ಹಣ, ಕೀರ್ತಿ ಬೇಕಿಲ್ಲ,ಆಸೆಗಳೇ ಇಲ್ಲ, ಸುದೀಪ್ ವೈರಾಗ್ಯ! ಸ್ವಾತಿಮುತ್ತು ಹೀಗಾಗೋದಕ್ಕೆ ಅಸಲಿ ಕಾರಣ ಏನು?

ಕಿಚ್ಚ ಸುದೀಪ್​ ತಮಗೆ ಬಂದ ಅತ್ಯುತ್ತಮ ನಟ ರಾಜ್ಯಪ್ರಶಸ್ತಿಯನ್ನ ನಿರಾಕರಿಸಿದ್ದಾರೆ. ಇನ್ಮುಂದೆ ನನಗೆ ಪ್ರಶಸ್ತಿಗಳೇ ಬೇಡ ಅಂದಿದ್ದಾರೆ. ಕೆಲ ದಿನಗಳ ಹಿಂದೆ ತುಮಕೂರು ಯುನಿವರ್ಸಿಟಿ ಕೊಟ್ಟಿದ್ದ ಡಾಕ್ಟರೇಟ್​​ ಅನ್ನೂ ಸುದೀಪ್ ನಿರಾಕರಿಸಿದ್ರು. ಬಿಗ್ ಬಾಸ್​​ ಶೋನಿಂದಾನೂ ಹೊರಬಂದಿದ್ದಾರೆ. ಹಾಗಾದ್ರೆ ಕಿಚ್ಚನಿಗೆ ಏನಾಗಿದೆ? ಹಣ, ಕೀರ್ತಿಗಳ ಆಸೆಯೇ ಹೊರಟು ಹೋಗಿದೆಯಾ? ವೈರಾಗ್ಯ ಬಂದಿದೆಯಾ?  ಸುದೀಪ್ ಹೀಗಾಗೋದಕ್ಕೆ ಅಸಲಿ ಕಾರಣ ಏನು? ಇಲ್ಲಿದೆ ನೋಡಿ ಆ ಕುರಿತ ಎಕ್ಸ್​​ಕ್ಲೂಸಿವ್ ಸ್ಟೋರಿ.

Mahmad Rafik  | Published: Jan 25, 2025, 10:53 AM IST

ಸುದೀಪ್ ಕಳೆದ 28 ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ. ನಟ, ನಿರ್ದೇಶಕ, ನಿರ್ಮಾಪಕನಾಗಿ ಹಲವು ಅದ್ಭುತ ಚಿತ್ರಗಳನ್ನ ಕೊಟ್ಟಿದ್ದಾರೆ. ಇಡೀ ಭಾರತೀಯ ಸಿನಿರಂಗದಲ್ಲಿ ಅಭಿನಯ ಚಕ್ರವರ್ತಿ ಅಂತ ಗುರುತಿಸಿಕೊಂಡು ಕನ್ನಡಕ್ಕೆ ಹೆಮ್ಮೆ ತಂದಿದ್ದಾರೆ. ಸೋ ಸುದೀಪ್​ಗೆ ಡಾಕ್ಟರೇಟ್ ಕೊಟ್ಟಿದ್ದು ಕೂಡ ಸೂಕ್ತವಾಗೇ ಇತ್ತು. ಆದ್ರೆ ಇದನ್ನೂ ಸುದೀಪ್ ನಿರಾಕರಿಸಿದ್ರು. ನನಗಿಂತ ಹೆಚ್ಚು ಅರ್ಹರಾಗಿರೋರು ಹಲವರು ನಮ್ಮ ನಡುವೆ ಇದ್ದಾರೆ ಅವರಿಗೆ ಈ ಡಾಕ್ಟರೇಟ್ ಕೊಡಿ ಅಂದುಬಿಟ್ಟಿದ್ರು.