪಾಕಿಸ್ತಾನದಲ್ಲಿ ಸಿಖ್ ಯುವಕನ ಬರ್ಬರ ಹತ್ಯೆ!
ಪೇಶಾವರದಲ್ಲಿ ಸಿಖ್ ಯುವಕನ ಬರ್ಬರ ಹತ್ಯೆ| ನಾನಕಾನ ಘಟನೆ ಬೆನ್ನಲ್ಲೇ, ಸಿಖ್ ಯುವಕನ ಹತ್ಯೆ| ಘಟನೆ ಕುರಿತು ಭಾರತದ ಖಂಡನೆ, ಕ್ರಮಕ್ಕೆ ಆಗ್ರಹ
ಪೇಶಾವರ/ನವದೆಹಲಿ[ಜ.06]: ಪಾಕಿಸ್ತಾನದಲ್ಲಿರುವ ಸಿಖ್ ಧರ್ಮ ಸಂಸ್ಥಾಪಕ ಗುರುನಾನಕ್ ಅವರ ಜನ್ಮ ಸ್ಥಳ ನಾನಕಾನ ಸಾಹಿಬ್ನಲ್ಲಿ ಸಿಖ್ಖರ ಮೇಲಿನ ದಾಳಿಯ ಬೆನ್ನಲ್ಲೇ, ಪಾಕ್ನ ಪೇಶಾವರದಲ್ಲಿ ಸಿಖ್ ಯುವಕನೊಬ್ಬನನ್ನು ಭಾನುವಾರ ಹತ್ಯೆಗೈಯಲಾಗಿದೆ. ಈ ಘಟನೆ ಬಗ್ಗೆ ತೀವ್ರವಾಗಿ ಖಂಡಿಸಿರುವ ಭಾರತ, ಈ ದುಷ್ಕೃತ್ಯವೆಸಗಿದವರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪಾಕ್ ಸರ್ಕಾರವನ್ನು ಆಗ್ರಹಿಸಿದೆ.
ನಾನಕ್ ಜನ್ಮಸ್ಥಳಕ್ಕೆ ದಾಳಿ :ಪಾಕ್ ವಿರುದ್ಧ ಸಿಡಿದ ಸಿಖ್ಖರು!
ಹತ್ಯೆಗೀಡಾದ ಸಂತ್ರಸ್ತನನ್ನು ರವೀಂದರ್ ಸಿಂಗ್(25) ಎಂದು ಗುರುತಿಸಲಾಗಿದೆ. ಈತ ಪಾಕಿಸ್ತಾನದ ಮೊದಲ ಸಿಖ್ ಸಮುದಾಯದ ಸುದ್ದಿ ವಾಚಕ ಹರ್ಮಿತ್ ಸಿಂಗ್ರ ಸಹೋದರ. ಖೈಬರ್ ಪಖ್ತೂಂಖ್ವಾದಲ್ಲಿರುವ ವಾಸವಿರುವ ರವೀಂದರ್, ತನ್ನ ಮದುವೆಯ ವಸ್ತುಗಳ ಖರೀದಿಗಾಗಿ ಪೇಶಾವರಕ್ಕೆ ಆಗಮಿಸಿದ್ದ. ಈ ಸಂದರ್ಭದಲ್ಲಿ, ಅಪರಿಚಿತ ವ್ಯಕ್ತಿಯಿಂದ ಬರ್ಬರವಾಗಿ ಕೊಲೆಗೀಡಾಗಿದ್ದಾನೆ.
ಈ ನಡುವೆ ಸಿಖ್ ಯುವಕನ ಹತ್ಯೆಯನ್ನು ಭಾರತ ತೀವ್ರವಾಗಿ ಖಂಡಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ಇಲಾಖೆ ವಕ್ತಾರರು, ‘ಗುರಿಯಾಗಿಸಿಕೊಂಡು ನಡೆಸುವ ಇಂಥ ಪ್ರಚಲಿತ ಘಟನೆಗಳಿಗೆ ತಕ್ಷಣವೇ ಪಾಕಿಸ್ತಾನ ಕಡಿವಾಣ ಹಾಕಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ವಿಭಜನೆಯ ಗಾಯಕ್ಕೆ ಸಿಎಎ ಮುಲಾಮು: ಓವರ್ ಟು ರಾಜೀವ್ ಚಂದ್ರಶೇಖರ್!
ಪಾಕ್ ಗುರುನಾನಕ್ ಸಾಹೀಬ್ ಗುರುದ್ವಾರದ ಬಳಿ ಕಲ್ಲು ತೂರಟ: ವಿಡಿಯೋ!