ಮಳೆಗಾಲ ಆರಂಭವಾದ ತಕ್ಷಣ ಮನೆಯಲ್ಲಿರುವ ವಸ್ತುಗಳು ಮಾತ್ರವಲ್ಲ, ಅಡುಗೆ ಸಾಮಗ್ರಿಗಳು, ಆಹಾರ ಪದಾರ್ಥಗಳಿಗೂ ಸಹ ಬೂಸ್ಟ್ ಹಿಡಿಯಲು ಪ್ರಾರಂಭವಾಗುತ್ತದೆ.
ಕೆಲವರಿಗೆ ಇದು ದೊಡ್ಡ ತಲೆನೋವೇ ಸರಿ. ಆದರೆ ನಮ್ಮ ದವಸ ಧಾನ್ಯಗಳು, ಆಹಾರಕ್ಕೆ ಎಂದಿಗೂ ಬೂಸ್ಟ್ ಹಿಡಿದಂತೆ ನೋಡಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ.
ಮಳೆಗಾಲ ಮಾತ್ರವಲ್ಲ, ಯಾವುದೇ ಸೀಸನ್ ಆದರೂ ನಾವು ಯಾವುದೇ ಕಾರಣಕ್ಕೂ ಎಂದಿಗೂ ಒದ್ದೆಯಾದ ಕೈಗಳಿಂದ ಆಹಾರವನ್ನು ಮುಟ್ಟಬಾರದು. ಬೂಸ್ಟ್ ಹಿಡಿಯಲು ಇದು ಸಹ ಪ್ರಮುಖ ಕಾರಣ.
ನೀವು ಹೆಚ್ಚೆಚ್ಚು ಡ್ರೈ ಫ್ರೂಟ್ಸ್ ಅನ್ನು ಬಳಸುತ್ತಿದ್ದರೆ ಬೂಸ್ಟ್ ಅಥವಾ ಶಿಲೀಂಧ್ರದಿಂದ ರಕ್ಷಿಸಲು ಒಣಹಣ್ಣುಗಳ ಮಧ್ಯೆ ಲವಂಗವೊಂದನ್ನು ಇರಿಸಿ ಸಾಕು.
ಹಿಟ್ಟು, ಬೇಳೆಕಾಳುಗಳು, ಅಕ್ಕಿ, ಮಸಾಲೆಗಳು ಇತ್ಯಾದಿಗಳಿಗೆ ಬೇವಿನ ಎಲೆಗಳನ್ನು ಹಾಕಿಟ್ಟರೆ ಬೂಸ್ಟ್ ಹಿಡಿಯುವುದಿಲ್ಲ.
ಸಾಧ್ಯವಾದಷ್ಟು ನೀರು, ಶೀತ ವಾತವರಣದಿಂದ ರೇಶನ್ ದೂರವಿರಲಿ. ಆಗ ಬೂಸ್ಟ್ ಹಿಡಿಯುವುದಿಲ್ಲ.
ಮಳೆಗಾಲದಲ್ಲಿ ಡ್ರೈಫ್ರೂಟ್ಸ್, ಬೇಳೆ, ಅಕ್ಕಿ ಇತ್ಯಾದಿಗಳನ್ನು ಫ್ರೀಜರ್ನಲ್ಲಿ ಸಂಗ್ರಹಿಸಬಹುದು.
ಮಳೆಗಾದಲ್ಲಿ ಬೇಕರಿ ಉತ್ಪನ್ನಗಳು ಬೇಗ ಹಾಳಾಗುತ್ತವೆ. ಆದ್ದರಿಂದ ಬ್ರೆಡ್ ಅನ್ನು ಫ್ರಿಡ್ಜ್ನಲ್ಲಿ ಇರಿಸಿ.
ಯಾವುದೇ ಪದಾರ್ಥಗಳಾಗಲಿ ಮಳೆಗಾಲದಲ್ಲಿ ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಿ.
ನೆನಪಿಡಿ, ನಿಮ್ಮ ಆಹಾರದಲ್ಲಿ ಬೂಸ್ಟ್ ಕಂಡುಬಂದರೆ ಅದನ್ನು ತಕ್ಷಣವೇ ಎಸೆಯಿರಿ.