Asianet Suvarna News Asianet Suvarna News

ಕಾಡಿನ ಮಧ್ಯೆ ಹಾಳಾದ ಬಸ್ ಜೊತೆ ಒಬ್ಬಳೇ ಲೇಡಿ ಕಂಡಕ್ಟರ್! ಮುಂದೆ ನಡೆದದ್ದು ಇದು...

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಘಟಕ ಬಸ್ಸಿನ ಲೇಡಿ‌ ಕಂಡಕ್ಟರ್ ವೀಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಾಡಿನ ಮಧ್ಯ ಪಂಕ್ಚರ್ ಆದ ಬಸ್ಸಿಗೆ, ಡಿಪೋ ಮ್ಯಾನೇಜರ್ ಒಂದು ಚಕ್ರ ಮಾತ್ರ ಕಳುಹಿಸಿಕೊಟ್ಟಿದ್ದಾರೆ. ಬಸ್ಸಿನ ಟೂಲ್ ಬಾಕ್ಸ್ ಓಪನ್ ಆಗ್ತಿಲ್ಲ, ಅದನ್ನು ಬದಲಿಸಲು ಟೂಲ್ಸ್ ಆಗಲಿ,  ಮೆಕಾನಿಕ್ ನನ್ನಾಗಲಿ ಕಳುಹಿಸಿಲ್ಲ ಎಂದು ಆಕೆ ಅಳಲು ತೋಡಿಕೊಂಡಿದ್ದಾರೆ.

ಕಾರವಾರ (ನ.06): ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಘಟಕ ಬಸ್ಸಿನ ಲೇಡಿ‌ ಕಂಡಕ್ಟರ್ ವೀಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

ಕಾಡಿನ ಮಧ್ಯ ಪಂಕ್ಚರ್ ಆದ ಬಸ್ಸಿಗೆ, ಡಿಪೋ ಮ್ಯಾನೇಜರ್ ಒಂದು ಚಕ್ರ ಮಾತ್ರ ಕಳುಹಿಸಿಕೊಟ್ಟಿದ್ದಾರೆ. ಬಸ್ಸಿನ ಟೂಲ್ ಬಾಕ್ಸ್ ಓಪನ್ ಆಗ್ತಿಲ್ಲ, ಅದನ್ನು ಬದಲಿಸಲು ಟೂಲ್ಸ್ ಆಗಲಿ,  ಮೆಕಾನಿಕ್ ನನ್ನಾಗಲಿ ಕಳುಹಿಸಿಲ್ಲ ಎಂದು ಆಕೆ ಅಳಲು ತೋಡಿಕೊಂಡಿದ್ದಾರೆ.

ಮೆಕ್ಯಾನಿಕ್ ಕರೆತರಲು ಡ್ರೈವರ್ ಯಲ್ಲಾಪುರ ಡಿಪೋಗೆ ಹೋಗಿದ್ದು, ಕಾಡಿನ‌ ಮಧ್ಯೆ ಬಸ್ ಜೊತೆ ತಾನೊಬ್ಬಳೇ ಉಳಿದಿದ್ದೇನೆ. ತನ್ನ ಜೀವಕ್ಕೆ ಏನಾದ್ರು ಆದ್ರೆ ಡಿಪೋ‌ ಮ್ಯಾನೇಜರ್ ಹೊಣೆ ಎಂದು ಆಕೆ ಹೇಳಿದ್ದಾರೆ. 

ಇದನ್ನೂ ಓದಿ | ಮಾವನ ಸಾವಿನ ಸುದ್ದಿಯೂ ಗೊತ್ತಾಗ್ಲಿಲ್ಲ..ಯಾದಗಿರಿ ಕಂಡಕ್ಟರ್ ಕಣ್ಣೀರ ಕತೆ...

ನವೆಂಬರ್ 06ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ;
 

Video Top Stories