Kannada

ಭೂಮಿ ಅಗೆವಾಗ ಹಾವು ಕಂಡ್ರೆ

ಭೂಮಿಯನ್ನು ಅಗೆಯುವ ಸಮಯದಲ್ಲಿ ಜೀವಂತ ಹಾವು ಹೊರಬಂದರೆ ಅದನ್ನು ಕೆಟ್ಟ ಶಕುನ ಎಂದು ಪರಿಗಣಿಸಬೇಕು. ವಾಸ್ತು ಪ್ರಕಾರ, ಜೀವಂತ ಹಾವು ಕಟ್ಟಡ ನಿರ್ಮಾಣದಲ್ಲಿ ಅಪಘಾತದ ಬಗ್ಗೆ ಮಾಹಿತಿ ನೀಡುತ್ತದೆ. 

Kannada

ಇಲಿಗಳ ಸಂಖ್ಯೆ ಹೆಚ್ಚಾದರೆ

ವಾಸ್ತು ಪ್ರಕಾರ, ಮನೆಯಲ್ಲಿ ಕಪ್ಪು ಇಲಿಗಳ ಸಂಖ್ಯೆ ಇದ್ದಕ್ಕಿದ್ದಂತೆ ಹೆಚ್ಚಾದರೆ, ಅದು ಹಠಾತ್ ವಿಪತ್ತಿನ ಸಂಕೇತವಾಗಿದೆ.

Kannada

ಮನೆಯಲ್ಲಿ ಇರುವೆಗಳು ಗುಂಪುಗೂಡಿದ್ರೆ

ವಾಸ್ತು ಪ್ರಕಾರ ಕಪ್ಪು ಇರುವೆಗಳು ಗುಂಪುಗುಂಪಾಗಿ ತಿರುಗಾಡುವ ಮನೆಯಲ್ಲಿ ಸುಖ, ಐಶ್ವರ್ಯ ಹೆಚ್ಚುತ್ತದೆ. ಆದರೆ ಕೆಂಪು ಇರುವೆಗಳು ಹೀಗೆ ತಿರುಗಾಡಿದರೆ ದೊಡ್ಡ ನಷ್ಟ ಅಥವಾ ತೊಂದರೆ ಆಗುವ ಸಂಪೂರ್ಣ ಸಾಧ್ಯತೆ ಇದೆ.

Kannada

ಕಲ್ಲಿನ ಭೂಮಿಯಲ್ಲಿ ಮನೆ ನಿರ್ಮಿಸಿದ್ರೆ

ವಾಸ್ತು ನಿಯಮಗಳ ಪ್ರಕಾರ, ಹೆಚ್ಚು ಕಲ್ಲಿನ ಭೂಮಿಯಲ್ಲಿ ನಿರ್ಮಿಸಲಾದ ಕಟ್ಟಡದಲ್ಲಿ ವಾಸಿಸುವ ಜನರು ಸಾಮಾನ್ಯವಾಗಿ ಕೆಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

Kannada

ನಿವೇಶನದಲ್ಲಿ ಮೂಳೆ ಸಿಕ್ಕಿದ್ರೆ

ವಾಸ್ತು ಶಾಸ್ತ್ರದ ಪ್ರಕಾರ, ಯಾವುದೇ ಭೂಮಿಯನ್ನು ಅಗೆಯುವಾಗ ಮೂಳೆ ಅಥವಾ ಬೂದಿ ಅಲ್ಲಿ ಸಿಕ್ಕಿದರೆ, ಅಲ್ಲಿ ಯಾವುದೇ ಕೆಲಸವನ್ನು ಶಾಂತಿ ಪೂಜೆ ಇತ್ಯಾದಿ ಮಾಡಿದ ನಂತರವೇ ಮುಂದುವರಿಸಬೇಕು.