Asianet Suvarna News Asianet Suvarna News

ಜೀವ ಬೆದರಿಕೆ ಮತ್ತು ನಿಂದನೆ ಆರೋಪ, ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ ಸ್ಪಷ್ಟನೆ

 ಕಾಮಿಡಿ ಗ್ಯಾಂಗ್ ರಿಯಾಲಿಟಿ ಶೋ ರನ್ನರ್‌ ಸೋಮಶೇಖರ್‌ ಗೆ ಜೀವ ಬೆದರಿಕೆ ಮತ್ತು ನಿಂದನೆ ಆರೋಪ ಕೇಳಿಬಂದಿರುವ ಹಿನ್ನೆಲೆ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ನಟಿ ನಯನಾ ಪ್ರತಿಕ್ರಿಯೆ ನೀಡಿದ್ದಾರೆ.

ಜೀವ ಬೆದರಿಕೆ ಮತ್ತು ನಿಂದನೆ ಆರೋಪ ಕೇಳಿಬಂದಿರುವ ಹಿನ್ನೆಲೆ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ನಟಿ ನಯನಾ ಪ್ರತಿಕ್ರಿಯೆ ನೀಡಿದ್ದಾರೆ. ಕಾಮಿಡಿ ಕಿಲಾಡಿ ಗ್ಯಾಂಗ್ಸ್ ಕಾರ್ಯಕ್ರಮದಲ್ಲಿ ಸೋಮಶೇಖರ್ ಗೆ ಹಣ ಹಾಕಿ ಕಾರ್ಯಕ್ರಮ ನಡೆಸೋದು ಚಾನೆಲ್. ಆದರೆ ಸೋಮಶೇಖರ್ ಹಣವನ್ನ ತಂಡದ ಸದಸ್ಯರಿಗೆ ಹಂಚಿಲ್ಲ. ಆ ಸದಸ್ಯರಲ್ಲಿ ನನ್ನ ಸ್ನೇಹಿತರಾದ ಅನೀಶ್ ಮತ್ತು ಚಿದಾನಂದ್ ಇದ್ದಾರೆ. ಸೋಮಶೇಖರ್ ಕೂಡ ನನ್ನ ಸ್ನೇಹಿತ. ಹೀಗಾಗಿ ಚಿದಾನಂದ್ ಹಾಗು ಅನೀಶ್ ಗೆ ಹಣ ಕೊಡು ಅಂತ ಕೇಳಿದ್ದೇನೆ. ನಾನು ಕೂಡ ಸೋಮಶೇಖರ್ ಗೆ ಕಷ್ಟ ಅಂತ ಕೇಳಿದ್ದಕ್ಕೆ ಹಣ ಕೊಟ್ಟಿದ್ದೇನೆ. ಆದರೆ ನನಗೂ ಹಣ ಕೊಡದೆ ಆಟ ಆಡಿಸುತ್ತಿದ್ದಾರೆ. ನಾನು ಹಣಕ್ಕಾಗಿ ಕೇಳಿದ್ರೆ ಯಾವುದೇ ಪ್ರತಿಕ್ರಿಯೆ ಕೊಡುತ್ತಿಲ್ಲ. ಸ್ನೇಹಿತರಿಗೋಸ್ಕರ ನಾನು ಸೋಮಶೇಖರ್ ಜೊತೆ ಮಾತಾಡಿದ್ದು, ಬೈದಿದ್ದು ನಿಜ. ಎಷ್ಟು ದಿನ ಅಂತ ಕಾಯಬೇಕು. ನನಗೂ ತಾಳ್ಮೆ ಇದೆ. ಆ ತಾಳ್ಮೆಯ ಲಿಮಿಟ್ಸ್ ಮೀರಿದ್ದಕ್ಕೆ ಬೈದಿದ್ದೇನೆ. ಜೋರು ಬೆದರಿಕೆ ಹಾಕಿ ಕೊಲೆ ಮಾಡುವಷ್ಟು ಧೈರ್ಯ ನನಗಿಲ್ಲ. ತಾಳ್ಮೆ ಕೆಟ್ಟು ಕೆಟ್ಟ ಪದಗಳಿಂದ ಮಾತಾಡಿದೆ. ನನ್ನ ಮಾತಿಗಿಂತ ಕೆಟ್ಟದಾಗಿ ಮಾತಾಡೋರು ಇರ್ತಾರೆ. ನಾನು ಫ್ರೆಂಡ್ ಅಂತ ಮಾತಾಡಿದೆ. ಸೋಮಶೇಖರ್ ಗೆ ಸ್ನೇಹಿತರೆಲ್ಲಾ ಸೇರಿ ಕೈ ಸಾಲ ಕೊಟ್ಟಿದ್ದೇವೆ. ಬೆಂಗಳೂರಲ್ಲಿ ಹೇಗೆ ಓಡಾಡ್ತಿಯಾ ಅಂತ ನಾನು ಹೇಳಿದ್ದು ನಿಜ. ಕೆಲಸ ಮಾಡುವಾಗ ಮಾವು ಕೆಟ್ಟದಾಗಿ ಬೈಸಿಕೊಂಡಿದ್ದೇವೆ ಹಾಗಂತ ಪೊಲೀಸ್ ದೂರು ಕೊಡೋಕೆ ಆಗುತ್ತಾ? ದುಡ್ಡು ಕೇಳಿ ಕೇಳಿ ಸಾಕಾಗಿ ತಾಳ್ಮೆ ಕೆಟ್ಟು ಬೈದಿದ್ದೇನೆ. ನಾನೇನಾದ್ರು ತಪ್ಪಿದ್ದರೆ ನಾನು ಅವನ ಕಾಲಿಗೆ ಕ್ಷಮೆ ಕೇಳುತ್ತೇನೆ. ಆದರೆ ಅವನು ನನಗೆ ಮಾಡಿರೋ ಮಾನಹಾನಿಗೆ ನಾನೇನು ಮಾಡಲಿ..?  ತುಂಬಾ ದಿಮಾಕು ದೌಲತ್ತಲ್ಲಿ ಮಾತಾಡ್ತಾನೆ. ನಾನು ಸೆಲೆಬ್ರೆಟಿ ಅನ್ನೂದು ಬಿಟ್ಟು ಮಾತಾಡಿದ್ದೇನೆ. ಯಾಕಂದ್ರೆ ನಮಗೂ ಕಷ್ಟ ಇದೆ. ಇಷ್ಟು ದಿನ ತಡೆದುಕೊಂಡು‌ ಬಂದಿದ್ದೆ ಇನ್ಮುಂದೆ ನಮ್ಮ ದುಡ್ಡು ಸಿಗೋ ವರೆಗು ಬಿಡುವುದಿಲ್ಲ.