Asianet Suvarna News Asianet Suvarna News

ಅನಿರುದ್ಧ ಸರ್‌ಗೆ ಬಹಿಷ್ಕಾರ ಒಪ್ಪಲ್ಲ, ಅದು ಶುದ್ಧ ತಪ್ಪು, ಕೆಟ್ಟ ಎಕ್ಸಾಂಪಲ್: ಫ್ಯಾನ್ಸ್‌ ಆಕ್ರೋಶ

ಕನ್ನಡ ಕಿರುತೆರೆಯಿಂದ 2 ವರ್ಷಗಳ ಕಾಲ ಅನಿರುದ್ಧ್  ಅವರನ್ನು ಬಹಿಷ್ಕರಿಸಿರುವುದಕ್ಕೆ  ಅವರ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.  

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಜೊತೆ ಜೊತೆಯಲಿ’ ಧಾರಾವಾಹಿಯ ಆರ್ಯವರ್ಧನ್ ಪಾತ್ರಧಾರಿ ಅನಿರುದ್ಧ್ ಹಾಗೂ ನಿರ್ದೇಶಕ ಆರೂರು ಜಗದೀಶ್ ಮಧ್ಯೆ ಭಿನ್ನಾಭಿಪ್ರಾಯ ತಾರಕಕ್ಕೇರಿದೆ. ಅನಿರುದ್ಧ್ ವಿರುದ್ಧ ಆರೂರು ಜಗದೀಶ್ ಆರೋಪ ಮಾಡಿದ ಪರಿಣಾಮ, ಕನ್ನಡ ಕಿರುತೆರೆಯಿಂದ 2 ವರ್ಷಗಳ ಕಾಲ ಅನಿರುದ್ಧ್  ಅವರನ್ನು ಬಹಿಷ್ಕರಿಸಲಾಗಿದೆ.  ಅನಿರುದ್ಧ್ ಅವರನ್ನ ಹೊರಗಿಟ್ಟಿದ್ದಕ್ಕೆ ಅವರ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.  ಹೊಟ್ಟೆಕಿಚ್ಚಿನಿಂದ ಈ ರೀತಿ ಮಾಡಿದ್ದಾರೆ.  ಸೀರಿಯಲ್ ಫೇಮಸ್‌ ಆಗೋದು ಆ್ಯಕ್ಟಿಂಗ್‌ನಿಂದ ಮಾತ್ರ, ಹೀಗಾಗಿ ಅನಿರುದ್ಧ್ ಅವರನ್ನ ಬಾಯ್ಕಾಟ್‌ ಮಾಡೋದು ಅನ್ಯಾಯ ಅಂತ ಅನಿರುದ್ಧ್  ಅಭಿಮಾನಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Video Top Stories