Asianet Suvarna News Asianet Suvarna News

ಬ್ರೇನ್‌ವಾಶ್‌ಗೆ ಯುವಕರೇ ಟಾರ್ಗೆಟ್, ಪಾಕಿಸ್ತಾನ ಸೇನೆಯಿಂದ ತರಬೇತಿ, ಪಾಖಂಡಿ ಪಾಕಿಗಳು!

 ಭಾರತದಲ್ಲಿ ನಡೆಯುವ ಭಯೋತ್ಪಾದನಾ ಕೃತ್ಯಗಳಲ್ಲಿನ ಪಾಕಿಸ್ತಾನ ಸರ್ಕಾರ, ಸೇನೆ ಮತ್ತು ಗುಪ್ತಚರ ಸಂಸ್ಥೆ ಐಎಸ್‌ಐನ ಕೈವಾಡ ಇಡೀ ಜಗತ್ತಿನ ಮುಂದೆ ಮತ್ತೊಮ್ಮೆ ಅನಾವರಣವಾಗಿದೆ. 

ನವದೆಹಲಿ (ಅ. 02): ಭಾರತದಲ್ಲಿ ನಡೆಯುವ ಭಯೋತ್ಪಾದನಾ ಕೃತ್ಯಗಳಲ್ಲಿನ ಪಾಕಿಸ್ತಾನ ಸರ್ಕಾರ, ಸೇನೆ ಮತ್ತು ಗುಪ್ತಚರ ಸಂಸ್ಥೆ ಐಎಸ್‌ಐನ ಕೈವಾಡ ಇಡೀ ಜಗತ್ತಿನ ಮುಂದೆ ಮತ್ತೊಮ್ಮೆ ಅನಾವರಣವಾಗಿದೆ. ಜಮ್ಮು ಮತ್ತು ಕಾಶ್ಮೀರದ ಉರಿ ವಲಯದಲ್ಲಿ ಭಾರತೀಯ ಸೇನೆ ಕೈಗೆ ಸಿಕ್ಕಿಬಿದ್ದ ಪಾಕಿಸ್ತಾನದ ಮೂಲದ ಉಗ್ರ ಅಲಿ ಬಾಬರ್‌ ಪತ್ರ ಪಾಕಿಸ್ತಾನದ ಬಣ್ಣವನ್ನು ಬಯಲು ಮಾಡಿದ್ದಾನೆ. 

ಪಾಕ್‌ ಸರ್ಕಾರ, ಸೇನೆ ಮತ್ತು ಗುಪ್ತಚರ ಸಂಸ್ಥೆಗಳು ಹೇಗೆ ಅಬಲರು, ಅಸಹಾಯಕರನ್ನು ದಿಕ್ಕು ತಪ್ಪಿಸಿ ಉಗ್ರರನ್ನಾಗಿ ಪರಿವರ್ತಿಸಿ ಭಾರತದ ಮೇಲೆ ದಾಳಿಗೆ ಪ್ರಚೋದಿಸುತ್ತಿವೆ ಎಂಬುದನ್ನು ಅಲಿ ಬಾಬರ್‌ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ. ಜೊತೆಗೆ ಪಾಕ್‌ ಸೇನೆಯ ಸಹಾಯವಿಲ್ಲದೇ ಯಾವುದೇ ವ್ಯಕ್ತಿ ಕೂಡಾ ಪಾಕ್‌ ಗಡಿ ದಾಟಿ ಭಾರತಕ್ಕೆ ಪ್ರವೇಶಿಸುವುದು ಸಾಧ್ಯವಿಲ್ಲ ಎಂದು ಖಚಿತಪಡಿಸುವ ಮೂಲಕ ಉಗ್ರ ಚಟುವಟಿಕೆಯಲ್ಲಿ ಅಲ್ಲಿನ ಸೇನೆಯ ಪಾತ್ರವನ್ನು ಸಾಬೀತುಪಡಿಸಿದ್ದಾನೆ.

Video Top Stories