Asianet Suvarna News Asianet Suvarna News

ಪಾಕಿಸ್ತಾನದಲ್ಲಿ ಸಿಖ್‌ ಯುವಕನ ಬರ್ಬರ ಹತ್ಯೆ!

ಪೇಶಾವರದಲ್ಲಿ ಸಿಖ್‌ ಯುವಕನ ಬರ್ಬರ ಹತ್ಯೆ| ನಾನಕಾನ ಘಟನೆ ಬೆನ್ನಲ್ಲೇ, ಸಿಖ್‌ ಯುವಕನ ಹತ್ಯೆ| ಘಟನೆ ಕುರಿತು ಭಾರತದ ಖಂಡನೆ, ಕ್ರಮಕ್ಕೆ ಆಗ್ರಹ

After Nankana Sahib attack Sikh man killed in Pakistan Peshawar
Author
Bangalore, First Published Jan 6, 2020, 8:56 AM IST

ಪೇಶಾವರ/ನವದೆಹಲಿ[ಜ.06]: ಪಾಕಿಸ್ತಾನದಲ್ಲಿರುವ ಸಿಖ್‌ ಧರ್ಮ ಸಂಸ್ಥಾಪಕ ಗುರುನಾನಕ್‌ ಅವರ ಜನ್ಮ ಸ್ಥಳ ನಾನಕಾನ ಸಾಹಿಬ್‌ನಲ್ಲಿ ಸಿಖ್ಖರ ಮೇಲಿನ ದಾಳಿಯ ಬೆನ್ನಲ್ಲೇ, ಪಾಕ್‌ನ ಪೇಶಾವರದಲ್ಲಿ ಸಿಖ್‌ ಯುವಕನೊಬ್ಬನನ್ನು ಭಾನುವಾರ ಹತ್ಯೆಗೈಯಲಾಗಿದೆ. ಈ ಘಟನೆ ಬಗ್ಗೆ ತೀವ್ರವಾಗಿ ಖಂಡಿಸಿರುವ ಭಾರತ, ಈ ದುಷ್ಕೃತ್ಯವೆಸಗಿದವರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪಾಕ್‌ ಸರ್ಕಾರವನ್ನು ಆಗ್ರಹಿಸಿದೆ.

ನಾನಕ್‌ ಜನ್ಮಸ್ಥಳಕ್ಕೆ ದಾಳಿ :ಪಾಕ್‌ ವಿರುದ್ಧ ಸಿಡಿದ ಸಿಖ್ಖರು!

ಹತ್ಯೆಗೀಡಾದ ಸಂತ್ರಸ್ತನನ್ನು ರವೀಂದರ್‌ ಸಿಂಗ್‌(25) ಎಂದು ಗುರುತಿಸಲಾಗಿದೆ. ಈತ ಪಾಕಿಸ್ತಾನದ ಮೊದಲ ಸಿಖ್‌ ಸಮುದಾಯದ ಸುದ್ದಿ ವಾಚಕ ಹರ್ಮಿತ್‌ ಸಿಂಗ್‌ರ ಸಹೋದರ. ಖೈಬರ್‌ ಪಖ್ತೂಂಖ್ವಾದಲ್ಲಿರುವ ವಾಸವಿರುವ ರವೀಂದರ್‌, ತನ್ನ ಮದುವೆಯ ವಸ್ತುಗಳ ಖರೀದಿಗಾಗಿ ಪೇಶಾವರಕ್ಕೆ ಆಗಮಿಸಿದ್ದ. ಈ ಸಂದರ್ಭದಲ್ಲಿ, ಅಪರಿಚಿತ ವ್ಯಕ್ತಿಯಿಂದ ಬರ್ಬರವಾಗಿ ಕೊಲೆಗೀಡಾಗಿದ್ದಾನೆ.

ಈ ನಡುವೆ ಸಿಖ್‌ ಯುವಕನ ಹತ್ಯೆಯನ್ನು ಭಾರತ ತೀವ್ರವಾಗಿ ಖಂಡಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ಇಲಾಖೆ ವಕ್ತಾರರು, ‘ಗುರಿಯಾಗಿಸಿಕೊಂಡು ನಡೆಸುವ ಇಂಥ ಪ್ರಚಲಿತ ಘಟನೆಗಳಿಗೆ ತಕ್ಷಣವೇ ಪಾಕಿಸ್ತಾನ ಕಡಿವಾಣ ಹಾಕಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ವಿಭಜನೆಯ ಗಾಯಕ್ಕೆ ಸಿಎಎ ಮುಲಾಮು: ಓವರ್ ಟು ರಾಜೀವ್ ಚಂದ್ರಶೇಖರ್!

ಪಾಕ್ ಗುರುನಾನಕ್ ಸಾಹೀಬ್ ಗುರುದ್ವಾರದ ಬಳಿ ಕಲ್ಲು ತೂರಟ: ವಿಡಿಯೋ!

Follow Us:
Download App:
  • android
  • ios