ಜೆಡಿಎಸ್ ಕೋಟಾನೋ? ಕಾಂಗ್ರೆಸ್ ಕೋಟಾನೋ? ಸಚಿವ ನಾಗೇಶ್ ಜಾಣ ಉತ್ತರ!
ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟಕ್ಕೆ ಇಬ್ಬರು ಪಕ್ಷೇತರರು | ಮುಳಬಾಗಲು ಶಾಸಕ ಎಚ್. ನಾಗೇಶ್ ಮತ್ತು ರಾಣೆಬೆನ್ನೂರು ಶಾಸಕ ಆರ್. ಶಂಕರ್ | ಯಾವ ಪಕ್ಷದ ಕೋಟಾದಲ್ಲಿ ಸಚಿವ ಸ್ಥಾನ?
ಬೆಂಗಳೂರು (ಜೂ. 14): ಹಲವಾರು ನಿರೀಕ್ಷೆ, ಊಹಾಪೋಹ ಮತ್ತು ಕಸರತ್ತುಗಳ ಬಳಿಕ ಮೈತ್ರಿ ಸರ್ಕಾರದ ಸಚಿವ ಸಂಪುಟ ಕೊನೆಗೂ ವಿಸ್ತರಣೆಯಾಗಿದೆ. ಇಬ್ಬರು ಪಕ್ಷೇತರ ಶಾಸಕರು ಎಚ್.ಡಿ. ಕುಮಾರಸ್ವಾಮಿ ಸಚಿವ ಸಂಪುಟದಲ್ಲಿ ಸ್ಥಾನ ಗಳಿಸಲು ಯಶಸ್ವಿಯಾಗಿದ್ದಾರೆ.
ಮುಳಬಾಗಲು ಶಾಸಕ ಎಚ್. ನಾಗೇಶ್ ಮತ್ತು ರಾಣೆಬೆನ್ನೂರು ಶಾಸಕ ಆರ್. ಶಂಕರ್ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇಬ್ಬರೂ ಪಕ್ಷೇತರ ಶಾಸಕರಾಗಿರುವ ಹಿನ್ನೆಲೆಯಲ್ಲಿ, ಇವರಿಬ್ಬರಿಗೆ ಮಂತ್ರಿಗಿರಿ ಸಿಕ್ಕಿರೋದು ಕಾಂಗ್ರೆಸ್ ಕೋಟಾದಲ್ಲೋ, ಜೆಡಿಎಸ್ ಕೋಟಾದಲ್ಲೋ ಎಂಬ ಬಗ್ಗೆ ಚರ್ಚೆ ಶುರುವಾಗಿದೆ.
ಕ್ಯಾಬಿನೆಟ್ ದರ್ಜೆಯ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ನಾಗೇಶ್ ಸುವರ್ಣನ್ಯೂಸ್ ಜೊತೆ ಮಾತನಾಡಿದರು. ಹೊಸ ಜವಾಬ್ದಾರಿ, ರಾಜಕೀಯ ವಿದ್ಯಮಾನಗಳ ಬಗ್ಗೆ, ಕಾಂಗ್ರೆಸ್-ಜೆಡಿಎಸ್ ಸಂಬಂಧಗಳ ಬಗ್ಗೆ ಅವರೇನು ಹೇಳಿದ್ರು ನೋಡೋಣ ಈ ಸ್ಟೋರಿಯಲ್ಲಿ....