ಜಮೀನು ವಿವಾದ, ನಡುರಸ್ತೆಯಲ್ಲೇ ಬಡಿದಾಟ ಮಹಿಳೆಯರಿಗೇ ದೊಣ್ಣೆಯಿಂದ ಥಳಿತ
ಉತ್ತರ ಪ್ರದೇಶದ ಸುಲ್ತಾನ್ಪುರದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ಮಧ್ಯೆ ಹೊಡೆದಾಟ ನಡೆದಿದೆ. ನಡುರಸ್ತೆಯಲ್ಲೇ ಎರಡು ಕಡೆಯವರು ಕಿತ್ತಾಡಿಕೊಂಡಿದ್ದು, ಹೆಣ್ಣು ಮಕ್ಕಳು ಎಂಬುವುದನ್ನು ಕೂಡ ನೋಡದೇ ಕಲ್ಲು ದೊಣ್ಣೆಗಳಿಂದ ಹಲ್ಲೆ ಮಾಡಿದ್ದಾರೆ.
ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಆರಂಭವಾದ ಜಗಳ ನಂತರ ಕೊಲೆ ಹಲ್ಲೆಯಲ್ಲಿ ಅಂತ್ಯವಾದ ಹಲವು ಘಟನೆಗಳನ್ನು ನಾವು ಈಗಾಗಲೇ ನೋಡಿದ್ದೇವೆ. ಹಾಗೆಯೇ ಉತ್ತರ ಪ್ರದೇಶದ ಸುಲ್ತಾನ್ಪುರದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ಮಧ್ಯೆ ಹೊಡೆದಾಟ ನಡೆದಿದೆ. ನಡುರಸ್ತೆಯಲ್ಲೇ ಎರಡು ಕಡೆಯವರು ಕಿತ್ತಾಡಿಕೊಂಡಿದ್ದು, ಹೆಣ್ಣು ಮಕ್ಕಳು ಎಂಬುವುದನ್ನು ಕೂಡ ನೋಡದೇ ಕಲ್ಲು ದೊಣ್ಣೆಗಳಿಂದ ಹಲ್ಲೆ ಮಾಡಿದ್ದಾರೆ. ಈ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ನಂತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆದ ವಿಡಿಯೋ ನೋಡಿ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.