ಕೋವಿಡ್ 19: ಭಾರತಕ್ಕೂ ಗುಡ್ನ್ಯೂಸ್ ಸಿಗುವ ಕಾಲ ಸನ್ನಿಹಿತ..!
ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಕೊರೋನಾ ವೈರಸ್ನಿಂದ ಸಂಪೂರ್ಣ ನಲುಗಿ ಹೋಗಿದ್ದ ಯುರೋಪ್ ಖಂಡದಲ್ಲಿ ಈಗ ಪರಿಸ್ಥಿತಿ ನಿರೀಕ್ಷೆಗೂ ಮೀರಿದ ರೀತಿಯಲ್ಲಿ ಸುಧಾರಣೆಯಾಗಿದೆ. ಸೋಂಕಿತರು ಹಾಗೂ ಸಾವಿನ ಸಂಖ್ಯೆ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಿದೆ. ಯಾವುದೇ ದೇಶದಲ್ಲಿ ಕೊರೋನಾ ತನ್ನ ಗರಿಷ್ಠ ಮಟ್ಟತಲುಪಿದ ಬಳಿಕ ಅದರ ಉಗ್ರ ಪ್ರತಾಪ ಕಡಿಮೆಯಾಗುತ್ತದೆ ಎಂಬ ವಿಜ್ಞಾನಿಗಳು, ವೈದ್ಯರ ವಾದಕ್ಕೆ ಈ ಬೆಳವಣಿಗೆ ಪೂರಕವಾಗಿದೆ. ಹೀಗಾಗಿ, ಭಾರಿ ಪ್ರಮಾಣದಲ್ಲಿ ಸೋಂಕು ವರದಿಯಾಗುತ್ತಿರುವ ಭಾರತಕ್ಕೆ ಯುರೋಪ್ ಖಂಡ ಈಗ ಆಶಾಕಿರಣವಾಗಿ ಗೋಚರಿಸತೊಡಗಿದೆ.
ಬೆಂಗಳೂರು (ಜು. 09): ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಕೊರೋನಾ ವೈರಸ್ನಿಂದ ಸಂಪೂರ್ಣ ನಲುಗಿ ಹೋಗಿದ್ದ ಯುರೋಪ್ ಖಂಡದಲ್ಲಿ ಈಗ ಪರಿಸ್ಥಿತಿ ನಿರೀಕ್ಷೆಗೂ ಮೀರಿದ ರೀತಿಯಲ್ಲಿ ಸುಧಾರಣೆಯಾಗಿದೆ. ಸೋಂಕಿತರು ಹಾಗೂ ಸಾವಿನ ಸಂಖ್ಯೆ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಿದೆ.
ಕೊರೋನಾ ಗೆದ್ದ 107ರ ವೃದ್ಧೆ..! ಕೋವಿಡ್-19ನಿಂದ ಚೇತರಿಸಿದ ದೇಶದ ಅತಿ ಹಿರಿಯ ವ್ಯಕ್ತಿ
ಯಾವುದೇ ದೇಶದಲ್ಲಿ ಕೊರೋನಾ ತನ್ನ ಗರಿಷ್ಠ ಮಟ್ಟತಲುಪಿದ ಬಳಿಕ ಅದರ ಉಗ್ರ ಪ್ರತಾಪ ಕಡಿಮೆಯಾಗುತ್ತದೆ ಎಂಬ ವಿಜ್ಞಾನಿಗಳು, ವೈದ್ಯರ ವಾದಕ್ಕೆ ಈ ಬೆಳವಣಿಗೆ ಪೂರಕವಾಗಿದೆ. ಹೀಗಾಗಿ, ಭಾರಿ ಪ್ರಮಾಣದಲ್ಲಿ ಸೋಂಕು ವರದಿಯಾಗುತ್ತಿರುವ ಭಾರತಕ್ಕೆ ಯುರೋಪ್ ಖಂಡ ಈಗ ಆಶಾಕಿರಣವಾಗಿ ಗೋಚರಿಸತೊಡಗಿದೆ. ಹಾಗಾದರೆ ಭಾರತದಲ್ಲಿಯೂ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಾ? ಎನ್ನುವ ಆಶಾಕಿರಣವೊಂದು ಗೋಚರಿಸುತ್ತಿದೆ.