ದಾವೋಸ್ನಲ್ಲಿ ಸದ್ಗುರು- ಸಿಎಂ ಬೊಮ್ಮಾಯಿ ಭೇಟಿ: ಮಂಡಿನೋವು ವಿಚಾರಿಸಿದ ಸದ್ಗುರು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸದ್ಗುರು ಜಗ್ಗಿ ವಾಸುದೇವ್ ಅವರನ್ನು ದಾವೋಸ್ನಲ್ಲಿ ಭೇಟಿಯಾಗಿದ್ದಾರೆ.
ದಾವೋಸ್ (ಮೇ 23): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಸದ್ಗುರು ಜಗ್ಗಿ ವಾಸುದೇವ್ (Sadguru) ಅವರನ್ನು ದಾವೋಸ್ನಲ್ಲಿ ಭೇಟಿಯಾಗಿದ್ದಾರೆ. ಹವಾಮಾನ ಬದಲಾವಣೆ ಕುರಿತ ಗೋಷ್ಠಿಗೂ ಮುನ್ನ ಸಿಎಂ ಭೇಟಿಯಾಗಿದ್ದಾರೆ. ಈ ವೇಳೆ ಜಗ್ಗಿ ವಾಸುದೇವ್ ಸಿಎಂ ಆರೋಗ್ಯದ ವಿಚಾರಿಸಿದ್ದಾರೆ. ಸಿಎಂ ಕುಂಟುವುದನ್ನು ನೋಡಿ ಏನಾಗಿದೆ ಎಂದು ಜಗ್ಗಿ ವಾಸುದೇವ್ ಕೇಳಿದ್ದಾರೆ. ಸಿಎಂ ತಮ್ಮ ಮಂಡಿ ನೋವಿನ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾರೆ. ಈ ವೇಳೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ.ಮುರುಗೇಶ್ ನಿರಾಣಿ(Murugesh Nirani) ಕೂಡ ಉಪಸ್ಥಿತರಿದ್ದರು.
ಇದನ್ನೂ ಓದಿ: ಹಿಂದಿಯಲ್ಲಿ ಮೋದಿಗೆ ಸ್ವಾಗತ ಕೋರಿದ ಜಪಾನಿ ಬಾಲಕ, ಭಾಷಾಪ್ರೇಮಕ್ಕೆ ನಮೋ ಫಿದಾ!