
ಸಿಎಂ ಸಿದ್ದರಾಮಯ್ಯ ಪದೇ ಪದೇ ತಾಳ್ಮೆ ಕಳೆದುಕೊಳ್ಳೋದ್ಯಾಕೆ? ಸಿದ್ದು ಸಿಟ್ಟಿನ ಗುಟ್ಟು!
ಸಿಟ್ಯಾಕೆ ಸಿಡುಕ್ಯಾಕೆ ಸಿದ್ರಾಮಣ್ಣ..? ನೀವ್ ಮಾಡಿದ್ದು ಸರೀನಾ..? ಸಿಎಂ ಸಿದ್ದರಾಮಯ್ಯ ಪದೇ ಪದೇ ತಾಳ್ಮೆ ಕಳೆದುಕೊಳ್ಳೋದ್ಯಾಕೆ..? ಕೋಪವೋ.. ಹತಾಶೆಯೋ.. ಆಕ್ರೋಶವೋ.. ಸಿದ್ದು ಸಿಟ್ಟಿನ ಗುಟ್ಟು..! ಗಟ್ಟಿನಾಯಕನಿಗೆ.. ಪಟ್ಟದ ಪೈಲ್ವಾನನಿಗೆ ಯಾಕಿಂಥಾ ಸಿಟ್ಟು..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಸಿಟ್ಯಾಕೆ ಸಿದ್ರಾಮಣ್ಣ..?
ಸಹನೆ ಕಳೆದುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಟ್ಟದ್ದು ರಾಜ್ಯದ ಜನ ಸಿಟ್ಟಾಗುವಂಥಾ ಹೆಜ್ಜೆ. ಅವತ್ತು ಐಎಎಸ್ ಅಧಿಕಾರಿ, ಇವತ್ತು ಐಪಿಎಸ್ ಅಧಿಕಾರಿ.. ತುಂಬಿದ ಸಭೆಯಲ್ಲೇ ಅವಮಾನ.. ಹಾಗಾದ್ರೆ ಈ ಕೋಪ, ಈ ಸಿಟ್ಟು, ಈ ಸೆಡವು ಯಾಕೆ ಸಿದ್ರಾಮಣ್ಣ..?