ಸಾಮಾನ್ಯವಾಗಿ ನಾವು ದೇವಸ್ಥಾನಕ್ಕೆ ಹೋದಾಗ, ಅಲ್ಲಿ ದೇವರಿಗೆ ನಮಸ್ಕರಿಸಿ ಪೂಜೆ ಮಾಡಿದ ಬಳಿಕ ದೇವಾಲಯದ ಒಳಗೆ ಸ್ವಲ್ಪ ಹೊತ್ತು ಕುಳಿತು ಧ್ಯಾನ ಮಾಡುತ್ತೇವೆ.
ಇನ್ನೂ ಕೆಲವರು ದೇವಾಲಯದ ಮೆಟ್ಟಿಲುಗಳ ಮೇಲೆ ಕುಳಿತು ಧ್ಯಾನ ಮಾಡುತ್ತಿರುವ ಅನೇಕ ಜನರನ್ನು ನೀವು ನೋಡಿರಬೇಕು.
ಆದರೆ ದೇವಸ್ಥಾನದ ಮೆಟ್ಟಿಲುಗಳ ಮೇಲೆ ಸ್ವಲ್ಪ ಹೊತ್ತು ಕುಳಿತರೆ ಶಾಂತಿ ಮಾತ್ರ ಸಿಗೋದಲ್ಲ, ಇದರ ಜೊತೆಗೆ ಹಲವಾರು ಲಾಭಗಳು ನಿಮಗೆ ಸಿಗಲಿವೆ ಎಂದು ನಿಮಗೆ ತಿಳಿದಿದೆಯೇ?
ದೇವಾಲಯದ ಶಿಖರಗಳು ದೇವರ ವಿಗ್ರಹದ ಮುಖಗಳಾಗಿವೆ ಎಂದು ಹೇಳಲಾಗುತ್ತದೆ. ಹಾಗಾಗಿಯೇ ದೇಗುಲದ ಶಿಖರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.
ಇನ್ನೂ ದೇಗುಲದ ಮೆಟ್ಟಿಲುಗಳನ್ನು ದೇವರ ಚರಣ ಪಾದುಕೆ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಆ ಜಾಗವನ್ನು ತುಂಬಾನೆ ಪವಿತ್ರವಾದ ಜಾಗ ಎನ್ನಲಾಗುವುದು.
ಮೆಟ್ಟಿಲುಗಳ ಮೇಲೆ ಕುಳಿತು ಇಷ್ಟದೇವರನ್ನು ಸ್ಮರಿಸುವುದರಿಂದ ಇಷ್ಟಾರ್ಥಗಳು ಈಡೇರುತ್ತವೆ. ದೇವರ ಕೃಪಾಕಟಾಕ್ಷವು ನಿಮ್ಮ ಮೇಲೆ ಇರುತ್ತದೆ.
ದೇವಾಲಯದ ಮೆಟ್ಟಿಲುಗಳ ಮೇಲೆ ಕುಳಿತು ಮಂತ್ರವನ್ನು ಪಠಿಸಬೇಕು. ಅನಾಯಾಸೇನ್ ಮರಣಂ ವಿನದೈನ್ಯೇನ ಜೀವನಮ್ । ದೇಹಾನ್ತೇ ತವ ಸಾನ್ನಿಧ್ಯಮ್ ದೇಹಿ ಮೇ ಪರಮೇಶ್ವರಮ್ ॥ ಈ ಮಂತ್ರ ಪಠಿಸಿ.
ಇದರರ್ಥ ನೋವು ಇಲ್ಲದ ಸಾವು, ನಮ್ರತೆಯಿಂದ ತುಂಬಿದ ಜೀವನ ಮತ್ತು ದೇವರ ಸನ್ನಿಧಿಯಲ್ಲಿ ಸಾವು ಬರುವಂತಾಗಲಿ ಎನ್ನುವ ಮಂತ್ರವನ್ನು ಪಠಿಸಿ. .
ದುರಾದೃಷ್ಟ ನಿವಾರಿಸಿ ಅದೃಷ್ಟ ನಿಮ್ಮದಾಗಿಸಿಕೊಳ್ಳಲು ಲವಂಗ ಹೀಗೆ ಬಳಸಿ
ಸಮಯ ನಿರ್ವಹಣೆ ಮಾಡಲು ಚಾಣಕ್ಯ ನೀಡಿದ ಟಿಪ್ಸ್
ದೀಪ ದಿಕ್ಕು ತಪ್ಪಿದ್ರೆ ನಷ್ಟ! ಸರಿಯಾದ ದಿಕ್ಕು ಯಾವದು?
ಈ ಮರಗಳ ಬಳಿ ದೀಪ ಹಚ್ಚಿದ್ರೆ ಮನೆಗೆ ಬರುತ್ತದೆ ಧನವರ್ಷೆ!